ಫೀಫಾ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಈ ಜನಪ್ರಿಯ ನಟ
ನವದೆಹಲಿ, ನವೆಂಬರ್ 2: ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ರಣವೀರ್ ಸಿಂಗ್ ಅವರು ಕತಾರ್ನಲ್ಲಿ ನಡೆಯಲಿರುವ ಫೀಫಾ ಪುಟ್ಬಾಲ್ ವಿಶ್ವಕಪ್ ಫೈನಲ್ನಲ್ಲಿ ಭಾಗವಹಿಸಲು ಮತ್ತು ಭಾರತವನ್ನು ಪ್ರತಿನಿಧಿಸಲು ಆಹ್ವಾನಿತರಾಗಿದ್ದಾರೆ.
ಡಿಸೆಂಬರ್ 18 ರಂದು ಕತಾರ್ನಲ್ಲಿ ನಡೆಯಲಿರುವ ಅತಿದೊಡ್ಡ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ರಣವೀರ್ ತೆರಳಲಿದ್ದಾರೆ. ಇಲ್ಲಿ ಅವರು ವಿಶ್ವಕಪ್ ಫುಟ್ಬಾಲ್ನ ಎರಡು ಅತ್ಯುತ್ತಮ ರಾಷ್ಟ್ರಗಳು ಸೆಣಸಾಡಿ ಒಂದು ರಾಷ್ಟ್ರ ವಿಶ್ವಕಪ್ ಅನ್ನು ಗೆಲ್ಲುವುದನ್ನು ವೀಕ್ಷಿಸಲು ಸಾಕ್ಷಿಯಾಗಲಿದ್ದಾರೆ. ರಣವೀರ್ ಅವರು ಜಾಗತಿಕವಾಗಿ ಭಾರತದ ಮಹತ್ವಾಕಾಂಕ್ಷೆಯ ಯುವಕರನ್ನು ಪ್ರತಿನಿಧಿಸುತ್ತಾರೆ. ಫೀಫಾ ವಿಶ್ವಕಪ್ ಫೈನಲ್ನಲ್ಲಿ ಪರಿಪೂರ್ಣ ರಾಯಭಾರಿಯಾಗಿರುತ್ತಾರೆ. ಅವರು ಒಂದು ದಿನ ಅಲ್ಲಿ ಇರುತ್ತಾರೆ ಮತ್ತು ಅನೇಕ ಜಾಗತಿಕ ಫುಟ್ಬಾಲ್ ಗಣ್ಯರೊಂದಿಗೆ ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಫ್ರೆಂಚ್ ಫುಟ್ಬಾಲ್ ಐಕಾನ್ ಜಿನೆದಿನ್ ಜಿದಾನೆ ನಂತರ, ರಣವೀರ್ ಪ್ರತಿಷ್ಠಿತ ಅಡಿಡಾಸ್ ಎಕ್ಸ್ ಯೋಜಿ ಯಮಾಮೊಟೊ (ವೈ-3) ಅಭಿಯಾನದ ಮುಖ್ಯಸ್ಥರಾಗಿದ್ದರು. ರಣವೀರ್ ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಎನ್ಬಿಎ ಗೇಮ್ಸ್ನಲ್ಲಿ ಬಾಸ್ಕೆಟ್ಬಾಲ್ ಐಕಾನ್ಗಳಾದ ಶಾಕ್ವಿಲ್ಲೆ ಓ'ನೀಲ್ ಮತ್ತು ವಿನ್ಸ್ ಕಾರ್ಟರ್ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ಹೊಸ ತಾರೆಗಳಾದ ಟ್ರೇ ಯಂಗ್ ಮತ್ತು ಗಿಯಾನಿಸ್ ಆಂಟೆಟೊಕೌನಂಪೊ ಅವರೊಂದಿಗೆ ಸಂವಾದ ನಡೆಸಿದ್ದರು. ಈಗ ಪ್ರತಿಷ್ಠಿತ ಮಾರಾಕೇಶ್ ಚಲನಚಿತ್ರೋತ್ಸವದಲ್ಲಿ ಎಟೊಯಿಲ್ ಡಿ'ಓರ್ ಪ್ರಶಸ್ತಿಯೊಂದಿಗೆ ಗೌರವಕ್ಕೆ ಸಿದ್ಧರಾಗಿದ್ದಾರೆ. ಈ ಪ್ರಶಸ್ತಿಯನ್ನು ಈ ಹಿಂದೆ ಭಾರತೀಯ ಶ್ರೇಷ್ಠರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಮುಂತಾದವರು ಸ್ವೀಕರಿಸಿದ್ದಾರೆ.

ಈ ಹಿಂದೆ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಯೋಜಕರು ಈ ಸಮಾರಂಭದಲ್ಲಿ 83 ಸ್ಟಾರ್ಗಳ ಜೊತೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು. ಸ್ಕಾಟಿಷ್ ನಟಿ ಟಿಲ್ಡಾ ಸ್ವಿಂಟನ್, ಅಮೇರಿಕನ್ ಚಲನಚಿತ್ರ ನಿರ್ಮಾಪಕ ಜೇಮ್ಸ್ ಗ್ರೇ ಮತ್ತು ಮೊರೊಕನ್ ನಿರ್ದೇಶಕಿ ಫರಿದಾ ಬೆನ್ಲ್ಯಾಜಿಡ್ ಅವರನ್ನು 2022ರ ಮ್ಯಾರಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೌರವಿಸಲಾಗುತ್ತದೆ.
ರಣವೀರ್ ಅವರ ವೃತ್ತಿಯನ್ನು ಗುರುತಿಸಿ ಮೊರೊಕನ್ ನಗರದಲ್ಲಿ ನವೆಂಬರ್ 11 ರಿಂದ 19 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ವಾರ್ಟೆಟ್ ಎಟೊಯಿಲ್ ಡಿ'ಓರ್ (ಗೋಲ್ಡನ್ ಸ್ಟಾರ್) ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಗೌರವವನ್ನು ಸ್ವೀಕರಿಸುವದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಣವೀರ್, ನನ್ನ ಕೆಲಸವನ್ನು ಗುರುತಿಸಿ ಈ ವಿಶೇಷವಾದ ಗೌರವವಾದ ಎಟೊಯಿಲ್ ಡಿ'ಓರ್ ಸ್ವೀಕರಿಸಲು ನಾನು ತುಂಬಾ ಸಂತಸಗೊಂಡಿದ್ದೇನೆ ಎಂದು ಹೇಳಿದ್ದಾರೆ.
-
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications