ಕಾಫಿನಾಡಲ್ಲಿ ಮನಮೋಹಕ ಜಿಪ್ಸಿ ರ್ಯಾಲಿ, ಜನ ಫುಲ್ ಖುಷ್
ಚಿಕ್ಕಮಗಳೂರು, ಜೂನ್ 12: ಕಾಫಿನಾಡು ಚಿಕ್ಕಮಗಳೂರಲ್ಲಿ ಆಗಾಗ ಬೈಕ್, ಕಾರು, ಜೀಪ್ಗಳ ರೇಸ್ ನಡೆಯುತ್ತಿರುತ್ತವೆ. ಜಿಲ್ಲೆಯ ಎನ್. ಆರ್. ಪುರದಲ್ಲಿ ನಾನಾ ರೀತಿಯ ಜೀಪ್ಗಳು ಅಖಾಡಕ್ಕಿಳಿದ್ದವು.
ಒಂದಕ್ಕಿಂತ ಒಂದು ನಾನಾ ನೀನಾ ಅಂತ ಸೆಡ್ಡು ಹೊಡೆದು ನಿಂತಿದ್ದವು. ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ತಗ್ಗು-ದಿಬ್ಬುಗಳನ್ನು ಲೆಕ್ಕಿಸದೇ ಹೊಂಡ-ಗುಂಡಿಗಳಲ್ಲಿ ಜೀಪ್ ಓಡುವ ಪರಿ ಕಂಡು ಜನ ಸಂತಸಪಟ್ಟರು.
ವಿವಿಧ ಕಾರಣಗಳಿಂದ ಎರಡು ಮೂರು ವರ್ಷಗಳಿಂದ ನಿಂತಿದ್ದ ಮಡ್ ಕಾರ್ ರ್ಯಾಲಿ ಜಿಲ್ಲೆಯ ಎನ್. ಆರ್. ಪುರದಲ್ಲಿ ಕೃತಕ ನಿರ್ಮಾಣದ ಟ್ರ್ಯಾಕ್ನಲ್ಲಿ ನಡೆಯಿತು. ಎನ್. ಆರ್. ಪುರದ ಅಡ್ವೆಂಚರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜನೆಗೊಂಡಿದ್ದ ಈ ಜಿಪ್ಸಿ ರ್ಯಾಲಿಯಲ್ಲಿ 100ಕ್ಕೂ ಹೆಚ್ಚು ಜೀಪ್ಗಳು ಪಾಲ್ಗೊಂಡಿದ್ದವು. ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಸ್ಪರ್ಧಾಳುಗಳು ಭಾಗವಹಿಸಿದ್ದರು.

5 ಹಳ್ಳಿಗಳ ಸುತ್ತ ರ್ಯಾಲಿ
ಹೊರ ರಾಜ್ಯ, ಜಿಲ್ಲೆಯ ರೈಡರ್ಗಳ ಜೊತೆ ಸ್ಥಳಿಯರು ಕೂಡ ಅಖಾಡಕ್ಕಿಳಿದಿದ್ದರು. 15 ಕಿ.ಮೀ. ವ್ಯಾಪ್ತಿಯ ಈ ರ್ಯಾಲಿಯೂ ಸುಮಾರು ಐದು ಹಳ್ಳಿಗಳ ಸುತ್ತಲೂ ನಡೆದಿದ್ದು, ಆಯೋಜಕರು ಅಲ್ಲಲ್ಲೇ ಮನಮೋಹಕವಾದ ಟ್ರಾಕ್ ನಿರ್ಮಿಸಿದ್ದರು. ಒಂದೊಂದು ಜೀಪ್ಗಳು ಬಂದಾಗಲೂ ನೆರೆದಿದ್ದ ಜನ ಕೂಗಾಡಿ ಡ್ರೈವರ್ಗಳಿಗೆ ಹುರಿದುಂಬಿಸುತ್ತಿದ್ದರು. ಸಂಪೂರ್ಣವಾಗಿ ಅಡಿಯಾಳದ ಕೆಸರಿನಲ್ಲಿ ಆಯೋಜನೆಗೊಂಡಿದ್ದ ಈ ಮಡ್ ಟ್ರ್ಯಾಕ್ ರ್ಯಾಲಿ ನೋಡುಗರಿಗೆ ಹಾಗೂ ಡ್ರೈವರ್ಗಳಿಗೆ ಸಖತ್ ಥ್ರಿಲ್ ನೀಡಿತು..

ಮಡ್ ಟ್ಯ್ರಾಕ್ನಲ್ಲಿ ಗುರಿ ತಲುಪಲು ಹರಸಾಹಸ
ಕೆಲವು ಜಾಗಗಳಲ್ಲಿ ಜೀಪ್ ಕೂಡ ಓಡೋದಕ್ಕೆ ಹರಸಾಹಸಪಟ್ಟವು. ಜೀಪಿನ ಚಕ್ರಗಳು ಮಣ್ಣಿನಲ್ಲಿ ಸಿಲುಕಿ ಮುಂದೆ ಹೋಗಲಾಗದಂತೆ ಅಲ್ಲೆ ಜಾಮ್ ಆಗಿದ್ದವು. ಟ್ರ್ಯಾಕ್ಟರ್ಗೆ ಕಟ್ಟಿ ಅವುಗಳನ್ನ ಎಳೆಸಲಾಯಿತು. ಈ ಟ್ರ್ಯಾಕ್ಗಳನ್ನು ಅದೇ ರೀತಿಯಲ್ಲಿ ನಿರ್ಮಿಸಲಾಗಿತ್ತು. ಈ ಮಡ್ ಟ್ರ್ಯಾಕ್ ರ್ಯಾಲಿಯಲ್ಲಿ ಮಹೀಂದ್ರಾ 4x4, ಬೊಲೆರೋ, ಜಿಪ್ಸಿ, ಪಜೆರೋ, ಮಿತ್ಸುಬಾ ಸೇರಿದಂತೆ ವಿವಿಧ ಜೀಪ್ಗಳು ಪಾಲ್ಗೊಂಡಿದ್ದವು.
ಕೆಲವೆಡೆ ನೀರಿನ ಒಳಗೆ ಜೀಪ್ಗಳು ಓಡುವಂತಿತ್ತು. ಅಲ್ಲೂ ಕೂಡ ಜೀಪ್ಗಳು ನೀರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಕೆಲವು ಜೀಪ್ಗಳು ವೇಗವಾಗಿ ಹೋಗುವಾಗ ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದ ರ್ಯಾಲಿ ಪ್ರಿಯರ ಮೇಲೆ ಕೆಸರು ಮಣ್ಣು ಹಾಗೂ ನೀರು ಚಿಮ್ಮುತ್ತಿತ್ತು. ಕೆಲವು ಅನುಭವಿ ಡ್ರೈವರ್ಗಳು ಸಲೀಸಾಗಿ ಜೀಪ್ಗಳನ್ನು ಡ್ರೈವ್ ಮಾಡಿದರೆ. ಕೆಲವು ಹೊಸ ಡ್ರೈವರ್ಗಳು ಹರಸಾಹಸಪಟ್ಟು ಹೋರಾಡಿ ಗಡಿ ದಾಟಿ ಗುರಿ ಮುಟ್ಟಿದರು.

ಶಾಸಕ ಟಿ. ಡಿ. ರಾಜೇಗೌಡ ಭಾಗಿ
ಈ ರ್ಯಾಲಿಯಲ್ಲಿ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಕೂಡ ಸ್ಪರ್ಧಾಳುಗಳಾಗಿ ನೋಡುಗರ ಗಮನ ಸೆಳೆಯುವುದರ ಜೊತೆ ಹೊಸ ತಲೆಮಾರಿನ ಡ್ರೈವರ್ಗಳ ಜೊತೆ ಅಖಾಡಕ್ಕಿಳಿದಿದ್ದರು. "ಆಧುನಿಕ ಕಾಲದಲ್ಲಿ ಇಂತಹ ಕ್ರೀಡೆಗಳು ಆಗಾಗ ನಡೆಯುತ್ತಿದ್ದರೆ ಯುವಜನತೆಯಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಯುತ್ತದೆ. ನಾನು ಹುಡುಗನಿದ್ದಾಗ ಓಡಿಸುತ್ತಿದ್ದೆ, ಈಗ ಸ್ವಲ್ಪ ಕಷ್ಟ. ಆದರೂ, ಕಾಫಿತೋಟದಲ್ಲಿ ಜೀಪ್ ಓಡಿಸಿ ಅಭ್ಯಾಸ ಇರುವುದರಿಂದ ಸಲೀಸಾಗಿ ಓಡಿಸಿದೆ" ಎಂದರು. ಮೂರು ವರ್ಷಗಳ ಬಳಿಕ ನಡೆದ ರ್ಯಾಲಿಯನ್ನು ನೋಡಲು ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಒಂದೊಂದು ಜೀಪ್ ಓಡುವಾಗಲು ಜನ ಕೂಗಾಗಿ, ಶಿಳ್ಳೆ ಹೊಡೆದು ಡ್ರೈವರ್ಗಳಿಗೆ ಹುರಿದುಂಬಿಸಿದರು.

ರೋಚಕವಾಗಿದ್ದ ಸ್ಪರ್ಧೆ
ಪ್ರಕೃತಿ ಮಡಿಲ ಮಧ್ಯೆ ನಡೆದ ಈ ರೋಮಾಂಚನ ಸ್ಪರ್ಧೆಯನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುತ್ತಾ ರೋಂಯ್, ರೋಂಯ್ ಅಂತ ಹೊರಟ ಜೀಪ್ ರೈಡರ್ ಗಳು ಕೂಡ ಸಖತ್ ಮನರಂಜನೆ ನೀಢಿದರು. ಪ್ರೇಕ್ಷಕರ ಮನೋರಂಜನೆಗೆಂದೇ ಆಯೋಜಿಸಿದ್ದ ಟ್ರ್ಯಾಕ್ ಹಾಗೂ ರೇಸ್ನಲ್ಲಿ ಹೊರರಾಜ್ಯದ ರೈಡರ್ಗಳ ಜೊತೆ ರಾಜ್ಯದ ಸ್ಪರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. ನೆರೆದಿದ್ದ ಸಾವಿರಾರು ಜನ ಇಂತಹ ರ್ಯಾಲಿಗಳು ನಿರಂತರವಾಗಿರಲೆಂದು ಆಶಿಸಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications