ಸಿಂಗಪುರದಲ್ಲಿ 481 ಹೊಸ ಕೊವಿಡ್ 19 ಕೇಸ್, ಲಸಿಕೆ ಕೊನೆ ಹಂತದಲ್ಲಿದೆ
ಸಿಂಗಪುರ, ಜುಲೈ 27: ಸಿಂಗಪುರದಲ್ಲಿ 481 ಹೊಸ ಕೊವಿಡ್ 19 ಪ್ರಕರಣಗಳು ದಾಖಲಾಗಿವೆ. ಸೋಂಕಿತರೆಲ್ಲರೂ ವಿದೇಶಿಯರು ಎಂದು ತಿಳಿದು ಬಂದಿದೆ. ಸಿಂಗಪುರದಲ್ಲಿ 50,369 ಕೇಸುಗಳಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
Recommended Video
ಹೊಸ ಕೇಸುಗಳ ಪೈಕಿ 476 ಮಂದಿ ವಲಸೆ ಕಾರ್ಮಿಕರು ಎಲ್ಲರೂ ಡಾರ್ಮೆಂಟರಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉದ್ಯೋಗ ಪರ್ಮಿಟ್ ಪಾಸ್ ಗಳನ್ನು ಹೊಂದಿರುವ ಕಾರ್ಮಿಕರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಸಮುದಾಯಕ್ಕೆ ಹಬ್ಬಿರುವ ಕೇಸುಗಳು ತಗ್ಗಿದ್ದು, 5 ಕೇಸುಗಳು ಮಾತ್ರ ದಾಖಲಾಗಿದೆ. ಭಾರತದಿಂದ ಬಂದವರ ಪೈಕಿ 3 ವರ್ಷ ವಯಸ್ಸಿನ ಮಗು ಸೇರಿದಂತೆ ನಾಲ್ವರಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

ಇನ್ನೊಂದೆಡೆ, ಸಿಂಗಪುರದಲ್ಲಿ ಕೊವಿಡ್ 19 ಲಸಿಕೆ ಸಂಶೋಧನೆ, ಅಭಿವೃದ್ಧಿ ಮುಕ್ತಾಯಗೊಂಡಿದ್ದು, ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಡ್ಯೂಕ್ -ಎನ್ ಯುಎಸ್ ಮೆಡಿಕಲ್ ಸ್ಕೂಲ್ ಹಾಗೂ ಅಮೆರಿಕದ ಆರ್ಕ್ಟುರುಸ್ ಥೆರಪೆಕ್ಟಿಸ್ ಸಹಯೋಗದಿಂದ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ.
ಲೂನರ್ -ಕೊವ್ 19 ಹೆಸರಿನ ಈ ಲಸಿಕೆ ಸೇರಿದಂತೆ ವಿಶ್ವದೆಲ್ಲೆಡೆ 25 ಲಸಿಕೆಗಳಿಗೆ ಕ್ಲಿನಿಕಲ್ ಟ್ರಯಲ್ ಅನುಮತಿ ಸಿಕ್ಕಿದೆ. ಇನ್ನೂ 141 ಹೊಸ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಪೂರ್ವ ಹಂತದ ಅನುಮತಿಗಾಗಿ ಕಾದಿವೆ ಎಂದು ಪ್ರೊ ಓಯಿ ಎಂಗ್ ಯೋಂಗ್ ಹೇಳಿದ್ದಾರೆ.
ಆಕ್ಸ್ ಫರ್ಡ್, ಆಸ್ಟ್ರಾಜೆನೆಕಾ, ಚೀನಾದ ಮಿಲಿಟರಿ ಸಂಶೋಧನಾ ಘಟಕ ಹಾಗೂ ಕ್ಯಾನ್ ಸೈನೊ ಬಯೋಲಾಜಿಕ್ಸ್, ಜರ್ಮನ್ ಬಯೋಟೆಕ್ ಕಂಪನಿ ಬಯೊ ಎನ್ ಟೆಕ್ ಹಾಗೂ ಯುಎಸ್ ಸಂಸ್ಥೆ ಫೈಜರ್ ಸಂಸ್ಥೆಯ ಲಸಿಕೆ ಕೂಡಾ ಕೊನೆ ಹಂತದ ಪ್ರಯೋಗದಲ್ಲಿವೆ ಎಂದು ಪ್ರೊ ಯೋಂಗ್ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications