FIFA World Cup 2022 : ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಫಿಫಾ ವಿಶ್ವಕಪ್ ಲೈವ್ ಪ್ರದರ್ಶನ
ನವದೆಹಲಿ, ನವೆಂಬರ್ 24: ಮಲ್ಟಿಪ್ಲೆಕ್ಸ್ ಆಪರೇಟರ್ ಐನಾಕ್ಸ್ ಲೇಸರ್ ಬುಧವಾರ 15 ನಗರಗಳಲ್ಲಿನ ತನ್ನ 22 ಮಲ್ಟಿಪ್ಲೆಕ್ಸ್ಗಳಲ್ಲಿ ಫಿಫಾ ವಿಶ್ವಕಪ್ನ ಲೈವ್ ಪಂದ್ಯಗಳನ್ನು ಪ್ರದರ್ಶಿಸುವುದಾಗಿ ಘೋಷಿಸಿದೆ.
ಕತಾರ್ ದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರ ಸುಮಾರು 40 ಪಂದ್ಯಗಳನ್ನು ನೇರ ಪ್ರಸಾರ ಮಾಡುವುದಾಗಿ ಐನಾಕ್ಸ್ ಘೋಷಿಸಿದೆ. ಈ ವಾರದಲ್ಲಿ ಆರಂಭವಾದ ಫಿಫಾ ವಿಶ್ವಕಪ್ ಡಿಸೆಂಬರ್ 18ರವರೆಗೂ ನಡೆಯಲಿದೆ.
ಸಾಕರ್ ಅಭಿಮಾನಿಗಳು ತನ್ನ ಮಲ್ಟಿಪ್ಲೆಕ್ಸ್ನಲ್ಲಿ ಕಾರ್ನೀವಲ್ನಂತಹ ವಾತಾವರಣದಲ್ಲಿ ಕ್ರೀಡಾಂಗಣದ ಅನುಭವವನ್ನು ಕಂಡುಕೊಳ್ಳುತ್ತಾರೆ ಎಂದು ಐನಾಕ್ಸ್ ಹೇಳಿಕೆ ತಿಳಿಸಿದೆ.

ಮರೆಯಲಾಗದ ನೆನಪುಗಳನ್ನು ನೀಡುವ ಅವಕಾಶ
ಐನಾಕ್ಸ್ ಲಿಯೋಸುರ್ ಸಿಇಒ ಅಲೋಕ್ ಟಂಡನ್ ಮಾತನಾಡಿದ್ದು, "ಈ ಮೂಲಕ ಮರೆಯಲಾಗದ ಅನುಭವ ಮತ್ತು ನೆನಪುಗಳನ್ನು ಸೃಷ್ಟಿಸುವ, ಅವಕಾಶವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕ್ರೀಡಾಂಗಣದಲ್ಲಿಯೇ ಇದ್ದಂತಹ ಅನುಭವ ಅಭಿಮಾನಿಗಳಿಗೆ ಆಗುತ್ತದೆ. ಈ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಈ ಐತಿಹಾಸಿಕ ಸ್ಕ್ರೀನಿಂಗ್ ಮೂಲಕ ಕ್ರೀಡೆಯೊಂದಿಗೆ ಹೊಸತನದ ಪಯಣ ಪ್ರಾರಂಭವಾಗಲಿದೆ' ಎಂದು ಹೇಳಿದ್ದಾರೆ.
ಪರ್ಯಾಯ ಆದಾಯಕ್ಕಾಗಿ ಹೊಸ ಹಾದಿ
ಈ ಹಿಂದೆ ಐನಾಕ್ಸ್ ಇತ್ತೀಚೆಗೆ ಮುಕ್ತಾಯಗೊಂಡ ಪುರುಷರ ಟಿ-20 ವಿಶ್ವಕಪ್ 2022 ಮತ್ತು ಏಷ್ಯಾ ಕಪ್ ಪಂದ್ಯಗಳ ಆಯ್ದ ಪಂದ್ಯಗಳನ್ನು ತನ್ನ ಆಯ್ದ ಪರದೆಗಳಲ್ಲಿ ಲೈವ್ ಆಗಿ ಪ್ರಸಾರ ಮಾಡಿತ್ತು. ಈಗ ಸುಮಾರು ಎರಡು ವರ್ಷಗಳಿಂದ ಲಾಕ್ಡೌನ್ ಮತ್ತು ಕೋವಿಡ್-ಪ್ರೇರಿತ ನಿರ್ಬಂಧದ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾದ ಮಲ್ಟಿಪ್ಲೆಕ್ಸ್ ಉದ್ಯಮವು ಸಾಂಪ್ರದಾಯಿಕ ಚಲನಚಿತ್ರ ಪ್ರದರ್ಶನ ವ್ಯವಹಾರವನ್ನು ಮೀರಿ ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿದೆ.
ವ್ಯಾಪಾರಿಗಳು ಸಹ ವ್ಯಾಪಾರಕ್ಕಾಗಿ ಚಲನಚಿತ್ರಗಳ ಖಾಸಗಿ ಪ್ರದರ್ಶನದಂತಹ ಹೊಸ ಕ್ರಮಗಳನ್ನು ಕಂಡುಕೊಂಡಿದ್ದಾರೆ. ಈ ಉದ್ಯಮವು ತನ್ನ ಆದಾಯವನ್ನು ಹೆಚ್ಚಿಸುವ ಮೂಲಕ ಆಹಾರ ಮತ್ತು ಪಾನೀಯ (ಎಫ್ & ಬಿ) ವಿಭಾಗದಿಂದ ಆದಾಯವನ್ನು ವೃದ್ಧಿಸಿಕೊಳ್ಳುವ ಕೆಲಸ ಮಾಡುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications