ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂ

|
Google Oneindia Kannada News

ತಿರುವನಂತಪುರಂ, ಜನವರಿ 03: ಸುಪ್ರಿಂಕೋರ್ಟ್‌ ತೀರ್ಪು ಒಪ್ಪಿಗೆ ಆಗದಿದ್ದಲ್ಲಿ, ಬೇಕಿದ್ದರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಾಜೀನಾಮೆ ನೀಡಲಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಶಬರಿಮಲೆ ವಿವಾದ: ಕೇರಳ ಸರ್ಕಾರ ವಿರುದ್ಧ ಅನಂತ್‌ಕುಮಾರ್ ಹೆಗಡೆ ಗುಡುಗು ಶಬರಿಮಲೆ ವಿವಾದ: ಕೇರಳ ಸರ್ಕಾರ ವಿರುದ್ಧ ಅನಂತ್‌ಕುಮಾರ್ ಹೆಗಡೆ ಗುಡುಗು

ಮಹಿಳೆಯರು ದೇವಾಲಯ ಪ್ರವೇಶಿಸಿದ್ದಕ್ಕೆ ದೇವಾಲಯದ ಶುದ್ಧೀಕರಣ ಮಾಡಿದ ಕ್ರಮವನ್ನು ವಿರೋಧಿಸಿ ಅವರು ಮಾತನಾಡಿದರು.

ಕೇಂದ್ರ ಶಬರಿಮಲೆಯ ಸಂಪ್ರದಾಯ ಕಾಪಾಡಬೇಕಿತ್ತು: ಯುಟಿ ಖಾದರ್ಕೇಂದ್ರ ಶಬರಿಮಲೆಯ ಸಂಪ್ರದಾಯ ಕಾಪಾಡಬೇಕಿತ್ತು: ಯುಟಿ ಖಾದರ್

ಇಬ್ಬರು ನಡುವಯಸ್ಸಿನ ಮಹಿಳೆಯರು ಮಂಗಳವಾರ ನಡುರಾತ್ರಿ 3:45 ಕ್ಕೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿದ ಕಾರಣ, ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವರು ಅವರು ದೇವಾಲಯವನ್ನು ಮುಚ್ಚಿ ಶುದ್ಧಿ ಕಾರ್ಯ ನೆರವೇರಿಸಿದರು. ಇದನ್ನು ಸಿಎಂ ಪಿಣರಾಯಿ ವಿಜಯನ್ ವಿರೋಧಿಸಿದ್ದಾರೆ.

Sabarimala head priest should have quit: Pinarayi Vijayan

ಸುಪ್ರಿಂಕೋರ್ಟ್‌ನ ತೀರ್ಪು ಸಮ್ಮತವಲ್ಲದಿದ್ದರೆ ಪ್ರಧಾನ ಅರ್ಚಕ ರಾಜೀನಾಮೆ ನೀಡಬೇಕು. ಅವರೂ ಸಹ ಕಕ್ಷೀದಾರ ಆಗಿದ್ದ ಕಾರಣ ಅದು ಸರಿಯೂ ಹೌದು, ಆದರೆ ಶುದ್ಧೀಕರಣ ರೀತಿಯ ಕಾರ್ಯ ಮಾಡುವುದು ತೀರ್ಪಿಗೆ ಅಗೌರವ ತೋರಿದಂತೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ: ಏನಂದ್ರು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ? ಶಬರಿಮಲೆಗೆ ಮಹಿಳೆಯರ ಪ್ರವೇಶ: ಏನಂದ್ರು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ?

ಅಯ್ಯಪ್ಪ ದೇವಾಲಯದ ಅರ್ಚಕರು ಸೇರಿ ಹಲವರು ಸುಪ್ರಿಂಕೋರ್ಟ್‌ ತೀರ್ಪನ್ನು ಒಪ್ಪಲು ನಿರಾಕರಿಸಿದ್ದಾರೆ. ಮೊನ್ನೆಯಷ್ಟೆ ಇಬ್ಬರು ಮಹಿಳೆಯರು ದೇವಾಲಯದ ಪ್ರವೇಶಿಸಿದ ಬೆನ್ನಲ್ಲೆ ಕೇರಳದಾದ್ಯಂತ ಹಿಂಸಾಚಾರ ಪ್ರಾರಂಭವಾಗಿದೆ. ಇಂದು ಸಹ ಕೇರಳ ಬಂದ್‌ ನಡೆದಿದ್ದು, ಬಿಜೆಪಿ ಮತ್ತು ಸಿಪಿಐಎಂ ಕಾರ್ಯಕರ್ತರ ನಡುವೆ ಭಾರಿ ಗಲಾಟೆಗಳು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.

English summary
Kerala CM Pinarayi Vjayan oppose to purification ritual perform in Ayappa tample by chief priest. He said if he does not agree with supreme court verdict then he should have quit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X