ಬೆಂಗಳೂರು ತಂಡ ಮಾರಾಟ ಬಗ್ಗೆ, 2026 ಐಪಿಎಲ್ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಅಂತಾ... Bengaluru Team RCB
ಆರ್ಸಿಬಿ ಬೆಂಗಳೂರು ತಂಡದ ಪರವಾಗಿ 7,00,00,000 ಕನ್ನಡಿಗರು ಸದಾ ನಿಲ್ಲುತ್ತಾರೆ, ಬೆಂಗಳೂರು ತಂಡ ಗೆಲ್ಲಬೇಕು ಅಂತಾ ಹರಕೆ ಹೊತ್ತಿದ್ದ ಆರ್ಸಿಬಿ ಅಭಿಮಾನಿಗಳ ಆಸೆ ಕೂಡ 2025ರ ಐಪಿಎಲ್ ಟೂರ್ನಿಯಲ್ಲಿ ಈಡೇರಿತ್ತು. ಹೀಗಾಗಿ ಆರ್ಸಿಬಿ ಬೆಂಗಳೂರು ತಂಡದ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಮುಂದಿನ ಐಪಿಎಲ್ ಟೂರ್ನಿ ಸಾಕಷ್ಟು ಗಮನ ಸೆಳೆದು ಕೋಟಿ ಕೋಟಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಬೆಂಗಳೂರು ತಂಡ ಮಾರಾಟ, 2026 ಐಪಿಎಲ್ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಅಂತಾ...
ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಆರ್ಸಿಬಿ, ಆರ್ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ರೀತಿ ಬೆಂಗಳೂರು ತಂಡ ಅಬ್ಬರಿಸಿ 2025ರ ಸಾಲಿನ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ವಿರಾಟ್ ಕೊಹ್ಲಿ ಫ್ಯಾನ್ಸ್ ಮಾತ್ರವಲ್ಲ ಇಡೀ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ಬೆಂಗಳೂರು ತಂಡ ಆರ್ಸಿಬಿ ಗೆದ್ದು ಬೀಗಿದ್ದು ಭಾರಿ ದೊಡ್ಡ ಖುಷಿ ಕೂಡ ನೀಡಿತ್ತು. ಅಲ್ಲದೆ ರಸ್ತೆ ರಸ್ತೆಗಳಲ್ಲೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡುತ್ತಾ ಪ್ರಪಂಚದ ಗಮನ ಸೆಳೆದಿದ್ದರು. ಈ ಮೂಲಕ ತಮ್ಮ ಖುಷಿ ಹಂಚಿಕೊಂಡರು, ಆದರೆ ಇದೀಗ ದಿಢೀರ್ ಆಘಾತಕಾರಿ ಸುದ್ದಿ ಹೊರಬಿದ್ದು ಭಯ ಹುಟ್ಟಿಸಿದೆ...

ಬೆಂಗಳೂರು ತಂಡ ಮಾರಾಟದ ಬಗ್ಗೆ...
ಐಪಿಎಲ್ ಅಂದ್ರೆ ಸಾಕು ಕೋಟಿ, ಕೋಟಿ ರೂಪಾಯಿ ಅನ್ನೋದನ್ನ ಕೇಳಿ ನಿಮಗೂ ಸಾಕಾಗಿ ಹೋಗಿದೆ ಅನಿಸುತ್ತೆ. ಏನಪ್ಪಾ ಕೋಟಿ ರೂಪಾಯಿಗೆ ಬೆಲೆಯೇ ಇಲ್ವಾ? ಅಂತಾ ಕೂಡ ನಿಮ್ಮ ಮನಸ್ಸಲ್ಲಿ ಬಂದೇ ಬಂದಿರುತ್ತೆ. ಆದರೆ ಆಟಗಾರರನ್ನು ಖರೀದಿ ಮಾಡಲು, 10 ಕೋಟಿ & 20 ಕೋಟಿ ಅಂತಾ ಸುರಿಯುವ ಐಪಿಎಲ್ ತಂಡಗಳ ಮಾಲೀಕರು ಅಷ್ಟೇ ಹಣವನ್ನು ದುಡಿಯುತ್ತಾರೆ. ಹೀಗಿದ್ದಾಗ ಸಾವಿರಾರು ಕೋಟಿ ರೂಪಾಯಿಗೆ ಬೆಲೆ ಬಾಳುವ ಬೆಂಗಳೂರು ತಂಡ ಆರ್ಸಿಬಿ ಮಾರಾಟ ಮಾಡಲು ದಿಢೀರ್ ನಿರ್ಧಾರ?
ಬೆಂಗಳೂರು ಬಿಟ್ಟು ಹೋಗಲಿದ್ದಾರಾ ವಿರಾಟ್...
ಹೌದು, ಬೆಂಗಳೂರು ತಂಡ ಆರ್ಸಿಬಿ ಮಾರಾಟ ಆಗಲಿದೆ ಅನ್ನೋ ಸುದ್ದಿ ಇದೀಗ ಭಾರಿ ದೊಡ್ಡದಾಗಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ದಿಢೀರ್ ಆರ್ಸಿಬಿ ತಂಡದ ಬಗ್ಗೆ ಪೋಸ್ಟ್ ಒಂದನ್ನ ಮಾಡಿದ್ದು ಬಿರುಗಾಳಿ ಎಬ್ಬಿಸಿದೆ. ಇಂತಹ ಸಮಯದಲ್ಲೇ ಮತ್ತೊಂದು ಸುದ್ದಿ ಕೂಡ ಹಬ್ಬಿದ್ದು, ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಮಾರಾಟ ಆಗುವ ಜೊತೆಯಲ್ಲೇ ಈಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಹೃದಯ ನಿಂತು ಹೋಗುವ ಸುದ್ದಿ ಓಡಾಡ್ತಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಮಾರಾಟವಾಗುವುದು ನಿಜವೇ ಆಗಿದ್ದರೆ, ಆಗ 2026 ಐಪಿಎಲ್ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಕೊಹ್ಲಿ ಹೋಗಲಿದ್ದಾರೆ ಅಂತಾ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯು ಹಬ್ಬಿ, ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ, ಹೀಗಾಗಿ ಇದನ್ನು ಗಾಳಿ ಸುದ್ದಿ ಎನ್ನಲಾಗುತ್ತಿದೆ...
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications