ನಾಯಕನಾಗಿ ಮೊದಲ ಪಂದ್ಯಕ್ಕೆ ಮುನ್ನವೇ ಸೂರ್ಯಕುಮಾರ್ ಯಾದವ್‌ಗೆ ಅವಮಾನ!

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಸೋಲಿನ ಆಘಾತದ ನಂತರ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಮೊದಲ ಪಂದ್ಯ ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಭಾರತ ತಂಡದ ಯುವ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ.

ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇತರ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ನಾಯಕನಾಗಿ ಆಯ್ಕೆ ಮಾಡಲಾಯಿತು.

Ind vs Aus: Just Two Journalists at Suryakumar Yadavs First Captaincy PC

ಸೂರ್ಯಕುಮಾರ್ ಯಾದವ್‌ಗೆ ಅಗೌರವ

ಮೊದಲ ಪಂದ್ಯಕ್ಕೆ ಮುನ್ನವೇ ನಾಯಕನಾಗಿ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸೂರ್ಯಕುಮಾರ್ ಯಾದವ್ ಅವರಿಗೆ ಅಗೌರವ ತೋರಿಸಲಾಗಿದೆ. ಮಾಧ್ಯಮ ಸಂವಾದದಲ್ಲಿ ಕೇವಲ ಇಬ್ಬರು ಪತ್ರಕರ್ತರು ಮಾತ್ರ ಹಾಜರಿದ್ದರು.

ಹಿರಿಯ ಕ್ರಿಕೆಟ್ ಪತ್ರಕರ್ತ ವಿಮಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಿಂದ ಆಘಾತಕಾರಿ ವಿವರಗಳನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡರು. ವಿಶ್ವಕಪ್ ಸಮಯದಲ್ಲಿ 200ಕ್ಕೂ ಹೆಚ್ಚು ಮಾಧ್ಯಮಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಈಗ ಅದು ಕೇವಲ ಎರಡಕ್ಕೆ ಬಂದಿದೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

"ಸೂರ್ಯಕುಮಾರ್ ಯಾದವ್ ನಾಯಕನಾಗಿ ತನ್ನ ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಊಹಿಸಿರಲಿಲ್ಲ. ಇದು ಭಾರತದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಡಿಮೆ ಹಾಜರಾತಿ ಹೊಂದಿರುವ ದಾಖಲೆಯೇ?ನಾನು ಹಾಗೆ ಕಲ್ಪಿಸಿಕೊಳ್ಳುತ್ತೇನೆ" ಎಂದು ವಿಮಲ್ ಕುಮಾರ್ ಬರೆದಿದ್ದಾರೆ.

ವಿಶ್ವಕಪ್ ಸೋಲಿನ ಬಗ್ಗೆ ಸೂರ್ಯ ಹೇಳಿದ್ದೇನು?

ಏಕದಿನ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, "ಇದು ನಿರಾಶಾದಾಯಕವಾಗಿದೆ, ನಿಸ್ಸಂಶಯವಾಗಿ ಬೇಸರವಾಗುತ್ತದೆ. ಆರಂಭದಿಂದ ನಾವು ಉತ್ತಮ ಪ್ರದರ್ಶನ ನೀಡಿದ್ದೆವು, ನಾವು ಮೈದಾನದಲ್ಲಿ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ರೀತಿಗೆ ಪ್ರತಿಯೊಬ್ಬ ಸದಸ್ಯರು, ಆಟಗಾರರು ಮಾತ್ರವಲ್ಲ, ಇಡೀ ಭಾರತ ಹೆಮ್ಮೆಪಡುತ್ತದೆ. ಪಂದ್ಯಾವಳಿಯುದ್ದಕ್ಕೂ ನಾವು ಆಡಿದ ಕ್ರಿಕೆಟ್‌ನ ಬ್ರಾಂಡ್‌ನ ಧನಾತ್ಮಕವಾಗಿತ್ತು. ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ" ಎಂದು ಸೂರ್ಯಕುಮಾರ್ ಹೇಳಿದರು.

"ಇದು ಕಷ್ಟ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನೀವು ಮರುದಿನ ಬೆಳಿಗ್ಗೆ ಎದ್ದು, ಸಂಭವಿಸಿದ ಎಲ್ಲವನ್ನೂ ಮರೆತುಬಿಡುವುದು ಸಾಧ್ಯವಿಲ್ಲ. ಅದೊಂದು ಸುದೀರ್ಘ ಟೂರ್ನಿಯಾಗಿತ್ತು. ನಿಸ್ಸಂಶಯವಾಗಿ, ನಾವು ಗೆಲ್ಲಲು ಇಷ್ಟಪಡುತ್ತಿದ್ದೆವು. ಆದರೆ ಅದು ಆಗಲಿಲ್ಲ ಮರೆತು ಮುಂದುವರಿಯಬೇಕು" ಎಂದು ಹೇಳಿದರು.

ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಅವೇಶ್ ಖಾನ್, ಮುಖೇಶ್ ಕುಮಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+