Get Updates
Get notified of breaking news, exclusive insights, and must-see stories!

ಅಮೃತಾಂಜನ್ ಪರ ಒಲಿಂಪಿಕ್ 2020 ಪದಕ ವಿಜೇತರಿಂದ ಪ್ರಚಾರ

ಮುಂಬೈ, ಅಕ್ಟೋಬರ್ 5: ಸುದೀರ್ಘ 128 ವರ್ಷಗಳ ಶ್ರೀಮಂತ ಪರಂಪರೆ ಹೊಂದಿದ ಭಾರತದ ಆರೋಗ್ಯ ಉದ್ಯಮದಲ್ಲಿ ಮುಂಚೂಣಿ ಕಂಪನಿ ಎನಿಸಿದ ಅಮೃತಾಂಜನ್ ಹೆಲ್ತ್‌ಕೇರ್, ಟೋಕಿಯೊ 2020 ಒಲಿಂಪಿಕ್ ಗೇಮ್ಸ್, ವೇಟ್‌ಲಿಫ್ಟಿಂಗ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮತ್ತು ಕುಸ್ತಿ ಕಂಚಿನ ಪದಕ ವಿಜೇತೆ ಬಜರಂಗ್ ಪುನಿಯಾ, ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ.

ಒಲಿಂಪಿಕ್ ಚಾಂಪಿಯನ್‍ಗಳು ಕಂಪನಿಯ ಉತ್ಪನ್ನ ಶ್ರೇಣಿಯ ಅತ್ಯಾಧುನಿಕ ದೇಹದ ನೋವು ನಿರ್ವಹಣೆ ಉತ್ಪನ್ನಗಳನ್ನು ಬೆಂಬಲಿಸಲಿದ್ದಾರೆ. ಇದರಲ್ಲಿ ಬ್ಯಾಕ್ ಪೈನ್ ರೋಲ್-ಆನ್, ಜಾಯಿಂಟ್ ಮಸಲ್ ಸ್ಪ್ರೇ ಮತ್ತು ಪೈನ್ ಪ್ಯಾಚ್ ಸೇರಿವೆ.

ಉನ್ನತ ದರ್ಜೆಯ ಕ್ರೀಡಾಪಟುಗಳಾಗಿ, ಈ ಕ್ರೀಡಾಪಟುಗಳು ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಪದಕ ಗೆಲ್ಲುವ ಮೂಲಕ ಗೌರವಗಳನ್ನು ತಂದುಕೊಟ್ಟಿದ್ದಾರೆ. ಆದರೆ ಕ್ರೀಡೆಗಳಲ್ಲಿ ಯಶಸ್ಸಿನ ಹಾದಿ ಎಂದಿಗೂ ಸುಲಭವಲ್ಲ. ಈ ಆಟಗಾರರು ವಾಸ್ತವವಾಗಿ ತಮ್ಮ ನೈಜ ನೋವು, ಕಷ್ಟ ಮತ್ತು ಸವಾಲುಗಳನ್ನು ಜಯಿಸಬೇಕಾಗುತ್ತದೆ.

1893 ರಿಂದ ನೋವು ನಿರ್ವಹಣೆಯಲ್ಲಿ ಅಗ್ರಗಣ್ಯರಾಗಿರುವ ಅಮೃತಾಂಜನ್, ಲಕ್ಷಾಂತರ ಭಾರತೀಯರ ನೋವನ್ನು ಜಯಿಸಲು ಸಹಾಯ ಮಾಡುತ್ತಿದೆ ಮತ್ತು ಈ ಪಾಲುದಾರಿಕೆಯ ಮೂಲಕ, ಈ ಕ್ರೀಡಾಪಟುಗಳ ಯಶಸ್ಸಿನ ಕಥೆಗಳನ್ನು ವಿವರಿಸುವುದು ಮಾತ್ರವಲ್ಲದೆ ಈ ಶ್ರೇಷ್ಠತೆಯನ್ನು ಸಾಧಿಸಬೇಕಾದರೆ, ಅವರು ಎದುರಿಸಿದ ಕಷ್ಟಗಳನ್ನು ಬಣ್ಣಿಸುತ್ತದೆ. ಜತೆಗೆ ದೇಹದ ನೋವು ನಿರ್ವಹಣಾ ಉತ್ಪನ್ನಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಬಣ್ಣಿಸಿದರು.

ಪಾಲುದಾರಿಕೆಯ ಭಾಗವಾಗಿ, ಬ್ರಾಂಡ್ ಅಂಬಾಸಿಡರ್‌ಗಳು ಅಮೃತಾಂಜನ್‍ನ ಸುಧಾರಿತ ಬ್ಯಾಕ್ ಪೈನ್ ರೋಲ್-ಆನ್, ಜಾಯಿಂಟ್ ಮಸಲ್ ಸ್ಪ್ರೇ ಮತ್ತು ಪೈನ್ ಪ್ಯಾಚ್ ಉತ್ಪನ್ನಗಳ ದೂರದರ್ಶನ ಮತ್ತು ಡಿಜಿಟಲ್ ಜಾಹೀರಾತುಗಳನ್ನು ಒಳಗೊಂಡಂತೆ ಸರಣಿ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎಲ್ಲಾ ಉತ್ಪನ್ನಗಳು ಆರೋಗ್ಯ, ವಿಜ್ಞಾನ ಮತ್ತು ಪ್ರಕೃತಿಯ ವಿಶಿಷ್ಟ ಮಿಶ್ರಣವಾಗಿದ್ದು ಆಯುರ್ವೇದದ ಮೂಲಿಕೆಗಳಿಂದ ಕೂಡಿದೆ.

ಈ ಇಬ್ಬರು ಕ್ರೀಡಾಪಟುಗಳು ಗ್ರಾಹಕರು ಮತ್ತು ಗ್ರಾಹಕರ ಸಂಪರ್ಕ ಕಾರ್ಯಕ್ರಮಗಳಂತಹ ವಿವಿಧ ಅಭಿಯಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ವ್ಯವಸ್ಥಾಪಕ ನಿರ್ದೇಶಕ ಎಸ್. ಶಂಭು ಪ್ರಸಾದ್

ವ್ಯವಸ್ಥಾಪಕ ನಿರ್ದೇಶಕ ಎಸ್. ಶಂಭು ಪ್ರಸಾದ್

ಈ ಸಹಯೋಗದ ಬಗ್ಗೆ ವಿವರಿಸಿದ ಅಮೃತಾಂಜನ್ ಹೆಲ್ತ್‌ಕೇರ್ ಲಿಮಿಟೆಡ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಶಂಭು ಪ್ರಸಾದ್, "ಅಮೃತಾಂಜನ್ ಯಾವಾಗಲೂ ನೋವು ನಿರ್ವಹಣಾ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಹಲವು ವರ್ಷಗಳಿಂದ ಪರಿಣಾಮಕಾರಿ ನೋವು ನಿವಾರಕ ಎಂಬ ವಿಶ್ವಾಸ ಗಳಿಸಿದೆ. ಒಂದು ಕಂಪನಿಯಾಗಿ, ನಮ್ಮ ನವೀನ ಉತ್ಪನ್ನಗಳ ಮೂಲಕ ಗ್ರಾಹಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ನಾವು ಸದಾ ಶ್ರಮಿಸುತ್ತಿದ್ದೇವೆ. ನಮ್ಮ ಪರಿಣತಿಯು ವಿಜ್ಞಾನವನ್ನು ಆಯುರ್ವೇದದ ಸಹಜವಾಗಿ ಸಂಯೋಜಿಸುವುದರಲ್ಲಿ ಅಡಗಿದೆ ಮತ್ತು ನಾವು ಇದನ್ನು 1893 ರಿಂದ ಗೌರವಿಸುತ್ತಿದ್ದೇವೆ. ನಮ್ಮ ಉತ್ಪನ್ನಗಳು ನಮ್ಮ ಗ್ರಾಹಕರು ಬಯಸುವ ಪರಿಹಾರವನ್ನು ನೀಡುವಲ್ಲಿ ಪರಿಣಾಮಕಾರಿ ಎಂದು ಹೆಸರುವಾಸಿಯಾಗಿದೆ. ವೈಯಕ್ತಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುವ ಮತ್ತು ವಿಸ್ತೃತವಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಡಿಕ್ಲೋಫೆನಾಕ್‍ನಂತಹ ಸಿಂಥೆಟಿಕ್ ರಾಸಾಯನಿಕಗಳ ಬಳಕೆಗೆ ನಮ್ಮ ವಿರೋಧವಿದೆ'' ಎಂದು ಹೇಳಿದ್ದಾರೆ.

ಒಲಿಂಪಿಕ್ ಚಾಂಪಿಯನ್ನರ ಜತೆ ಸಹಿ

ಒಲಿಂಪಿಕ್ ಚಾಂಪಿಯನ್ನರ ಜತೆ ಸಹಿ

ಕಂಪನಿಯು ಈಗ ವೈಜ್ಞಾನಿಕ ಕ್ಲಿನಿಕಲ್ ಪ್ರಯೋಗಗಳ ಬೆಂಬಲದೊಂದಿಗೆ ಕಾರ್ಯಕ್ಷಮತೆ-ಆಧಾರಿತ ಕ್ಲೈಮ್‍ಗಳೊಂದಿಗೆ ಬರುವ ಹೆಚ್ಚಿನ ಉತ್ಕೃಷ್ಟವಾದ ನೋವು ನಿರ್ವಹಣಾ ಉತ್ಪನ್ನಗಳನ್ನು ನೀಡುವ ಮೂಲಕ ತನ್ನ ಬಂಡವಾಳವನ್ನು ಬೆಳೆಯುವತ್ತ ಗಮನ ಹರಿಸಿದೆ. ಹೆಮ್ಮೆಯ ಭಾರತೀಯ ಬ್ರಾಂಡ್ ಆಗಿ, ಒಲಿಂಪಿಕ್ ಚಾಂಪಿಯನ್ನರ ಜತೆ ಸಹಿ ಮಾಡುವುದು ನಮಗೆ ಅಪಾರ ಸಂತಸ ತಂದಿದೆ.

ನಮ್ಮ ಬ್ರಾಂಡ್ ಅಂಬಾಸಿಡರ್‌ಗಳಾಗಿ ನಮ್ಮ ಒಲಂಪಿಕ್ ಚಾಂಪಿಯನ್‍ಗಳ ಜತೆ ಸಹಿ ಹಾಕುವುದು ನಮಗೆ ಅಪಾರ ಸಂತಸ ತಂದಿದೆ. ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶಕ್ಕೆ ಯಶಸ್ಸನ್ನು ಸಾಧಿಸಲು ಅವರು ಅಪಾರವಾಗಿ ಶ್ರಮಿಸಿದ್ದಾರೆ. ನಾವು ಅವರ ಜತೆ ಸಹಯೋಗ ಹೊಂದಲು ಹೆಮ್ಮೆ ಪಡುತ್ತಿದ್ದೇವೆ ಎಂದು ಬಣ್ಣಿಸಿದರು.

ಮಾರ್ಕೆಟಿಂಗ್ ಆಫೀಸರ್ ಮಣಿ ಭಗವತೀಶ್ವರನ್

ಮಾರ್ಕೆಟಿಂಗ್ ಆಫೀಸರ್ ಮಣಿ ಭಗವತೀಶ್ವರನ್

ಅಮೃತಾಂಜನ್ ಹೆಲ್ತ್ ಕೇರ್ ಲಿಮಿಟೆಡ್‍ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಮಣಿ ಭಗವತೀಶ್ವರನ್, "ಮೀರಾಬಾಯಿ ಮತ್ತು ಭಜರಂಗ್ ಭವಿಷ್ಯದ ಪೀಳಿಗೆಗೆ ಮಾದರಿ ಮತ್ತು ಯುವ ಪ್ರತಿಮೆಗಳಾಗಿ ಹೊರಹೊಮ್ಮಿದ್ದಾರೆ. ನೋವು ಅಥವಾ ಹಿನ್ನಡೆಗಳ ಹೊರತಾಗಿಯೂ ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಮನೋಭಾವವನ್ನು ಅವರು ಸಾಕಾರಗೊಳಿಸುತ್ತಾರೆ ಮತ್ತು ಇದು ನಮ್ಮ ಬ್ರ್ಯಾಂಡ್ ಪ್ರತಿಧ್ವನಿಸುವ ಮೌಲ್ಯವಾಗಿದೆ. ಕ್ರೀಡಾಪಟುಗಳ ಈ ಸಹಯೋಗ ಮತ್ತು ಕಥೆಗಳ ಮೂಲಕ ನಾವು ನೋವನ್ನು ಜಯಿಸಬಹುದು ಮತ್ತು ನಿಮ್ಮ ಕನಸುಗಳನ್ನು ಸಾಧಿಸುವುದನ್ನು ತಡೆಯಬಾರದು ಎಂಬ ಅಂಶವನ್ನು ನಾವು ಹೈಲೈಟ್ ಮಾಡಲು ಬಯಸುತ್ತೇವೆ.'' ಎಂದರು.

ಮೀರಾಬಾಯಿ ಚಾನು ಮಾತನಾಡಿ

ಮೀರಾಬಾಯಿ ಚಾನು ಮಾತನಾಡಿ

ಈ ಸಹಯೋಗದ ಬಗ್ಗೆ ಮಾತನಾಡಿದ ಮೀರಾಬಾಯಿ ಚಾನು, "ನೋವು ನಿರ್ವಹಣಾ ಉತ್ಪನ್ನಗಳ ಬಂಡವಾಳವನ್ನು ಉತ್ತೇಜಿಸಲು ಅಮೃತಾಂಜನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ನನಗೆ ಅತೀವ ಸಂತಸ ತಂದಿದೆ. ಕ್ರೀಡಾಪಟುವಾಗಿ, ನಾವು ದೈಹಿಕ ನೋವನ್ನು ಸಹಿಸಿಕೊಳ್ಳಬೇಕು ಮತ್ತು ಇನ್ನೂ ಪ್ರದರ್ಶನವನ್ನು ಮುಂದುವರಿಸಬೇಕು. ನೋವು ಬಹುತೇಕ ಅಸಹನೀಯವಾಗಿದ್ದ ದಿನಗಳಲ್ಲಿ, ಅಮೃತಂಜನ್‍ನ ಪೈನ್ ರಿಲೀಫ್ + ಪ್ಯಾಚ್ ಮತ್ತು ಬ್ಯಾಕ್‍ಪೈನ್ ರೋಲ್-ಆನ್ ನಂತಹ ಉತ್ಪನ್ನಗಳು ನನ್ನ ರಕ್ಷಣೆಗೆ ಬಂದಿವೆ. ಇಟ್ಸ್ ಹಾಟ್ ಆಕ್ಷನ್ 'ಶಾಖ ಚಿಕಿತ್ಸೆಯು 30 ಸೆಕೆಂಡುಗಳ ಒಳಗೆ ಕೆಲಸ ಮಾಡಲು ಆರಂಭಿಸುತ್ತದೆ" ಎಂದು ಹೇಳಿದರು.

ಭಜರಂಗ್ ಪುನಿಯಾ ಮಾತನಾಡಿ

ಭಜರಂಗ್ ಪುನಿಯಾ ಮಾತನಾಡಿ

ಭಜರಂಗ್ ಪುನಿಯಾ ಮಾತನಾಡಿ "ಉತ್ತಮ ಕಾರ್ಯಕ್ಷಮತೆಯ ಕ್ರೀಡಾಪಟುವಾಗಿ, ನಾನು ಯಾವಾಗಲೂ ನನ್ನ ಸ್ಪರ್ಧೆಯಲ್ಲಿ ಮುನ್ನಡೆಯುವ ಸಾಧ್ಯತೆಯನ್ನು ಹುಡುಕುತ್ತಿದ್ದೇನೆ ಮತ್ತು ಜಂಟಿ, ಸ್ನಾಯು ಮತ್ತು ಒಟ್ಟಾರೆಯಾಗಿ ದೇಹದ ನೋವಿಗೆ ನನಗೆ ಸಹಾಯ ಮಾಡಲು ಅಮೃತಾಂಜನ ಜಾಯಿಂಟ್ ಮಸಲ್ + ಸ್ಪ್ರೇ ಬಳಸುವುದನ್ನು ಎದುರು ನೋಡುತ್ತಿದ್ದೇನೆ. ಇದಲ್ಲದೆ, ಕುಸ್ತಿಗಳಂತಹ ಯುದ್ಧ ಕ್ರೀಡೆಗಳಲ್ಲಿನ ಕ್ರೀಡಾಪಟುಗಳಿಗೆ, ಚೇತರಿಕೆಯು ಅತ್ಯುನ್ನತ ಪ್ರದರ್ಶನದಷ್ಟೇ ಮುಖ್ಯವಾಗಿದೆ. ಈ ಸ್ಪ್ರೇ ನೋವು ಪೀಡಿತ ಸ್ನಾಯುವನ್ನು ತಲುಪುತ್ತದೆ ಮತ್ತು ನೋವನ್ನು ತಕ್ಷಣವೇ ಹೊರಹಾಕುತ್ತದೆ, ಇದು ತೀವ್ರವಾದ ತರಬೇತಿ ಅವಧಿಯ ನಂತರ ಅಥವಾ ಸ್ಪರ್ಧೆಯ ನಡುವೆ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ'' ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+