ಯೋಧನ ಶವ ಪೆಟ್ಟಿಗೆಗೆ ಹೆಗಲು ನೀಡಿದ ರಾಜನಾಥ್ ಸಿಂಗ್: ವಿಡಿಯೋ
Recommended Video
ಶ್ರೀನಗರ, ಫೆಬ್ರವರಿ 15: ಭಯೋತ್ಪಾದನಾ ದಾಳಿ ನಡೆದ ಪುಲ್ವಾಮಾ ಜಿಲ್ಲೆಗೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಗೃಹಸಚಿವ ರಾಜನಾಥ್ ಸಿಂಗ್, ಯೋಧರೊಬ್ಬರ ಶವಕ್ಕೆ ಹೆಗಲು ನೀಡಿದರು.
ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಬುದ್ಗಾಮ್ಗೆ ಭೇಟಿ ಕೊಟ್ಟ ರಾಜನಾಥ್ ಸಿಂಗ್, ಉಗ್ರರ ದಾಳಿಯಲ್ಲಿ ಛಿದ್ರಗೊಂಡಿದ್ದ ಸಿಆರ್ಪಿಎಫ್ ಯೋಧರೊಬ್ಬರ ದೇಹದ ತುಣುಕುಗಳನ್ನು ಇರಿಸಿದ ಶವಪೆಟ್ಟಿಗೆಯನ್ನು ಹೊತ್ತುಕೊಂಡು ಸ್ವಲ್ಪ ದೂರ ನಡೆದರು. ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಕೂಡ ಪೆಟ್ಟಿಗೆಯ ಇನ್ನೊಂದು ಭಾಗದಲ್ಲಿ ಹೆಗಲು ನೀಡಿದರು.
ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?
ಪುಲ್ವಾಮಾ ಭೀಕರ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಗೃಹಸಚಿವ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಸೇನೆಯ ಉತ್ತರ ಕಮಾಂಡರ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅಂತಿಮ ನಮನ ಸಲ್ಲಿಸಿದರು.
#WATCH: Home Minister Rajnath Singh and J&K DGP Dilbagh Singh lend a shoulder to mortal remains of a CRPF soldier in Budgam. #PulwamaAttack pic.twitter.com/CN4pfBsoVr
— ANI (@ANI) 15 February 2019
ಪಾಕಿಸ್ತಾನ ಪ್ರಾಯೋಜಕತ್ವದ ಜೈಶ್ ಎ ಮೊಹಮ್ಮದ್ ಸಂಘಟನೆ ಈ ದಾಳಿ ನಡೆಸಿದ್ದು, ಇದಕ್ಕೆ ಸರಿಯಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಮುಂದಿನ ಸೇನಾ ಕಾರ್ಯಚಟುವಟಿಕೆಗಳ ಬಗ್ಗೆ ಅವರು ಅಲ್ಲಿನ ಹಿರಿಯ ಭದ್ರತಾ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಪರಾಮರ್ಶನ ಸಭೆ ನಡೆಸಿದರು.
350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ
ಉಗ್ರರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳಲು ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡುವ ಅವಕಾಶವನ್ನು ಸೇನಾ ಪಡೆಗಳಿಗೇ ಬಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!
ತನ್ನ ದೈನಂದಿನ ಖರ್ಚು ತುಂಬಿಸಿಕೊಳ್ಳಲು ಭಿಕ್ಷಾಪಾತ್ರೆ ಹಿಡಿದು ವಿವಿಧ ದೇಶಗಳಿಗೆ ಹೊರಡುವ ಸ್ಥಿತಿಯಲ್ಲಿರುವ ನೆರೆಯ ದೇಶವು ತನ್ನ ಹತಾಶೆಯ ಉತ್ತುಂಗದಲ್ಲಿ ಈ ಕೃತ್ಯ ಎಸಗಿದೆ ಎಂದು ಪಾಕಿಸ್ತಾನದ ಕುರಿತು ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.