ಮಧುಗಿರಿ ಎಸ್ ಬಿಐ ಬ್ಯಾಂಕಿನಲ್ಲಿಯೇ ಸೆಕ್ಯೂರಿಟಿ ಆತ್ಮಹತ್ಯೆಗೆ ಶರಣು
ತುಮಕೂರು, ಜೂನ್ 27 : ಎಸ್ ಬಿಐ ಬ್ಯಾಂಕ್ ಸೆಕ್ಯೂರಿಟಿಯೊಬ್ಬರು ಬ್ಯಾಂಕಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತುಮಕೂರು ಜಿಲ್ಲೆಯ ಮಧುಗಿರಿಯ ಎಸ್ ಬಿಐ ಬ್ಯಾಂಕಿನಲ್ಲಿ ನಡೆದಿದೆ.
ವೆಂಕಟೇಶಯ್ಯ (50) ಎನ್ನುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಜಿ ಯೋಧ ಆಗಿರುವ ಮೃತ ವೆಂಕಟೇಶಯ್ಯ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದರು.
ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
English summary
A SBI bank security venkateshaiah (50) commits commits suicide on Tuesday by hanging himself in Madhugiri SBI bank.
Story first published: Tuesday, June 27, 2017, 13:23 [IST]