'ಎಂಥಾ ಸಾವಾ..!' ಹವ್ಯಕ ಮಾಣಿಯ ಈ ಮನದ ಹಾಡಿಗೆ ಫಿದಾ ಆಗದವರ್ಯಾರು?
'ಅಯ್ಯೋ ಯಮ್ಮನೆ ಮಾಣಿಗೆ ಹೆಣ್ಣೇ ಸಿಕ್ತಾ ಇಲ್ಲೆ...' ಅನ್ನೋದು ಗಂಡು ಮಕ್ಕಳನ್ನು ಹೆತ್ತ ಹವ್ಯಕ ಕುಟುಂಬಗಳ ಪ್ರತಿದಿನದ ಸುಪ್ರಭಾತ! ವಧುವಿನ ಕೊರತೆ ಎಂಬ ಹವ್ಯಕ ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ತಿಳಿ ಹಾಸ್ಯದ ಮೂಲಕ ಹಾಡಿದ ಕಿರಣ್ ಎನ್ ರಾವ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಾರೆ.
ಡೆಸ್ಪಾಸಿತೋ ಆಲ್ಬಮ್ ಟ್ಯೂನ್ ಅನ್ನು 'ಎಂಥಾ ಸಾವಾ' ತಲೆಬರಹದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ರಚಿಸಿ, ಅಷ್ಟೇ ಸುಶ್ರಾವ್ಯವಾಗಿ ಹಾಡಿದ್ದಾರೆ. 'ಕಿನಾರಾ' ಎಂಬ ಕಾವ್ಯನಾಮವನ್ನಿಟ್ಟುಕೊಂಡು ಹವಿಗನ್ನಡದಲ್ಲಿ ಕವನಗಳನ್ನು ರಚಿಸಿ, ತಮ್ಮದೇ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತರಿಗೆ ಕಳಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಹೀಗೆ ಸ್ನೇಹಿತರಿಂದ, ಅವರಿವರಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಹವ್ಯಕ ಸಮಾಜ ಗಂಡು ಮಕ್ಕಳ ಮನದ ನೋವನ್ನು ಪ್ರತಿನಿಧಿಸಿದೆ.
ಸಾಗದರ ಗೋಳಗೋಡಿನವರಾದ ಕಿರಣ್ ಡಿಗ್ರಿ ಮುಗಿಸಿ, ಊರಿನಲ್ಲೇ ಸಾರಿಗೆ ಕಂಪೆನಿಯೊಂದರಲ್ಲಿ ಕ್ಯಾಶಿಯರ್ ಕೆಲಸ ಮಾಡುತ್ತಿದ್ದಾರೆ. ಮೂಲತಃ ಕೃಷಿಕ ಕುಟುಂಬದವರಾದ ಕಿರಣ್ ಅವರ ಹಾಡುಗಳು ಸಹ ಹೆಚ್ಚಾಗಿ ಹವ್ಯಕ ಸಮಾಜ, ಕೃಷಿ, ಕೂಲಿಕಾರರ ಸಮಸ್ಯೆ, ವಧುವಿನ ಕೊರತೆ ಇಂಥ ಸಮಸ್ಯೆಗಳ ಸುತ್ತಲೇ ಗಿರಕಿ ಹಾಕುತ್ತವೆ. ರಂಗಭೂಮಿಯೊಂದಿಗೆ ಒಡನಾಟವೂ ಇರುವುದರಿಂದ ಕಿರಣ್ ಅಭಿನಯದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಅವರ ಸೆಲ್ಫಿ ವಿಡಿಯೋ ನೋಡಿದರೆ ಅದು ಗೊತ್ತಾಗುತ್ತದೆ!

ಹವ್ಯಕ ಹುಡುಗರ ರಾಷ್ಟ್ರಗೀತೆ ಅನ್ನಿಸಿರುವ ಈ 'ಎಂಥಾ ಸಾವಾ' ಗೀತೆಯನ್ನು ನೀವೂ ಒಮ್ಮೆ ಕೇಳಿ. ಮಲೆನಾಡಿನ ಈ ಅದ್ಭುತ ಪ್ರತಿಭೆಗೆ ನಿಮ್ಮ ಶುಭ ಹಾರೈಕೆ ತಿಳಿಸಿ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications