Get Updates
Get notified of breaking news, exclusive insights, and must-see stories!

ಹಾಲಿ ಕೋಚ್‌ ಗೌತಮ್‌ ಗಂಭೀರ್‌ಗೆ, ಮಾಜಿ ಕೋಚ್‌ ದ್ರಾವಿಡ್‌ ಕಿವಿ ಮಾತು

ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸ ಆರಂಭಿಸಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್‌ ಗಂಭೀರ್‌ ಕಾರ್ಯ ನಿರ್ವಹಿಸಲಿದ್ದಾರೆ. ಕೋಚ್‌ ಆಗಿ ಗೌತಿ ಅವರಿಗೆ ಇದು ಮೊದಲ ಪರೀಕ್ಷೆ. ಗೌತಮ್‌ ಗಂಭೀರ್‌ ಅವರಿಗೆ ಟಿ20 ವಿಶ್ವಕಪ್‌ ವಿಜೇತ ಕೋಚ್ ರಾಹುಲ್‌ ದ್ರಾವಿಡ್‌ ಅವರು ವಿಡಿಯೋ ಸಂದೇಶ್‌ ರವಾನಿಸಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಲ್ಯಾಪ್‌ಟಾಪ್ ಅನ್ನು ತೆರೆಯುವುದನ್ನು ಈ ವೀಡಿಯೊದಲ್ಲಿ ನೋಡಬಹುದು ಮತ್ತು ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸಂದೇಶವು ಆರಂಭವಾಗುತ್ತದೆ.

Gautam Gambhir Takes on New Role as India s Head Coach with Rahul Dravid s Support

ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್, 'ನಮಸ್ಕಾರ ಗೌತಮ್, ವಿಶ್ವದ ಅತ್ಯಂತ ಬೆಸ್ಟ್ ಕೆಲಸಕ್ಕೆ ಸ್ವಾಗತ. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನನ್ನ ಅಧಿಕಾರಾವಧಿ ಮುಗಿದು ಮೂರು ವಾರಗಳು ಕಳೆದಿವೆ ಎಂದು ದ್ರಾವಿಡ್ ತಮ್ಮ ಅನುಭವ ತಿಳಿಸಿದ್ದಾರೆ.

ನೆನಪುಗಳ ಮೆಲಕು

ಇನ್ನು ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೋಲಿನಿ ಚಾಂಪಿಯನ್‌ ಪಟ್ಟಕೇರಿದ್ದ ಭಾರತ ತಂಡಕ್ಕೆ, ಮುಂಬೈನಲ್ಲಿ ಅಭೂತ್‌ಪೂರ್ವ ಸ್ವಾಗತವನ್ನು ನೀಡಲಾಗಿತ್ತು. ಇದನ್ನೇ ನೇನಪಿಸಿಕೊಂಡಿರುವ ದ್ರಾವಿಡ್ ಇದೊಂದು ಸ್ಮರಣೀಯ ಕ್ಷಣ ಎಂದು ಬಣಿಸಿದ್ದಾರೆ.

Gautam Gambhir Takes on New Role as India s Head Coach with Rahul Dravid s Support

ತಂಡದೊಂದಿಗೆ ಇದ್ದಾಗಿನ ತಮ್ಮ ನೆನಪುಗಳು ಮನದಲ್ಲಿ ಹಸಿರಾಗಿದೆ. ಆಟಗಾರರ ಸ್ನೇಹವನ್ನು ಆನಂದಿಸಿದ್ದೇನೆ. ನೀವು ಈಗ ಭಾರತ ತಂಡದ ಕೋಚ್‌ ಆಗಿ ಕಾರ್ಯವನ್ನು ಮಾಡಲಿದ್ದೀರಿ. ನಿಮಗೂ ಸಹ ಅದೇ ರೀತಿಯ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

ಒತ್ತಡದಲ್ಲಿದ್ದಾಗ ಹೀಗೆ ಮಾಡಿ?

ಒತ್ತಡದಲ್ಲಿದ್ದಾಗ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಗೌತಮ್‌ ಗಂಭೀರ್‌ಗೆ ದ್ರಾವಿಡ್‌ ಸಲಹೆ ನೀಡಿದ್ದಾರೆ. ಕಷ್ಟದಲ್ಲಿದ್ದಾಗ ನೀವು ಒಮ್ಮೆ ದೊಡ್ಡ ಉಸಿರು ತೆಗೆದುಕೊಂಡು, ಒಂದು ಹೆಜ್ಜೆ ಹಿಂದೆ ಹೋಗಿ, ನಗುತ್ತಾ ಇರಿ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ನಾವು ಒಂದೇ ತಂಡದ ಆಟಗಾರರಾಗಿದ್ದಾಗ, ನೀವು ಬ್ಯಾಟಿಂಗ್‌ನಲ್ಲಿ ಮಾಡಿದ ಸಾಧನೆ ಅಮೋಘ. ತಂಡದ ಸಹ ಆಟಗಾರನಾಗಿ ನಿಮ್ಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅನ್ನು ನಾನು ನೋಡಿದ್ದೇನೆ. ಹಲವು ಐಪಿಎಲ್ ಸೀಸನ್‌ಗಳಲ್ಲಿ ನೀವು ಗೆಲ್ಲಲು ಎಷ್ಟು ತಂಡಕ್ಕೆ ಪ್ರೇರೇಪಿಸಿದ್ದೀರಿ ಎಂದು ನಾನು ಗಮನಿಸಿದ್ದೇನೆ. ಮತ್ತು ನೀವು ಯುವ ಆಟಗಾರರಿಗೆ ಸಹಾಯ ಮಾಡುವುದನ್ನು ನಾನು ನೋಡಿದ್ದೇನೆ. ಇಲ್ಲೂ ತಂಡಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಇಲ್ಲಿ ಆಟಗಾರರು ಸೇರಿದಂತೆ ಎಲ್ಲರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ ಎಂದಿದ್ದಾರೆ.

ಒತ್ತಡದಲ್ಲಿದ್ದಾಗ ಹೀಗೆ ಮಾಡಿ?

ಒತ್ತಡದಲ್ಲಿದ್ದಾಗ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಗೌತಮ್‌ ಗಂಭೀರ್‌ಗೆ ದ್ರಾವಿಡ್‌ ಸಲಹೆ ನೀಡಿದ್ದಾರೆ. ಕಷ್ಟದಲ್ಲಿದ್ದಾಗ ನೀವು ಒಮ್ಮೆ ದೊಡ್ಡ ಉಸಿರು ತೆಗೆದುಕೊಂಡು, ಒಂದು ಹೆಜ್ಜೆ ಹಿಂದೆ ಹೋಗಿ, ನಗುತ್ತಾ ಇರಿ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಗೌತಿ ಹೇಳಿದ್ದೇನು?

ದ್ರಾವಿಡ್‌ ಕಳಿಸಿದ ಸಂದೇಶಕ್ಕೆ ಗೌತಮ್‌ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದೇಶ ನನಗೆ ಎಷ್ಟು ಮಹತ್ವದಾಗಿದೆ ಎಂಬುದು ನನಗೆ ತಿಳಿದಿದೆ. ಈ ಸಂದೇಶ ನಿಮ್ಮಿಂದ ಬಂದಿದ್ದು ನನಗೆ ಇನ್ನಷ್ಟು ಬೂಸ್ಟ್ ನೀಡಲಿದೆ. ದೇಶ ಕಂಡ ನಿಸ್ವಾರ್ಥ ಆಟಗಾರ. ದ್ರಾವಿಡ್‌ ಭಾರತೀಯ ಕ್ರಿಕೆಟ್‌ಗಾಗಿ ಏನು ಮಾಡಿದರೂ ಮತ್ತು ಎಲ್ಲವೂ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯ. ಮುಂದಿನ ಪೀಳಿಗೆಗೂ ಇವರು ಮಾದರಿ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+