ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡ ವಯಕಾಂ 18
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ವಯಾಕಾಂ 18 ಪಡೆದುಕೊಂಡಿದೆ. ಡಿಸ್ನಿ ಸ್ಟಾರ್ ಮತ್ತು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಕೂಡ ಪ್ರಸಾರದ ಹಕ್ಕು ಪಡೆಯುವ ಸ್ಪರ್ಧೆಯಲ್ಲಿದ್ದವು, ಇವೆರಡನ್ನೂ ಹಿಂದಿಕ್ಕಿದ ಅಂಬಾನಿ ಒಡೆತನದ ವಯಾಕಾಂ 18 ಪ್ರಸಾರದ ಹಕ್ಕು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಯಾಕಾಂ ಪ್ರತಿ ಪಂದ್ಯಕ್ಕೆ 67.8 ಕೋಟಿ ರೂಪಾಯಿ ಪಾವತಿಸುತ್ತದೆ ಎಂದು ಹೇಳಲಾಗಿದೆ. 2023-2028 ಅವಧಿಗಾಗಿ ಬಿಸಿಸಿಐ ಮಾಧ್ಯಮ ಹಕ್ಕುಗಳ ಹರಾಜು ಗುರುವಾರ ನಡೆಯಿತು ಮತ್ತು ಪ್ಯಾರಾಮೌಂಟ್ ಗ್ಲೋಬಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವಿನ ಜಂಟಿ ಉದ್ಯಮವಾದ ವಯಾಕಾಂ18, 2023-2028 ಸೈಕಲ್ಗಾಗಿ ಭಾರತದ ತವರಿನ ಕ್ರಿಕೆಟ್ ಪಂದ್ಯಗಳ ಡಿಜಿಟಲ್ ಹಕ್ಕುಗಳನ್ನು ಗೆದ್ದಿದೆ.

ಡಿಸ್ನಿ ಸ್ಟಾರ್, ಸೋನಿ ಸ್ಪೋರ್ಟ್ಸ್ ಮತ್ತು ವಯಾಕಾಮ್ 18 ಎಂಬ ಮೂರು ಕಂಪನಿಗಳು ಹರಾಜು ಹಾಕುವುದರೊಂದಿಗೆ ಮುಂಬೈನಲ್ಲಿ ಹರಾಜನ್ನು ನಡೆಸಲಾಯಿತು. ವಯಾಕಾಂ18 ನ ಗೆಲುವು ಕಂಪನಿಗೆ ಮುಖ್ಯವಾಗಿದೆ. ವಯಾಕಾಂ ತನ್ನ ಕ್ರೀಡಾ ಬಂಡವಾಳವನ್ನು ವಿಸ್ತರಿಸಲು ನೋಡುತ್ತಿದೆ.
ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ
ಭಾರತದ ತವರಿನ ಕ್ರಿಕೆಟ್ ಪಂದ್ಯಗಳ ಡಿಜಿಟಲ್ ಹಕ್ಕುಗಳು ವಿಶ್ವದ ಅತ್ಯಮೂಲ್ಯ ಮಾಧ್ಯಮ ಹಕ್ಕುಗಳಲ್ಲಿ ಒಂದಾಗಿದೆ ಮತ್ತು ವಯಾಕಾಂ18 ಈ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡಿರುವುದು ವೀಕ್ಷಕರ ಮತ್ತು ಆದಾಯದ ವಿಷಯದಲ್ಲಿ ಪ್ರಮುಖ ಬೆಳವಣಿಗೆ ಹೊಂದುವ ಅವಕಾಶ ಪಡೆದುಕೊಂಡಿದೆ.
ಡಿಸ್ನಿ ಸ್ಟಾರ್ 2018 ರಲ್ಲಿ 6,138 ಕೋಟಿ ರೂ (ಪ್ರತಿ ಪಂದ್ಯಕ್ಕೆ ರೂ 60 ಕೋಟಿ) ಪಾವತಿಸಿ ಹಕ್ಕುಗಳನ್ನು ಪಡೆದುಕೊಂಡಿತ್ತು. ಆ ಮೌಲ್ಯವು ಈಗ ಐದು ವರ್ಷಗಳ ಅವಧಿಗೆ 5,966.4 ಕೋಟಿ ರೂಪಾಯಿಗೆ ತಲುಪಿದೆ. ಪ್ರತಿ ಪಂದ್ಯಕ್ಕೆ 67.8 ಕೋಟಿ ರೂಪಾಯಿ ಪಾವತಿ ಮಾಡಲಾಗುತ್ತದೆ.
"ಮುಂದಿನ 5 ವರ್ಷಗಳವರೆಗೆ ಲೀನಿಯರ್ ಮತ್ತು ಡಿಜಿಟಲ್ ಎರಡಕ್ಕೂ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಗೆದ್ದಿದ್ದಕ್ಕಾಗಿ ವಯಾಕಾಂ18 ಅವರಿಗೆ ಅಭಿನಂದನೆಗಳು. ಐಪಿಎಲ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ನ ನಂತರ ಭಾರತ ಕ್ರಿಕೆಟ್ ಎರಡೂ ಸ್ಥಳಗಳಲ್ಲಿ ಬೆಳವಣಿಗೆಯನ್ನು ಮುಂದುವರಿಸುತ್ತದೆ, ನಾವು ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನು ವಿಸ್ತರಿಸುತ್ತೇವೆ. ನಾವು ಒಟ್ಟಾಗಿ ಕ್ರಿಕೆಟ್ ಅಭಿಮಾನಿಗಳ ಕಲ್ಪನೆಯನ್ನು ಸೆರೆಹಿಡಿಯುವುದನ್ನು ಮುಂದುವರಿಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ನಲ್ಲಿ ಬರೆದಿದ್ದಾರೆ.
"ವರ್ಷಗಳಲ್ಲಿ ನಿಮ್ಮ ಬೆಂಬಲಕ್ಕಾಗಿ ಸ್ಟಾರ್ ಇಂಡಿತಾ ಮತ್ತು ಡಿಸ್ನಿಪ್ಲಸ್ ಗೆ ದೊಡ್ಡ ಧನ್ಯವಾದಗಳು. ಭಾರತ ಕ್ರಿಕೆಟ್ ಜಗತ್ತಿನಾದ್ಯಂತ ತನ್ನ ಅಭಿಮಾನಿಗಳನ್ನು ತಲುಪುವಂತೆ ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ" ಎಂದು ಅವರು ಹೇಳಿದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications