ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾವತಿಯ ವಿಐಎಸ್‌ಎಲ್‌ಗೆ 150 ಎಕರೆ ಗಣಿ ಮಂಜೂರು

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 28 : ಭದ್ರಾವತಿಯ ವಿಐಎಸ್‌ಎಲ್‌ಗೆ 150 ಎಕರೆ ಗಣಿ ಪ್ರದೇಶವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಮಂಜೂರು ಮಾಡಲಾಗಿದೆ.

ಫೆ.20ರಂದು ಕೇಂದ್ರ ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯ ರಾಮನದುರ್ಗದಲ್ಲಿ ಗಣಿ ಮಂಜೂರು ಮಾಡಬಹುದು ಎಂದು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ.

ಭದ್ರಾವತಿಯ ವಿಐಎಸ್‌ಎಲ್‌ಗೆ ಮುಚ್ಚುವ ಭೀತಿ ಇಲ್ಲಭದ್ರಾವತಿಯ ವಿಐಎಸ್‌ಎಲ್‌ಗೆ ಮುಚ್ಚುವ ಭೀತಿ ಇಲ್ಲ

150 ಎಕರೆ ಗಣಿ ಪ್ರದೇಶವನ್ನು 10 ವರ್ಷಗಳ ಕಾಲ ವಿಐಎಸ್‌ಎಲ್‌ಗೆ ನೀಡಲಾಗಿದೆ. ಕಾರ್ಖನೆಯ ಕಾರ್ಮಿಕರು ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಸಂಸ್ಥೆಗೆ ಗಣಿ ಮಂಜೂರು ಮಾಡಬೇಕು ಎಂದು ಕಾರ್ಮಿಕರು ಹೋರಾಟ ಮಾಡುತ್ತಿದ್ದರು.

ಭದ್ರಾವತಿಯ ವಿಐಎಸ್‌ಎಲ್‌ಗೆ ಗಣಿ ಮಂಜೂರುಭದ್ರಾವತಿಯ ವಿಐಎಸ್‌ಎಲ್‌ಗೆ ಗಣಿ ಮಂಜೂರು

Union government reserved 150 acres of land to VISP

ಆಗಸ್ಟ್ 7, 2017ರಂದು ಕರ್ನಾಟಕ ಸರ್ಕಾರ 150 ಎಕರೆ ಪ್ರದೇಶವನ್ನು ವಿಐಎಸ್‌ಎಲ್‌ಗೆ ನೀಡಲು ಒಪ್ಪಿಗೆ ನೀಡಿತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2004ರಲ್ಲಿ ಕೆಮ್ಮನಗುಂಡಿ ಗಣಿಯ ಒಪ್ಪಂದ ಮುಗಿದ ಬಳಿಕ ವಿಐಎಸ್‌ಎಲ್‌ಗೆ ಸ್ವಂತ ಗಣಿ ಮಂಜೂರು ಆಗಿರಲಿಲ್ಲ.

ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ವಿಐಎಸ್ಎಲ್ ನ ಕಾರ್ಮಿಕರುಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ವಿಐಎಸ್ಎಲ್ ನ ಕಾರ್ಮಿಕರು

2015ರಲ್ಲಿ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದರು. ಆಗ ಗಣಿ ಮಂಜೂರು ಮತ್ತು ಕಾರ್ಖನೆ ಪುನಶ್ಚೇತನಕ್ಕೆ 868 ಕೋಟಿ ರೂ.ಗಳ ಪ್ಯಾಕೇಜ್ ನೀಡುವುದಾಗಿ ಘೋಷಣೆ ಮಾಡಿದ್ದರು.

ಸ್ವಂತ ಗಣಿ ಇಲ್ಲದ ಕಾರಣ ಕಾರ್ಖನೆ ನಷ್ಟದಲ್ಲಿತ್ತು. ಕಾರ್ಮಿಕರ ಸ್ಥಿತಿ ಅಂತಂತ್ರವಾಗಿತ್ತು. ಶಾಶ್ವತ ಗಣಿ ಮಂಜೂರು ಮಾಡುವಂತೆ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದ್ದರು.

English summary
The Union government has order reserving 150 acres of land in Ramanadurga range in Ballari district for the Visvesvaraya Iron and Steel Plant (VISP), Bhadravati , Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X