ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗುವ... RCB
ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವ ಸಮಯ ಬಂದೇ ಬಿಟ್ಟಿದೆ. ಬೆಂಗಳೂರಿಗೆ ಬಂದು ಆರ್ಸಿಬಿ ತಂಡವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲಿಸಿ ಹೋಗಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪಾಠ ಕಲಿಸುವ ಸಮಯ ಸಿಕ್ಕಿದೆ. ವಿರಾಟ್ ಕೊಹ್ಲಿ ಸಮೇತ ಆರ್ಸಿಬಿ ಆಟಗಾರರು ಇಂದು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಈ ಕಾರಣಕ್ಕೆ ಇಡೀ ಇಂಡಿಯಾದ ಗಮನ ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ನೆಟ್ಟಿದೆ. ಹೀಗಿದ್ಧಾಗಲೇ, ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗುವ...
ಶುಕ್ರವಾರ ಕೂಡ ಆರ್ಸಿಬಿ & ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಮ್ಯಾಚ್ ನಡೆದಿತ್ತು. ಈ ಪಂದ್ಯದಲ್ಲಿ ನಮ್ಮ ಬೆಂಗಳೂರು ತಂಡ ಆರ್ಸಿಬಿ ಸೋಲು ಕಂಡಿತ್ತು. ಬೆಂಗಳೂರಲ್ಲಿ ಭರ್ಜರಿ ಮಳೆ ಬರುತ್ತಿದ್ದ ಕಾರಣ ಮ್ಯಾಚ್ ನಿಂತು 14 ಓವರ್ಗೆ ಮ್ಯಾಚ್ ಕಟ್ ಮಾಡಿ ಆಡಿಸಲಾಯಿತು. ಆರ್ಸಿಬಿ ತಂಡ 14 ಓವರ್ಗೆ 95 ರನ್ ಗಳಿಸಿ, ಪಂಜಾಬ್ ತಂಡಕ್ಕೆ 96 ರನ್ಗಳ ಗುರಿ ನೀಡಿತ್ತು. ಆದರೆ ಪಂಜಾಬ್ ತಂಡವು, ಕೇವಲ 12.1 ಓವರ್ಗೆ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಗೆದ್ದಿತು. ನಮ್ಮ ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿಗಳು ಕಣ್ಣೀರು ಹಾಕಿಬಿಟ್ಟರು...

ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ರದ್ದಾಗುವ...
ಹೌದು, ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋಲು ಕಂಡಿದ್ದ ಆರ್ಸಿಬಿ ತಂಡವು ಇದೀಗ ಪಂಜಾಬ್ ನೆಲಕ್ಕೆ ನುಗ್ಗಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿತ್ತು. ಅದರಲ್ಲೂ ಆರ್ಸಿಬಿ ಅಭಿಮಾನಿಗಳ ಕಣ್ಣೀರಿಗೆ ಬೆಲೆ ನೀಡಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಹೀನಾಯವಾಗಿ ಸೋಲು ಕರುಣಿಸಿ ಕುಣಿದಾಡಲು ಆರ್ಸಿಬಿ ಆಟಗಾರರು ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಸಜ್ಜಾಗಿದ್ದರು. ಹೀಗಿದ್ದಾಗಲೇ, ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗುವ...
ಬೆಂಗಳೂರಿಗೆ ಬಂದು ಆರ್ಸಿಬಿ ವಿರುದ್ಧ ಮ್ಯಾಚ್ ಗೆದ್ದ ನಂತರ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಸಿಕ್ಕಾಪಟ್ಟೆ ಕಿರಿಕ್ ಮಾಡಿ ಹೋಗಿದ್ದಾರೆ. ಇದೇ ಕಾರಣಕ್ಕೆ ಇಂದು ಆರ್ಸಿಬಿ ತಂಡ ಕೂಡ ಭರ್ಜರಿಯಾಗಿ ಗೆದ್ದು, ಪಂಜಾಬ್ ಕಿಂಗ್ಸ್ ತಂಡಕ್ಕೆ ಸರಿಯಾಗಿ ಪಾಠ ಕಲಿಸಬೇಕು ಅಂತಾ ನಮ್ಮ ಆರ್ಸಿಬಿ ಆಟಗಾರರು ಡಿಸೈಡ್ ಆಗಿದ್ದಾರೆ. ಆದರೆ ಇದೇ ಸಮಯದಲ್ಲಿ ಒಂದು ದೊಡ್ಡ ಆಘಾತವೇ ಎದುರಾಗಿದ್ದು, ಭಾರಿ ಭರ್ಜರಿ ಮಳೆಯ ಕಾರಣಕ್ಕೆ ಮ್ಯಾಚ್ ನಿಲ್ಲುತ್ತಾ? ಮುಂದೆ ಓದಿ.
ಮಳೆ... ಮಳೆ... ಭರ್ಜರಿ ಮಳೆ...
ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ನಡೆಯುತ್ತಿರುವ ಪಂಜಾಬ್ ಪ್ರದೇಶದಲ್ಲಿ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಪಂಜಾಬ್ ರಾಜ್ಯದಿಂದ ಕೆಲವೇ ಕಿಲೋ ಮೀಟರ್ಗಳಷ್ಟು ದೂರ ಇರುವ ಕಾಶ್ಮೀರದಲ್ಲಿ ಭಾರಿ ಹಿಮಪಾತ ಆಗುತ್ತಿದೆ. ಹಾಗೇ ಪಂಜಾಬ್ ರಾಜ್ಯದಲ್ಲೂ ಭಾರಿ ಮಳೆಯ ಮೋಡಗಳು ಆವರಿಸಿವೆ. ಇದನ್ನೆಲ್ಲಾ ನೋಡುತ್ತಿದ್ದರೆ ಪರಿಸ್ಥಿತಿ ಕೈಮೀರಿದ್ದು, ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ. ಅಭಿಮಾನಿಗಳು ಈಗ ಮಳೆರಾಯನ ಬಳಿ ಬೇಡಿಕೊಳ್ಳುತ್ತಿದ್ದು, ಆರ್ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಮಾಡದೇ ಇರಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications