ಶಿರಸಿಯಲ್ಲಿ ಮಗನ ಮೇಲೆ ಗುಂಡು ಹಾರಿಸಿದ ಕುಡುಕ ತಂದೆ
ಶಿರಸಿ, ಜೂನ್ 20: ತಂದೆಯೇ ಮಗನಿಗೆ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಕುಡಿದು ಟೈಟಾಗಿ ಬಂದಿದ್ದ ದೇವಯ್ಯ ಅರಾರ್ ಮಗ ನಾಗೇಶ್ ಮೇಲೆ ಗುಂಡು ಹಾರಿಸಿದ್ದಾನೆ. ತಕ್ಷಣವೇ ಆತನನ್ನು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಶಿರಸಿಯ ನರೇಬೈಲು ಗ್ರಾಮದ ನಿವಾಸಿಯಾಗಿರುವ ದೇವಯ್ಯ ರಾತ್ರಿ ಕುಡಿದು ಬಂದಿದ್ದ, ಮಗ ಹಾಗೂ ತಂದೆಯ ನಡುವೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿದೆ. ಇದೇ ಸಂದರ್ಭದಲ್ಲಿ ಮೈಮರೆತಿದ್ದ ದೇವಯ್ಯ ತಕ್ಷಣವೇ ಮಗನ ಮೇಲೆ ಗುಂಡು ಹಾರಿಸಿದ್ದಾನೆ.

ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ತಂದೆಗೆ ತಾನು ಏನು ಮಾಡಿದೆ ಎನ್ನುವ ಅರಿವೇ ಇರಲಿಲ್ಲ, ಬಳಿಕ ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.












Click it and Unblock the Notifications