ನಾನೇಕೆ ಜೆಡಿಎಸ್ ಪಕ್ಷ ಸೇರಿದೆ: ರಾಜ್ ಸೊಸೆ ಗೀತಾ
ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡುತ್ತಾ, ನನಗೆ ರಾಜಕೀಯ ಹೊಸದಲ್ಲ. ನಮ್ಮ ತಂದೆಯವರ ಜೊತೆಗೆ ರಾಜಕೀಯದ ಏಳುಬೀಳುಗಳನ್ನು ತುಂಬ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಮೊದಲು ನಮ್ಮ ತಂದೆಯವರು ರಾಜಕೀಯಕ್ಕೆ ಬಂದಾಗ ನನಗೆ ಕೇವಲ ಎರಡು ವರ್ಷ. ಬಳಿಕ ಬುದ್ಧಿ ತಿಳಿದಾಗಿನಿಂದ ಎಲ್ಲವನ್ನೂ ಗಮನಿಸುತ್ತಾ ಬಂದಿದ್ದೇನೆ.
ನಾನು
ರಾಜಕೀಯಕ್ಕೆ
ಬರಲು
ಒಂದೇ
ಕಾರಣ.
ನಮ್ಮ
ತಂದೆಯವರ
ಹೆಸರು
ಉಳೀಬೇಕು.
ಅವರ
ರಾಜಕೀಯ
ಕೆಲಸಕಾರ್ಯಗಳನ್ನು
ಮುಂದುವರಿಸಬೇಕು.
ಅವರು
ತುಂಬಾ
ಕೆಲಸ
ಮಾಡಿದ್ದಾರೆ.
ಅವರು
ಮಾಡಲು
ಆಗದೆ
ಇರುವುದು
ಇನ್ನೂ
ಬಹಳಷ್ಟಿದೆ.
ಬೇರೆ
ಯಾವುದೇ
ದುರುದ್ದೇಶವನ್ನಿಟ್ಟುಕೊಂಡು
ತಾನು
ರಾಜಕೀಯಕ್ಕೆ
ಬಂದಿಲ್ಲ.
[ಶಿವಮೊಗ್ಗ
ಜೆಡಿಎಸ್
ಅಭ್ಯರ್ಥಿ
ಗೀತಾ
ಶಿವಣ್ಣ
ಸಂದರ್ಶನ]
ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂಬುದು ಒಂದೇ ಆಸೆ ನನಗಿರುವುದು. ಇನ್ನು ನನಗೆ ಹುಟ್ಟಿದ ಮನೆ ಮೆಟ್ಟಿದ ಮನೆ ಎರಡರಲ್ಲೂ ನನಗೇನು ಕಮ್ಮಿ ಆಗಿಲ್ಲ. ಇವೆರಡು ನನಗೆ ಶಾಲೆ ಇದ್ದಂತೆ. ನಮ್ಮ ತಂದೆತಾಯಿ ಒಳ್ಳೆ ಬುದ್ಧಿ ಗುಣ ನಡತೆ ಹೇಳಿ ಕಳುಹಿಸಿದ್ದಾರೆ. ಅಲ್ಲಿ ಅಪ್ಪಾಜಿಯಿಂದ ಇನ್ನಷ್ಟು ಒಳ್ಳೆಯದನ್ನು ಕಲಿತೆ.
ಇನ್ನು ಜೆಡಿಎಸ್ ಪಕ್ಷಕ್ಕೆ ಯಾಕೆ ಸೇರ್ಪಡೆಯಾದೆ ಎಂದರೆ ನಮ್ಮ ತಂದೆಯವರು ಕೊನೆಗಾಲದಲ್ಲಿದ್ದ ಪಕ್ಷ. ನನ್ನ ತಮ್ಮನಿಗೆ ಸ್ಥಾನಮಾನ ಕೊಟ್ಟು ಅವನಿಗೆ ಉತ್ತಮ ಭವಿಷ್ಯ ರೂಪಿಸಿದ ಪಕ್ಷ ಅದು. ಈ ಕಾರಣಕ್ಕಾಗಿ ತಾನು ಜೆಡಿಎಸ್ ಪಕ್ಷಕ್ಕೆ ಬಂದಿದ್ದೇನೆ ಎಂದರು. ಬಳಿಕ ಒಂದೊಂದಾಗಿ ಗೀತಾ ಅವರಿಗೆ ಪತ್ರಕರ್ತರಿಂದ ಪ್ರಶ್ನೆಗಳು ತೂರಿಬಂದವು.
ಗೀತಾ ಅವರು ಎಲ್ಲ ಪ್ರಶ್ನೆಗಳಿಗೂ ಸಮರ್ಥವಾಗಿಯೇ ಉತ್ತರ ನೀಡಿದರು. ಕೆಲವು ಪ್ರಶ್ನೆಗಳಿಗೆ ಈ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ನೇರವಾಗಿ ಹೇಳಿದರು. ಇನ್ನೂ ಕೆಲವು ಕಡೆ ತೂರಿ ಬರುತ್ತಿದ್ದ ಪ್ರಶ್ನೆಯ ಬಾಣಗಳಿಗೆ ಶಿವಣ್ಣ ಸಮಾಧಾನಚಿತ್ತದಿಂದ ಉತ್ತರಿಸಿದರು. ಒಟ್ಟಾರೆಯಾಗಿ ಶಿವಣ್ಣ ಹಾಗೂ ಗೀತಾ ಅವರದು ರಕ್ಷಣಾತ್ಮಕ ಆಟವಾಗಿತ್ತು. ಕೆಲವು ಕಡೆ ಗೀತಾ ಅವರು ಚುಟುಕಾಗಿ ಉತ್ತರಿಸಿದರು.