ಚಿಂಗಾಮ್ ತಿಂಗಳ 5 ದಿನದ ಪೂಜೆಗೆ ಬಾಗಿಲು ತೆರೆದ ಶಬರಿಮಲೆ ದೇಗುಲ
ತಿರುವನಂತಪುರಂ, ಆಗಸ್ಟ್ 17: ಮಲಯಾಳಂ ಪಂಚಾಂಗದ ಪ್ರಕಾರ ಮೊದಲ ತಿಂಗಳ (ಆಗಸ್ಟ್) ಶುಭ ಚಿಂಗಾಮ್ನಲ್ಲಿ ಐದು ದಿನ ಪೂಜೆ ಮಾಡುವ ಸಂಬಂಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಬಾಗಿಲನ್ನು ಮಂಗಳವಾರ ತೆರೆಯಲಾಗಿದೆ. ಪೂಜೆಗೆಂದು ಭಕ್ತರ ದಂಡು ದೇವಾಲಯದತ್ತ ಧಾವಿಸುತ್ತಿದೆ.
ದೇವಾಲಯದಲ್ಲಿ ಚಿಂಗಾಮ್ ಶುಭ ತಿಂಗಳ ಐದು ದಿನ ಮಾಸಿಕ ಪೂಜೆ-ಪುನಸ್ಕಾರಗಳು ಮತ್ತು ಆಚರಣೆಗಳು ನಡೆಯಲಿವೆ. ಹೀಗಾಗಿ ಮಂಗಳವಾರ ಸಂಜೆ 5 ಗಂಟೆ ಹೊತ್ತಿಗೆ ಪ್ರಧಾನ ಅರ್ಚಕರಾದ (ತಂತ್ರಿ) ಕಂದಾರಿ ರಾಜೀಯವರು ಮತ್ತು ಮೇಲ್ಶಾಂತಿ ಪರಮೇಶ್ವರನ್ ನಂಬೂದಿರಿ ಅವರು ಗರ್ಭಗುಡಿಯ ಬಾಗಿಲು ತೆರೆದರು. ದೇಗುಲಗಳಲ್ಲಿನ ಉಪ ದೇವತೆಗಳ ದ್ವಾರಗಳನ್ನು ತೆರೆದು ದೇವರ ಮೂರ್ತಿಗಳಿಗೆ ದೀಪ ಬೆಳಗಿದ್ದಾರೆ.

ಬುಧವಾರ ಬೆಳಗ್ಗೆಯಿಂದಲೇ ಅಗತ್ಯ ಧಾರ್ಮಿಕ ಪೂಜಾ ಕೈಂಖರ್ಯಗಳು ನೆರವೇರಿದ ನಂತರ ಭಕ್ತರಿಗೆ ಶಬರಿಮಲೆ ಪವಿತ್ರ ಬೆಟ್ಟದ ಚಾರಣ ಮಾಡಲು, 18 ಮೆಟ್ಟಿಲುಗಳನ್ನು ಏರಲು ಹಾಗೂ ಮುಖ್ಯವಾದ ಅಯ್ಯಪ್ಪ ಸ್ವಾಮಿದೇವರ ಮುಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಪೂಜೆಗಾಗಿ ಶಬರಿಮಲೆ ದೇವಾಲಯ ಆಗಸ್ಟ್ 21ರ ಭಾನುವಾರದವರೆಗೆ ರವರೆಗೆ ತೆರೆದಿರಲಿದೆ.
ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆಗಳು ನಡೆದಿವೆ ಹೊರತು ಭಕ್ತರಿಗೆ ಅವಕಾಶ ಇರಲಿಲ್ಲ. ಕೊರೋನಾ ಭೀತಿ ಎಲ್ಲೆಡೆ ಆವರಿಸಿದ್ದರಿಂದ ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಐದು ದಿನ ವಿಶೇಷ ಪೂಜೆಗೆಂದು ಮಾತ್ರ ಬಾಗಿಲು ತೆರೆದಿತ್ತು. ಆದರೆ ಬೆಟ್ಟ ಏರಿ ಬರಲು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ನಂತರ ದಿನಗಳಲ್ಲಿ ಭಕ್ತರು ಕಟ್ಟುನಿಟ್ಟಿನ ಕೊರೋನಾ ಮಾರ್ಗಸೂಚಿನ ಅನ್ವಯ ದೇವರ ದರ್ಶನ ಪಡೆದರು.
ಇದೀಗ ಎಲ್ಲೆಡೆ ಕೋವಿಡ್ ಸಂಪೂರ್ಣವಾಗಿ ಇಳಿಕೆ ಕಂಡಿದ್ದು, ಈ ಭಾರಿ ಶಬರಿಮಲೆಗೆ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಸಂಬಂಧ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications