DPL T20: ಸನ್ರೈಸರ್ಸ್ ಹೈದರಾಬಾದ್ ದಾಖಲೆ ಉಡೀಸ್; 20 ಓವರ್ 31 ಸಿಕ್ಸರ್, 19 ಬೌಂಡರಿ 308 ರನ್
ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2024ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ನಿರ್ಮಿಸಿದ್ದ ಗರಿಷ್ಠ ರನ್ಗಳ ದಾಖಲೆ ಇದೀಗ ಹಳೆಯದಾಗಿದೆ. ಭಾರತ ಟಿ20 ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ತಂಡವೊಂದು 300 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದೆ. ಸದ್ಯ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್ (DPL) ಟಿ20 ಪಂದ್ಯಾವಳಿಯಲ್ಲಿ ಭಾರತದ ಕ್ರಿಕೆಟಿಗರು ಹೊಸ ದಾಖಲೆ ಬರೆದಿದ್ದಾರೆ.
ಶಿಖರ್ ಧವನ್ ಮಾಲಿಕತ್ವದ ದಕ್ಷಿಣ ದೆಹಲಿ ಸೂಪರ್ಸ್ಟಾರ್ಜ್ (SDS) ತಂಡವು ಉತ್ತರ ದೆಹಲಿ ಸ್ಟ್ರೈಕರ್ಸ್ (NDS) ವಿರುದ್ಧ ತಮ್ಮ 20 ಓವರ್ಗಳಲ್ಲಿ 308 ರನ್ಗಳನ್ನು ಗಳಿಸಿದ್ದು ಹೊಸ ದಾಖಲೆ ಬರೆದಿದೆ. ಈ ಮೂಲಕ ಭಾರತದಲ್ಲಿ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ದಾಖಲೆಯನ್ನು ಮುರಿದಿದೆ.

ಆಯುಶ್ ಬದೋನಿ-ಆರ್ಯ ಶತಕ
ಸೌತ್ ದೆಹಲಿ ಸೂಪರ್ಸ್ಟಾರ್ಸ್ ತಂಡದ ಪ್ರಿಯಾಂಶ್ ಆರ್ಯ ಮತ್ತು ಆಯುಷ್ ಬದೋನಿ ಇಬ್ಬರ ಅಬ್ಬರಕ್ಕೆ ದಾಖಲೆಗಳು ಪುಡಿಯಾದವು. ಇಬ್ಬರು ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 99 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 286 ರನ್ ಕಲೆ ಹಾಕಿದರು. ಇಬ್ಬರ ಆಟ ನೋಡಿದ ಎದುರಾಳಿ ತಂಡದ ಬೌಲರ್ ಗಳು ಸಂಪೂರ್ಣ ಕಕ್ಕಾಬಿಕ್ಕಿಯಾಗಿದ್ದರು.
ಎಡಗೈ ಸ್ಪಿನ್ನರ್ ಮನನ್ ಭಾರದ್ವಾಜ್ ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿದ ಪ್ರಿಯಾಂಶ್ ಆರ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಪ್ರಾಂಶು ವಿಜಯರನ್ ಹೊರತುಪಡಿಸಿ, ಉತ್ತರ ದೆಹಲಿಯ ಯಾವ ಬೌಲರ್ ಕೂಡ 10 ಕ್ಕಿಂತ ಕಡಿಮೆ ಎಕಾನಮಿ ದರವನ್ನು ಹೊಂದಿರಲಿಲ್ಲ. ಸಿದ್ಧಾರ್ಥ್ ಸೋಲಂಕಿ ಕೊನೆಯ ಓವರ್ನಲ್ಲಿ ಕೇವಲ 9 ರನ್ಗಳನ್ನು ಬಿಟ್ಟುಕೊಟ್ಟರು, ಇಲ್ಲದಿದ್ದರೆ ನೇಪಾಳ ಮಾಡಿದ್ದ ವಿಶ್ವದಾಖಲೆ ಕೂಡ ಇಂದು ಮುರಿಯುತ್ತಿತ್ತು.
50 ಬೌಂಡರಿ ದಾಖಲು
ಮೊದಲ ಇನ್ನಿಂಗ್ಸ್ನಲ್ಲಿ ಬೌಲ್ ಮಾಡಿದ 120 ಎಸೆತಗಳಲ್ಲಿ 31 ಸಿಕ್ಸರ್ ಬಂದರೆ 19 ಬೌಂಡರಿ ಬಂದವು. ಒಟ್ಟು 50 ಬೌಂಡರಿಗಳು ದಾಖಲಾಗಿದ್ದು ಕೂಡ ಹೊಸ ದಾಖಲೆಯಾಗಿದೆ. ಆಯುಷ್ ಬದೋನಿ 55 ಎಸೆತಗಳಲ್ಲಿ ಬರೋಬ್ಬರಿ 165 ರನ್ ಗಳಿಸಿದರು. ಇದು ಭಾರತೀಯ ಕ್ರಿಕೆಟಿಗ ಟಿ20 ಕ್ರಿಕೆಟ್ನಲ್ಲಿ ಗಳಿಸಿದ ಗರಿಷ್ಠ ರನ್ ಆಗಿದೆ. ಪ್ರಿಯಾಂಶ್ ಆರ್ಯ 50 ಎಸೆತಗಳಲ್ಲಿ 120 ರನ್ ಗಳಿಸಿದರು.
ಪುರುಷರ ಟಿ20 ಕ್ರಿಕೆಟ್ನಲ್ಲಿ ನೇಪಾಳ ಮೊಂಗೋಲಿಯಾ ವಿರುದ್ಧ 20 ಓವರ್ ಗಳಲ್ಲಿ 314 ರನ್ ಗಳಿಸಿರುವುದು ಈವರೆಗೆ ದಾಖಲಾದ ಅತ್ಯಧಿಕ ಟಿ20 ಸ್ಕೋರ್ ಆಗಿದೆ. ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ಈಗ 308 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐಪಿಎಲ್ನಲ್ಲಿ 287 ರನ್ ಗಳಿಸಿರುವ ಸನ್ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ.
-
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ












Click it and Unblock the Notifications