India VS Zimbabwe: ಹರಾರೆಯಲ್ಲಿ ಜಿಂಬಾಬ್ವೆ ಹರೋಹರ.. ಭಾರತದ ಗೆಲುವಿನ ರೂವಾರಿ ಯಾರು?
ಭಾರತ ತಂಡ ಸೇಡಿಗೆ ಸೇಡು ತೀರಿಸಿಕೊಂಡಿದ್ದು, ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡ ನಂತರ ಈಗ ಮತ್ತೆ ಗೆದ್ದು ಬೀಗಿದೆ. T20 ವಿಶ್ವಕಪ್ ಗೆಲುವಿನ ಸಂಭ್ರಮದ ಹಿನ್ನೆಲೆ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಬಿಸಿಸಿಐ ಯುವಕರ ತಂಡಕ್ಕೆ ಆದ್ಯತೆ ನೀಡಿತ್ತು. ಆದರೆ ಮೊದಲನೇ ಪಂದ್ಯದಲ್ಲೇ ಭಾರತ ತಂಡದ ಕಿರಿಯರು ಹೀನಾಯ ಸೋಲು ಕಂಡು, ಆಘಾತ ಸೃಷ್ಟಿಸಿದ್ದರು. ಈಗ ಆ ಭೀಕರ ಸೋಲಿನ ಸುಳಿಯಿಂದ ವಾಪಸ್ ಬಂದಿದೆ ಭಾರತ.
ಜಿಂಬಾಬ್ವೆ ತಂಡ ಇಂದು ಆರಂಭದಲ್ಲಿಯೇ ಸೋಲಿನ ಸುಳಿಗೆ ಸಿಲುಕಿತ್ತು. ಮೊದಲಿಗೆ ಟಾಸ್ ಸೋತು ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ಟೀಂ ಬೌಲಿಂಗ್ ಆರಂಭ ಮಾಡಿತ್ತು. ಈ ಪರಿಸ್ಥಿತಿಯಲ್ಲಿ ಭಾರತ ತಂಡವನ್ನ ಬೇಗ ಕಟ್ಟಿ ಹಾಕುವ ನಿರೀಕ್ಷೆ ಕೂಡ ಹೊಂದಿತ್ತು ಇದೇ ಜಿಂಬಾಬ್ವೆ ತಂಡ. ಆದರೆ ಆಗಿದ್ದೆಲ್ಲಾ ಉಲ್ಟಾ, ಭಾರತದ ಯುವ ದಾಂಡಿಗರು ಜಿಂಬಾಬ್ವೆ ಬೌಲಿಂಗ್ ದಾಳಿಯ ಚಚ್ಚಿ ಬಿಸಾಡಿದರು. ಶನಿವಾರದ ಸೇಡನ್ನು ಭಾನುವಾರ ಬಡ್ಡಿ ಸಮೇತ ತೀರಿಸಿಕೊಂಡ ಭಾರತ, ಗೆಲುವಿನ ರಣಕಹಳೆ ಮೊಳಗಿಸಿತ್ತು.

ಭಾರತಕ್ಕೂ ಎದುರಾಗಿತ್ತು ಆಘಾತ!
ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲೇ ಶುಭಮನ್ ಗಿಲ್ ಮತ್ತೊಮ್ಮೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ 2 ರನ್ಗೆ ಔಟ್ ಆಗಿದರು. ಹೀಗಿದ್ದಾಗ ಭಾರತ ತಂಡಕ್ಕೆ ಸಂಕಷ್ಟವು ಎದುರಾಗಿತ್ತು. ಆದರೆ ಆಗ ಅಭಿಷೇಕ್ ಶರ್ಮಾ & ರುತುರಾಜ್ ಗಾಯಕ್ವಾಡ್ ಜೋಡಿ ಗಟ್ಟಿಯಾಗಿ ನಿಂತು ಜಿಂಬಾಬ್ವೆ ದಾಳಿಯನ್ನು ಎದುರಿಸಿತು. ಹೀಗಾಗಿ ಭಾರತ ತಂಡ ನಿಧಾನವಾಗಿ ಚೇತರಿಕೆ ಕಂಡು ಕೊನೆ ಕೊನೆಗೆ ಒಂದು ಬೃಹತ್ ಮೊತ್ತದತ್ತ ದಾಪುಗಾಲು ಇಡಲು ಶುರು ಮಾಡಿತ್ತು.
ಶತಕ ಸಿಡಿಸಿದ ಅಭಿಷೇಕ್ ಶರ್ಮಾ!
ಅಭಿಷೇಕ್ ಶರ್ಮಾ 47 ಬಾಲ್ ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿ ಸರಿಯಾಗಿ 100 ರನ್ ಸಿಡಿಸಿ ಔಟ್ ಆದರು. ಹಾಗೆ ರುತುರಾಜ್ ಗಾಯಕ್ವಾಡ್ 1 ಸಿಕ್ಸರ್ 11 ಬೌಂಡರಿ ಸೇರಿ ಕೇವಲ 47 ಬಾಲ್ ಆಡಿ ಬರೋಬ್ಬರಿ 77 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಿಂಕು ಸಿಂಗ್ ನಿನ್ನೆ ಡಕ್ ಔಟ್ ಆಗಿದ್ದ ಸೇಡನ್ನ ಇಂದು ಜಿಂಬಾಬ್ವೆ ವಿರುದ್ಧ ತೀರಿಸಿಕೊಂಡರು. ಹೀಗೆ ಕೇವಲ 22 ಬಾಲ್ ಆಡಿದ ರಿಂಕು ಸಿಂಗ್ 5 ಸಿಕ್ಸರ್ ಸೇರಿ ಒಟ್ಟಾರೆ 48 ರನ್ ಚಚ್ಚಿದರು. ಈ ಮೂಲಕ ಭಾರತ ತಂಡ 20 ಓವರ್ನಲ್ಲಿ 234 ರನ್ ಚಚ್ಚಿದ್ದು, ಜಿಂಬಾಬ್ವೆ ತಂಡಕ್ಕೆ ಈಗ 235 ರನ್ಗಳ ಗುರಿ ನೀಡಿತ್ತು.
ಭಾರತ ತಂಡ ನೀಡಿದ್ದ 235 ರನ್ಗಳ ಗುರಿ ಬೆನ್ನು ಹತ್ತಿದ್ದ ಜಿಂಬಾಬ್ವೆ ತಂಡ ಕೇವಲ 134 ರನ್ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ. ಈ ಮೂಲಕ ಮೊದಲ ಪಂದ್ಯ ಗೆದ್ದು, 2ನೇ ಟಿ20 ಪಂದ್ಯದಲ್ಲೂ ಭಾರತವನ್ನು ಸೋಲಿಸುವ ಗುರಿ ಹೊಂದಿದ್ದ ಜಿಂಬಾಬ್ವೆ ತಂಡ ಈಗ ಹೀನಾಯ ಸೋಲಿನ ಮೂಲಕ ಸೈಲೆಂಟ್ ಆಗಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications