Get Updates
Get notified of breaking news, exclusive insights, and must-see stories!

RCB vs RR: ವಿರಾಟ್ ಕೊಹ್ಲಿ ಭದ್ರತೆಗೆ ಬೆದರಿಕೆ; ಆರ್‌ಸಿಬಿ ಅಭ್ಯಾಸ, ಪತ್ರಿಕಾ ಗೋಷ್ಠಿ ರದ್ದು

ಭದ್ರತಾ ಕಾರಣಗಳಿಂದಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024 ಎಲಿಮಿನೇಟರ್ ಮೊದಲು ತಮ್ಮ ಅಭ್ಯಾಸವನ್ನು ರದ್ದುಗೊಳಿಸಿದೆ. ಎಲಿಮಿನೇಟರ್ ಪಂದ್ಯಕ್ಕಾಗಿ ಮಂಗಳವಾರ ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಯಬೇಕಿತ್ತು.

ಆದರೆ ಯಾವುದೇ ಅಧಿಕೃತ ಕಾರಣವಿಲ್ಲದೆ ಅಭ್ಯಾಸವನ್ನು ರದ್ದು ಮಾಡಿತು, ಇದೇ ಅಂಗಳದಲ್ಲಿ ರಾಜಸ್ಥಾನ್ ರಾಯಲ್ಸ್ ಅಭ್ಯಾಸದ ಅವಧಿಯನ್ನು ಪೂರ್ಣಗೊಳಿಸಿತು. ಯಾವುದೇ ಪತ್ರಿಕಾಗೋಷ್ಠಿ ಇರಲಿಲ್ಲ ಎನ್ನುವುದು ಕೂಡ ಗಮನಾರ್ಹ ಸಂಗತಿಯಾಗಿದೆ.

RCB vs RR RCB Cancels Practice and Press Meet After Virat Kohli Security Threat

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಕ್ವಾಲಿಫೈಯರ್ 1 ಪಂದ್ಯ ನಡೆಯಬೇಕಿದ್ದ ಕಾರಣ, ಕಾರಣ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಪ್ರಾಥಮಿಕ ಕೊಡುಗೆಯಾದ ನರೇಂದ್ರ ಮೋದಿ ಸ್ಟೇಡಿಯಂ ಬದಲಾಗಿ, ಕಾಲೇಜು ಮೈದಾನದಲ್ಲಿ ಅಭ್ಯಾಸ ಮಾಡಲು ಕೇಳಿತ್ತು.

ಭದ್ರತೆಗೆ ಬೆದರಿಕೆ?

ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕಾ ವರದಿ ಮಾಡಿರುವ ಪ್ರಕಾರ, ವಿರಾಟ್ ಕೊಹ್ಲಿ ಭದ್ರತೆಗೆ ಬೆದರಿಕೆ ಇದ್ದ ಕಾರಣ, ಆರ್ ಸಿಬಿ ಅಭ್ಯಾಸವನ್ನು ರದ್ದುಗೊಳಿಸಿತು. ಎರಡೂ ತಂಡಗಳು ಪತ್ರಿಕಾಗೋಷ್ಠಿಯನ್ನು ನಡೆಸಲಿಲ್ಲ ಎಂದು ಹೇಳಿದೆ.

ಭಯೋತ್ಪಾದನಾ ಚಟುವಟಿಕೆಗಳ ಶಂಕೆಯ ಮೇಲೆ ಗುಜರಾತ್ ಪೊಲೀಸರು ಸೋಮವಾರ ರಾತ್ರಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳ ಅಡಗುತಾಣವನ್ನು ಶೋಧಿಸಿದ ನಂತರ ಪೊಲೀಸರು ಶಸ್ತ್ರಾಸ್ತ್ರಗಳು, ಅನುಮಾನಾಸ್ಪದ ವೀಡಿಯೊಗಳು ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಈ ಮಾಹಿತಿಯನ್ನು ರಾಜಸ್ಥಾನ ರಾಯಲ್ಸ್ ಮತ್ತು ಆರ್ ಸಿಬಿ ಫ್ರಾಂಚೈಸಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಯಾವುದೇ ಅಭ್ಯಾಸ ಸೆಷನ್ ಇರುವುದಿಲ್ಲ ಎಂದು ಆರ್‌ಸಿಬಿ ಭದ್ರತಾ ಸಿಬ್ಬಂದಿಗೆ ತಿಳಿಸಿದೆ. ಅಭ್ಯಾಸದ ಅವಧಿಯನ್ನು ರದ್ದುಗೊಳಿಸುವ ಹಠಾತ್ ನಿರ್ಧಾರಕ್ಕೆ ಆರ್‌ಸಿಬಿ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ ಎಂದು ವರದಿ ಹೇಳಿದೆ.

ಎರಡೂ ತಂಡಗಳು ಸೋಮವಾರ ಅಹಮದಾಬಾದ್‌ಗೆ ಬಂದಿಳಿದವು. ಭಾನುವಾರ ಮತ್ತು ಸೋಮವಾರ ವಿಶ್ರಾಂತಿ ಪಡೆಯಲು ಅವರಿಗೆ ಸಾಕಷ್ಟು ಸಮಯವಿತ್ತು. ಐಪಿಎಲ್ ಎಲಿಮಿನೇಟರ್‌ನಂತಹ ಮಹತ್ವದ ಪಂದ್ಯದ ಮುನ್ನಾದಿನದಂದು ಕನಿಷ್ಠ ಅಭ್ಯಾಸವನ್ನು ಮಾಡಲಿಲ್ಲ.

ಹೋಟೆಲ್‌ಗೆ ಹೆಚ್ಚಿನ ಭದ್ರತೆ

"ಅಹಮದಾಬಾದ್‌ಗೆ ಆಗಮಿಸಿದ ನಂತರ ವಿರಾಟ್ ಕೊಹ್ಲಿ ನಾಲ್ವರ ಬಂಧನದ ಬಗ್ಗೆ ತಿಳಿದುಕೊಂಡರು. ಅವರು ರಾಷ್ಟ್ರೀಯ ಸಂಪತ್ತು, ಮತ್ತು ಅವರ ಭದ್ರತೆ ನಮ್ಮ ಅತ್ಯಂತ ಆದ್ಯತೆಯಾಗಿದೆ" ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದ್ದಾರೆ.

"ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸದ ಅವಧಿ ಇರುವುದಿಲ್ಲ ಎಂದು ಅವರು ನಮಗೆ ತಿಳಿಸಿದರು. ರಾಜಸ್ಥಾನ್ ರಾಯಲ್ಸ್‌ನ ಬೆಳವಣಿಗೆಯ ಬಗ್ಗೆಯೂ ತಿಳಿಸಲಾಯಿತು, ಆದರೆ ಅವರು ತಮ್ಮ ಅಭ್ಯಾಸವನ್ನು ಮುಂದುವರೆಸಿದರು" ಎಂದು ಹೇಳಿದದಾರೆ.

ಆರ್‌ಸಿಬಿ ತಂಡದ ಹೋಟೆಲ್ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಎಲ್ಲಾ ಆರ್ ಸಿಬಿ ತಂಡದ ಸದಸ್ಯರಿಗೆ ಪ್ರತ್ಯೇಕ ಪ್ರವೇಶವಿತ್ತು, ಹೋಟೆಲ್‌ನಲ್ಲಿ ಯಾವುದೇ ಅತಿಥಿಗಳಿಗೆ ಪ್ರವೇಶ ಇರಲಿಲ್ಲ. ಐಪಿಎಲ್ ಮಾನ್ಯತೆ ಪಡೆದ ಮಾಧ್ಯಮದ ಸಿಬ್ಬಂದಿಗೂ ಹೋಟೆಲ್ ಆವರಣ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

ಆರ್‍ಆರ್ ತಂಡವು "ಗ್ರೀನ್ ಕಾರಿಡಾರ್" ಅನ್ನು ಬಳಸಿಕೊಂಡು ಮೈದಾನಕ್ಕೆ ಆಗಮಿಸಿತು ಎಂದು ವರದಿ ಸೇರಿಸಲಾಗಿದೆ. ಮೂರು ಪೊಲೀಸ್ ಬೆಂಗಾವಲು ಪಡೆಗಳು ಅವರ ತಂಡದ ಬಸ್‌ಗೆ ಬೆಂಗಾವಲು ನೀಡಿದವು. ಕ್ಯಾಪ್ಟನ್ ಸಂಜು ಸ್ಯಾಮ್ಸನ್ ತಡವಾಗಿ ಬಂದರು. ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್ ಮತ್ತು ಯುಜ್ವೇಂದ್ರ ಚಹಾಲ್ ಅಭ್ಯಾಸದ ಅವಧಿಯನ್ನು ಬಿಟ್ಟು ಹೋಟೆಲ್‌ನಲ್ಲಿ ಉಳಿಯಲು ನಿರ್ಧರಿಸಿದರು. ತರಬೇತಿಯಲ್ಲಿದ್ದ ಆರ್ ಆರ್ ಆಟಗಾರರಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಪೊಲೀಸರು ಇಡೀ ಮೈದಾನದಲ್ಲಿ ಗಸ್ತು ತಿರುಗಿದರು.

ಭದ್ರತಾ ಕಾಳಜಿಯಿಂದಾಗಿ ಆರ್‌ಆರ್ ಮತ್ತು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+