ಭಾರತ-ಪಾಕ್ ಸೇನೆಯನ್ನು ಒಂದೆಡೆ ಸೇರಿಸಿತು ಪುಟ್ಟ ಮಗುವಿನ ಶವ!
ಶ್ರೀನಗರ, ಜುಲೈ 12: ಭಾರತ ಮತ್ತು ಪಾಕಿಸ್ತಾನಿ ಸೇನೆಯ ಸೈನಿಕರನ್ನು ಒಂದೇ ಕಡೆಯಲ್ಲಿ ನೋಡುವುದು ಎಂದರೆ ಅದು ಯುದ್ಧದ ಸಮಯದಲ್ಲೇ ಎಂಬಂಥ ಪರಿಸ್ಥಿತಿ ಇರುವ ಹೊತ್ತಲ್ಲಿ ಈ ಎರಡು ಬದ್ಧ ವೈರಿಗಳನ್ನು ಏಳು ವರ್ಷದ ಮಗುವಿನ ಶವವೊಂದು ದ್ವೇಷವನ್ನೆಲ್ಲ ಮರೆತು ಒಂದೆಡೆ ಸೇರುವಂತೆ ಮಾಡಿದೆ!
ಬದ್ಧ ದ್ವೇಷ ಮನಸ್ಸಿನಲ್ಲಿದ್ದರೂ, ಪುಟ್ಟ ಮಗುವಿನ ಶವವನ್ನು ಆಕೆಯ ಹೆತ್ತವರಿಗೆ ಒಪ್ಪಿಸುವ ಸಲುವಾಗಿ ವೈಷಮ್ಯ ಮರೆತು ಮಾನವೀಯತೆ ಮೆರೆದ ಭಾರತ ಮತ್ತು ಪಾಕ್ ಸೇನೆಯ ಸೈನಿಕರು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.
ಈ ಮೂಲಕ ಕಳೆದ ಮೂರ್ನಾಲ್ಕು ದಿನಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಆ ಘಟನೆಗೆ ಕೊನೆಗೂ ಒಂದು ಧನಾತ್ಮಕ ಅಂತ್ಯ ದೊರೆತಿದೆ.

ನಾಲ್ಕು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದ(PoK) ಗುಲ್ಜಿತ್ ಬಾಲ್ತಿಸ್ತಾನ್ ದಲ್ಲಿ ಏಳು ವರ್ಷದ ಮಗುವೊಂದು ಕಾಣೆಯಾಗಿತ್ತು. ಈ ಕುರಿತು ಮಗುವಿನ ಹೆತ್ತವರು ಫೇಸ್ ಬುಕ್ ವಿಡಿಯೋ ಮೂಲಕ ಪ್ರಕಟಣೆ ನೀಡಿ, ಮಗು ಪತ್ತೆಯಾದಲ್ಲಿ ಸಂಪರ್ಕಿಸುವಂತೆ ಕೋರಿದ್ದರು. ಜುಲೈ 8 ರಂದು ಪುಟ್ಟ ಮಗುವಿನ ದೇಹವೊಂದು ಕಿಶನ್ ಗಂಗಾ ನದಿಯಲ್ಲಿ ತೇಲುತ್ತಿದ್ದುದನ್ನು ಉತ್ತರ ಕಾಶ್ಮೀರದ ಗುರೇಜ್ ಕಣಿವೆಯ ಅಚೂರ್ ಎಂಬ ಹಳ್ಳಿಯ ಜನರು ನೋಡಿದ್ದಾರೆ, ಈ ಕುರಿತು ಭಾರತೀಯ ಸೇನಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಫೇಸ್ ಬುಕ್ ವಿಡಿಯೋ ಮೂಲಕ ಅದು ಜುಲೈ 7 ರಂದು ಕಾಣೆಯಾದ ಅಬಿಡ್ ಶೇಕ್ ಎಂಬ ಪಾಕಿಸ್ತಾನಿ ಬಾಲಕನ ಶವ ಎಂಬುದು ಭಾರತೀಯ ಸೇನೆಗೆ ತಿಳಿದುಬಂದಿತ್ತು. ಕೂಡಲೆ ಪಾಕ್ ಸೇನೆಗೆ ಈ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಪಾಕಿಸ್ತಾನಿ ಸೇನೆಯ ಕಡೆಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಹತ್ತಿರದಲ್ಲೆಲ್ಲಿಯೂ ಶವಾಗಾರವೂ ಇಲ್ಲದಿದ್ದರಿಂದ ಐಸ್ ಪ್ಯಾಕ್ ಗಳನ್ನು ದೇಹದ ಮೇಲಿಟ್ಟು ಅದು ಕೊಳೆಯದಂತೆ ಭಾರತೀಯ ಸೇನೆ ಕಾದಿತ್ತು. ನಂತರ ಗುರುವಾರ ಬೆಳಿಗ್ಗೆ ಪಾಕಿಸ್ತಾನಿ ಸೇನೆಯ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆಯೇ ಭಾರತೀಯ ಸೇನೆ ಆ ಮಗುವಿನ ಶವವನ್ನು ಹೊತ್ತು ಗಡಿಯತ್ತ ತೆರಳಲಿತ್ತು. ಉಭಯ ದೇಶದ ಸೈನಿಕರೂ ಅಲ್ಲಿ ಮುಖಾಮುಖಿಯಾಗಿದ್ದರು.
ಗುರುವಾರ ಮಧ್ಯಾಹ್ನ 12:39 ಕ್ಕೆ ದೇಹವನ್ನು ಪಾಕಿಸ್ತಾನಿ ಸೇನೆಗೆ ಹಸ್ತಾಂತರಿಸಲಾಯಿತು. ದೇಹ ಕೊಳೆತುಹೋಗುತ್ತದೆಂಬ ಕಾರಣಕ್ಕೆ ನಾವು ತೀರಾ ಔಪಚಾರಿಕವಾಗಿ ಈ ಕಾರ್ಯ ಮಾಡಲಿಲ್ಲ. ಇದೊಂದು ಮಾನವೀಯ ನಡೆ. ನಿಯಮದಂತೆ ಅಧಿಕೃತವಾಗಿ ಹಸ್ತಾಂತರ ಮಾಡಬೇಕಿದ್ದ ಜಾಗದಲ್ಲಿ ಮಾಡಲಿಲ್ಲ ಎಂದು ಲೆ.ಜ. ಕೆಜೆ ಎಸ್ ದಿಲಾನ್ ಹೇಳಿದರು.
ಪುಲ್ವಾಮಾ ದಾಳಿ, ನಂತರದ ಬಾಲಕೋಟ್ ಏರ್ ಸ್ಟ್ರೈಕ್, ಅಭಿನಂದನ್ ವರ್ಧಮಾನ್ ಪ್ರಕರಣ... ಹೀಗೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ತಿಂಗಳುಗಳಿಂದ ಇದ್ದ ಪ್ರಕ್ಷುಬ್ಧ ವಾತಾವರಣವನ್ನು ಕೊಂಚವಾದರೂ ತಿಳಿಗೊಳಿಸುವಂಥ ಮಾನವೀಯ ಘಟನೆಯಾಗಿ ಇದು ಗಮನ ಸೆಳೆದಿದೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications