ಮೊಘಲರ ಕಾಲದ ಚಿತ್ರ ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ ಶಶಿ ತರೂರ್
ನವದೆಹಲಿ, ಸೆ.13: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಏಷ್ಯಾಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್ ಗಳಿಂದ ಶ್ರೀಲಂಕಾ ಸೋಲಿಸಿ, ಸಂಭ್ರಮದಲ್ಲಿ ತೇಲಾಡಿದೆ. ಈ ನಡುವೆ ಸಾಮಾಜಿಕ ಜಾಲ ತಾಣದಲ್ಲಿ ಪಾಕ್ ಸೋಲು, ಲಂಕನ್ನರ ಗೆಲುವಿನ ಬಗ್ಗೆ ಮೀಮ್ಸ್, ಟ್ರಾಲ್ಸ್ ನಿಂತಿಲ್ಲ. ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡಾ ಚಿತ್ರವೊಂದನ್ನು ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ್ದಾರೆ.
ಶಶಿ ತರೂರ್ ಟ್ವೀಟ್ ಮಾಡಿರುವುದು ಮೊಘಲರ ಕಾಲದ ಒಂದು ಚಿತ್ರ. ಈ ಚಿತ್ರಕಲೆಗೂ ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ತಂಡದ ಆಟಕ್ಕೂ ಸಂಬಂಧ, ಹೋಲಿಕೆ ಇದೆ. ಇಷ್ಟಕ್ಕೂ ಆ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ, ತುಂಬಾ ಸರಳ ಚಿತ್ರ. ಮೊಘಲರ ದಿರಿಸಿನಲ್ಲಿರುವ ವ್ಯಕ್ತಿಯೊಬ್ಬ ಕ್ರಿಕೆಟ್ ಚೆಂಡನ್ನು ಹಿಡಿಯಲು ಯತ್ನಿಸಿ, ವಿಫಲನಾಗಿ ಕೈಚೆಲ್ಲುವ ರೀತಿ ಚಿತ್ರವಿದೆ.
ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಮಹತ್ವದ ಘಟ್ಟದಲ್ಲಿ ಕ್ಯಾಚ್ ಹಿಡಿಯಬೇಕಿದ್ದ ಆಸಿಫ್ ಅಲಿ ಚೆಂಡನ್ನು ಕೈ ಚೆಲ್ಲಿ, ಬೌಂಡರಿ ದಾಟುವಂತೆ ಮಾಡಿದ್ದರು.

ಈ ಪಂದ್ಯದಲ್ಲಿ 171ರನ್ ಗುರಿ ಬೆನ್ನತ್ತಿದ್ದ ಬಾಬರ್ ಅಜಮ್ ಪಡೆ 147 ಸ್ಕೋರಿಗೆ ಆಲೌಟ್ ಆಗಿ ಸೋಲು ಕಂಡಿದೆ. ಈ ಮೂಲಕ 23 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ಮತ್ತೊಮ್ಮೆ ಏಷ್ಯಾಕಪ್ ಗೆದ್ದುಕೊಂಡಿದೆ.
Shared as received. Bless you, @WhatsApp humorists! pic.twitter.com/Rv1KuhntoL
— Shashi Tharoor (@ShashiTharoor) September 13, 2022
ಈ ಮೀಮ್ ಹಂಚಿಕೊಂಡಿರುವ 66 ವರ್ಷ ವಯಸ್ಸಿನ ಶಶಿ ತರೂರ್ 'ವಾಟ್ಸಾಪ್ ಹುಮರಿಸ್ಟ್' ಕೃಪೆ ಎಂದು ಹಾಕಿರುವುದು ವಿಶೇಷ.
ಇನ್ನು ಅಂತಿಮ ಪಂದ್ಯದಲ್ಲಿ ಪಾಕಿಸ್ತಾನಿ ಫೀಲ್ಡರ್ಸ್ ಕ್ಯಾಚ್ ಕೈಚೆಲ್ಲಿದ್ದು, ತಂಡಕ್ಕೆ ಮುಳುವಾಗಿದ್ದು ನಿಜ. ಶ್ರೀಲಂಕಾ ತಂಡಕ್ಕೆ ಆಸರೆಯಾದ ಭಾನುಕ ರಾಜಪಕ್ಸೆ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು.
#PAKvsSL pic.twitter.com/yQdmnfV20t
— Amrit Santlani (@Amritsantlani11) September 11, 2022
ಶ್ರೀಲಂಕಾ ತಂಡದ ಮೊತ್ತ 58/5 ಆಗಿದ್ದಾಗ ರಾಜಪಕ್ಸೆ ಸಮಯೋಚಿತ ಆಟವಾಡಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಆದರೆ, ರಾಜಪಕ್ಸೆಗೆ ಜೀವದಾನ ಲಭಿಸಿತ್ತು. ಶಾಬಾದ್ ಹಾಗೂ ಆಸಿಫ್ ಇಬ್ಬರು ಡಿಕ್ಕಿ ಹೊಡೆದು ಕ್ಯಾಚ್ ಬಿಟ್ಟಿದ್ದು, ಹಲವು ಮೀಮ್ಸ್, ಟ್ರಾಲ್ಸ್ ಗಳಿಗೆ ದಾರಿ ಮಾಡಿಕೊಟ್ಟಿತ್ತು.
-
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications