Ranji Trophy: ತಮಿಳುನಾಡು ಸೋಲಿಗೆ ನಾಯಕನ ದೂಷಿಸಿದ ಕೋಚ್ ವಿರುದ್ಧ ಕಿಡಿಕಾರಿದ ದಿನೇಶ್ ಕಾರ್ತಿಕ್
ಯಾವುದೇ ಆಟವೆಂದರೆ ಅಲ್ಲಿ ಸೋಲು ಗೆಲುವು ಸಾಮಾನ್ಯವಾಗಿದೆ. ಸೋಲಿಗೆ ಹಲವು ಕಾರಣ ಇದ್ದರು, ಕೋಚ್ ತಂಡದ ನಾಯಕನ ಮೇಲೆ ಬಹಿರಂಗವಾಗಿ ಕಿಡಿ ಕಾರುವುದನ್ನು ನೋಡುವುದಿಲ್ಲ. ಆದರೆ, ತಮಿಳುನಾಡು ತಂಡದ ಕೋಚ್ ತಂಡದ ನಾಯಕನ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿರುವುದು ದಿನೇಶ್ ಕಾರ್ತಿಕ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
7 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸೆಮಿ ಫೈನಲ್ ತಲುಪಿದ್ದ ತಮಿಳುನಾಡು, ಮುಂಬೈ ವಿರುದ್ಧ ಸೋಲುವ ಮೂಲಕ ಫೈನಲ್ ತಲುಪುವ ಅವಕಾಶ ಕಳೆದುಕೊಂಡಿದೆ. ತಮಿಳುನಾಡು ಸೋತ ಬಳಿಕ ಕೋಚ್ ಸುಲಕ್ಷಣ್ ಕುಲಕರ್ಣಿ ಅವರು ನಾಯಕ ಸಾಯಿ ಕಿಶೋರ್ ಅವರನ್ನು ಟೀಕಿಸಿದ್ದರು.

ಟಾಸ್ ಗೆದ್ದ ಬಳಿಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇ ಕಾರಣ ಎಂದು ಸುಲಕ್ಷಣ್ ಕುಲಕರ್ಣಿ ಹೇಳಿದ್ದು, ಸೋಲಿನ ಹೊಣೆಯನ್ನು ಸಾಯಿ ಕಿಶೋರ್ ತಲೆಗೆ ಕಟ್ಟಿದ್ದಾರೆ.
This is soo WRONG
— DK (@DineshKarthik) March 5, 2024
This is so disappointing from the coach ..instead of backing the captain who has brought the team to the semis after 7 yrs and thinking it's a start for good things to happen, the coach has absolutely thrown his captain and team under the bus
👎🏽👎🏽👎🏽👎🏽👎🏽 https://t.co/Ii61X7Ajqs
ದಿನೇಶ್ ಕಾರ್ತಿಕ್ ಅಸಮಾಧಾನ
ಕುಲಕರ್ಣಿ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ತಮಿಳುನಾಡು ಅಭಿಮಾನಿಗಳು ಕೋಚ್ ಅನ್ನು ಟೀಕಿಸಿದರು. ಭಾರತದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರಾಶೆಯನ್ನು ಹಂಚಿಕೊಂಡಿದ್ದಾರೆ.
"ಇದು ತುಂಬಾ ತಪ್ಪು, 7 ವರ್ಷಗಳ ನಂತರ ತಮಿಳುನಾಡು ತಂಡವನ್ನು ಸೆಮಿಸ್ಗೆ ತಂದ ನಾಯಕನನ್ನು ಬೆಂಬಲಿಸುವ ಬದಲು ಕೋಚ್ನಿಂದ ಈ ವರ್ತನೆ ತುಂಬಾ ನಿರಾಶಾದಾಯಕವಾಗಿದೆ. ಮುಂದಿನ ಆವೃತ್ತಿಗೆ ಇದು ಉತ್ತಮ ಆರಂಭ ಎಂದು ಭಾವಿಸಬೇಕಿತ್ತು. ಆದರೆ ಕೋಚ್ ತನ್ನ ನಾಯಕ ಮತ್ತು ತಂಡವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ" ಎಂದು ಕಾರ್ತಿಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುಲಕರ್ಣಿ ಅವರು ತಮ್ಮ ನಾಯಕ ಸಾಯಿ ಕಿಶೋರ್ ಅವರನ್ನು ಟೀಕಿಸಲು ಹಿಂಜರಿಯಲಿಲ್ಲ, ಮೊದಲು ಬ್ಯಾಟ್ ಮಾಡುವ ನಿರ್ಧಾರವು ಸೆಮಿಫೈನಲ್ನಲ್ಲಿ ತಂಡದ ಸೋಲಿಗೆ ಕಾರಣವಾಯಿತು ಎಂದು ಸೂಚಿಸಿದರು.
"ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ಮೊದಲ ದಿನದಂದು ನಾವು 9 ಗಂಟೆಗೆ ಪಂದ್ಯವನ್ನು ಕಳೆದುಕೊಂಡಿದ್ದೇವೆ" ಎಂದು ತಮಿಳುನಾಡು ಸೆಮಿಫೈನಲ್ ಸ್ಪರ್ಧೆಯಲ್ಲಿ ಮುಂಬೈ ವಿರುದ್ಧ ಇನ್ನಿಂಗ್ಸ್ ಮತ್ತು 70 ರನ್ಗಳಿಂದ ಸೋತ ನಂತರ ಕುಲಕರ್ಣಿ ಹೇಳಿದರು.
"ವಿಕೆಟ್ ನೋಡಿದ ಕ್ಷಣದಲ್ಲಿ ನಾವು ಏನು ಪಡೆಯಲಿದ್ದೇವೆ ಎಂದು ನನಗೆ ನಿಖರವಾಗಿ ತಿಳಿದಿತ್ತು. ಎಲ್ಲವನ್ನೂ ಹೊಂದಿಸಲಾಗಿದೆ, ನಾವು ಟಾಸ್ ಗೆದ್ದಿದ್ದೇವೆ, ಕೋಚ್ ಆಗಿ, ಮುಂಬೈಕರ್ ಆಗಿ, ನನಗೆ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿವೆ. ನಾವು ಬೌಲಿಂಗ್ ಮಾಡಬೇಕಿತ್ತು ಆದರೆ ನಾಯಕನಿಗೆ ಅದು ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.
"ಕ್ವಾರ್ಟರ್ ಫೈನಲ್ನಲ್ಲಿ ಅವರು ವಿಭಿನ್ನ ಪಿಚ್ನಲ್ಲಿ ಆಡಿದ್ದಾರೆ ಮತ್ತು ಅವರು ಯಾವ ವಿಕೆಟ್ ನೀಡಿದರು ಎಂದು ನಾನು ನೋಡಿದಾಗ, ಇದು ಸೀಮಿಂಗ್ ಸ್ನೇಹಿ ವಿಕೆಟ್ ಎಂದು ನಾನು ಅರಿತುಕೊಂಡೆ ಮತ್ತು ಇದು ತುಂಬಾ ಕಠಿಣ ಪಂದ್ಯವಾಗಲಿದೆ, ನಾವು ಈ ಪಂದ್ಯವನ್ನು ಗೆಲ್ಲಲು ನಿಜವಾಗಿಯೂ ಉತ್ತಮವಾಗಿ ಆಡಬೇಕು, "ಎಂದು ಕುಲಕರ್ಣಿ ಹೇಳಿದರು.
ಅಂತಿಮವಾಗಿ ಸಾಯಿ ಕಿಶೋರ್ ಅವರೇ ಬಾಸ್. ನಾನು ನನ್ನ ಪ್ರತಿಕ್ರಿಯೆ ಮತ್ತು ಇನ್ಪುಟ್ಗಳನ್ನು ವಿಕೆಟ್ಗಳ ಪ್ರಕಾರ ಮತ್ತು ಮುಂಬೈನ ಮನಸ್ಥಿತಿಯನ್ನೂ ನೀಡಬಲ್ಲೆ ಅಷ್ಟೇ ಎಂದು ಹೇಳಿದ್ದಾರೆ.












Click it and Unblock the Notifications