India VS Zimbabwe: ಭಾರತ ತಂಡದ ಸೇಡು ಕಂಪ್ಲೀಟ್, ಜಿಂಬಾಬ್ವೆ ವಿರುದ್ಧ 234 ರನ್ ಚಚ್ಚಿದ ಭಾರತ ತಂಡ!
ಭಾರತ ಕ್ರಿಕೆಟ್ ತಂಡ ಇದೀಗ ಜಿಂಬಾಬ್ವೆ ವಿರುದ್ಧ ಸೇಡಿನ ಪಂದ್ಯ ಆಡಿದ್ದು, ನಿನ್ನೆ ಹೀನಾಯ ಸೋಲು ಕಂಡ ನಂತರ ಇದೀಗ ಕೇವಲ 20 ಓವರ್ನಲ್ಲಿ 234 ರನ್ ಚಚ್ಚಿ ಬಿಸಾಡಿದೆ. ಅರೆ ಹಾಗಾದ್ರೆ ಭಾರತ ತಂಡದ ಪರವಾಗಿ ಯಾರು ಅತಿಹೆಚ್ಚು ರನ್ ಗಳಿಸಿದರು? ಶುಭಮನ್ ಗಿಲ್ ಕೊಡುಗೆ ಏನು? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡದ ಕೀರ್ತಿ ಜಗತ್ತಿನಾದ್ಯಂತ ಹಬ್ಬಿದೆ. ಆದರೂ, ಟಿ20 ವಿಶ್ವಕಪ್ ಮುಗಿದ ನಂತರ ಮೊದಲ ಪಂದ್ಯದಲ್ಲೇ ಭಾರತ ತಂಡ ದುರ್ಬಲ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡಿತ್ತು. ನಿನ್ನೆ ಅಂದ್ರೆ ಶನಿವಾರ ನಡೆದ ಭಾರತ & ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಭಾರತ ಕೇವಲ 115 ರನ್ಗಳನ್ನು ಮುಟ್ಟಲು ಆಗದೆ 102 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಿದ್ದಾಗ ಇಂದು ಆ ಸೇಡಿಗೆ ಸೇಡು ತೀರಿಸಿಕೊಂಡಿರುವ ಭಾರತ ತಂಡದ ಯುವ ಆಟಗಾರರು, ಕೇವಲ 20 ಓವರ್ನಲ್ಲಿ 234 ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ ಜಿಂಬಾಬ್ವೆ ಬೌಲರ್ಗಳಿಗೆ ಚಳಿ ಬಿಡಿಸಿದ್ದಾರೆ.

ಹರಾರೆಯಲ್ಲಿ ಜಿಂಬಾಬ್ವೆ ಹರೋಹರ!
ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಕೈಗೆ ಬ್ಯಾಟ್ ಸಿಕ್ಕ ತಕ್ಷಣ ನಿನ್ನೆಯ ಕೋಪವನ್ನು ತೀರಿಸಿಕೊಂಡ ಭಾರತ ತಂಡದ ದಾಂಡಿಗರು, ಮನಸ್ಸಿಗೆ ಬಂದಂತೆ ಬೀಸ ತೊಡಗಿದರು. ಆದರೆ ಆರಂಭದಲ್ಲೇ ಶುಭಮನ್ ಗಿಲ್ ಮತ್ತೊಮ್ಮೆ ತಮ್ಮ ಹೀನಾಯ ಬ್ಯಾಟಿಂಗ್ ಮುಂದುವರಿಸಿ, ಕೇವಲ 2 ರನ್ಗೆ ಔಟ್ ಆಗಿ ಪೆವಿಲಿಯನ್ ಗೂಡು ಸೇರಿದರು. ಆ ನಂತರವೇ ನೋಡಿ ಜಿಂಬಾಬ್ವೆ ವಿರುದ್ಧ ಜಾದೂ ನಡೆದಿತ್ತು. ಆಗ ಅಭಿಷೇಕ್ ಶರ್ಮಾ & ರುತುರಾಜ್ ಗಾಯಕ್ವಾಡ್ ಜೋಡಿ ಭರ್ಜರಿ ಬ್ಯಾಟಿಂಗ್ ಶುರು ಮಾಡಿ ಬೆಂಡೆತ್ತಲು ಆರಂಭಿಸಿತ್ತು.
ಹೀನಾಯ ಸೋಲು ಗ್ಯಾರಂಟಿ ಗುರೂ!
ಅಭಿಷೇಕ್ ಶರ್ಮಾ 47 ಬಾಲ್ ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿ ಸರಿಯಾಗಿ 100 ರನ್ ಸಿಡಿಸಿ ಔಟ್ ಆದರು. ಹಾಗೇ ರುತುರಾಜ್ ಗಾಯಕ್ವಾಡ್ 1 ಸಿಕ್ಸರ್ 11 ಬೌಂಡರಿ ಸೇರಿ ಕೇವಲ 47 ಬಾಲ್ ಆಡಿ ಬರೋಬ್ಬರಿ 77 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಿಂಕು ಸಿಂಗ್ ನಿನ್ನೆ ಡಕ್ ಔಟ್ ಆಗಿದ್ದ ಸೇಡನ್ನು ಇಂದು ಜಿಂಬಾಬ್ವೆ ವಿರುದ್ಧ ತೀರಿಸಿಕೊಂಡರು. ಹೀಗೆ ಕೇವಲ 22 ಬಾಲ್ ಆಡಿದ ರಿಂಕು ಸಿಂಗ್ 5 ಸಿಕ್ಸರ್ ಸೇರಿ ಒಟ್ಟಾರೆ 48 ರನ್ ಚಚ್ಚಿದರು. ಈ ಮೂಲಕ ಭಾರತ ತಂಡ 20 ಓವರ್ನಲ್ಲಿ 234 ರನ್ ಚಚ್ಚಿದ್ದು, ಜಿಂಬಾಬ್ವೆ ತಂಡಕ್ಕೆ ಈಗ 235 ರನ್ಗಳ ಗುರಿ ನೀಡಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications