ಇತಿಹಾಸ ಪ್ರಿಯರ ಗಮನಕ್ಕೆ: ತೀರ್ಥಹಳ್ಳಿಯಲ್ಲಿದೆ 2 ಬೃಹತ್ ಶಿಲಾಗೋರಿ
ನಿಲಿಸುಗಲ್ಲುಗಳ ತಾಣ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪತ್ತೆಯಾಗಿವೆ. ಸುಮಾರು 2500 ವರ್ಷಗಳ ಹಿಂದಿನ ಆದಿ ಮಾನವರ ಬೃಹತ್ ಶಿಲಾಗೋರಿಗಳು ಇದಾಗಿದ್ದು ಸಂಶೋಧನಾಸಕ್ತ ಇತಿಹಾಸ ಪ್ರಿಯರಿಗೆ ಸಂಚಲನ ಮೂಡಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಹಾಗೂ ಮಲ್ಲೇಸರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಈ ಶಿಲಾಗೋರಿಗಳು ಪತ್ತೆಯಾಗಿದ್ದು, ನೊಣಬೂರಿನಲ್ಲಿ ರಸ್ತೆಯ ಬದಿಯಲ್ಲೇ ಒಂದು ಶಿಲಾ ಗೋರಿ ಇದೆ. ಮಲ್ಲೇಸರ ಗ್ರಾಮದ ಬೊಂಬಳಿಗೆಯಲ್ಲಿ ಶಿಲಾಗೋರಿಗಳ ಸಮುಚ್ಛಯ ಪತ್ತೆಯಾಗಿದೆ.
ಇತ್ತೀಚೆಗೆ ತಾಲ್ಲೂಕಿನ ಅರಳಸುರಳಿ ಸಮೀಪದ ತಟ್ಟಿಕೇವಿಯಲ್ಲಿ ಪತ್ತೆಯಾಗಿದ್ದ ಶಿಲಾಗೋರಿಗಳ ಬೆನ್ನಲ್ಲೇ ಈ ಪ್ರದೇಶಗಳ ವ್ಯಾಪ್ತಿಯ ಸಮೀಪದಲ್ಲಿ ಅಪೂರ್ವ ಗೋರಿಗಳು ಪತ್ತೆಯಾಗಿದ್ದು ಈಗ ಬೆಳಕಿಗೆ ಬಂದಿರುವ ಪ್ರದೇಶ ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥಕ್ಕೆ 5 ಕಿ.ಮಿ. ವ್ಯಾಪ್ತಿಯೊಳಗೆ ತಾಲ್ಲೂಕಿನ ಶರಾವತಿ ನದಿಯ ಪ್ರದೇಶ ಆದಿಮಾನವರ ತಾಣವಾಗಿತ್ತು ಎನ್ನುವ ವಾದಕ್ಕೆ ಇಂಬುಕೊಟ್ಟಂತಾಗಿದೆ.

ಭೂತದ ಕಲ್ಲು: ನೊಣಬೂರಿನಲ್ಲಿ ಮುಖ್ಯ ರಸ್ತೆಯ ಬದಿಯಲ್ಲೆ ಇರುವ ಶಿಲಾಗೋರಿಯನ್ನು ಭೂತದ ಕಲ್ಲು ಎಂದು ಗ್ರಾಮಸ್ಥರು ಪೂಜೆ ಮಾಡಿಕೊಂಡು ರಕ್ಷಿಸಿದ್ದಾರೆ. ವರ್ಷಕ್ಕೊಮ್ಮೆ ಇಲ್ಲಿ ವಿಶೇಷ ಪೂಜೆ ನೆಡೆಯುತ್ತದೆ. ಆದರೂ ಗ್ರಾಮಸ್ಥರಿಗೆ ಇದು ಶಿಲಾಗೋರಿಗಳಾಗಿ ಕಂಡು ಬಂದಿರಲಿಲ್ಲ.
ತುಂಬರದಳ್ಳಿಯ ಭೂತರಾಯ: ಮಲ್ಲೇಸರ ಸಮೀಪದ ಒಂದೆರಡು ಕಿ.ಮೀ. ದೂರದಲ್ಲಿ ಅಕೇಶಿಯಾ ನೆಡುತೋಪಿನಲ್ಲಿ ಒಂದು ಇಕರೆ ಪ್ರದೇಶದಲ್ಲಿ ಹರಡಿ ಬೃಹದಾಕಾರವಾಗಿ ನಿಂತಿರುವ ನಿಲಿಸುಕಲ್ಲಿನ ಸಮುಚ್ಛಯವೇ ಇದ್ದು, ಇಲ್ಲಿ ಕೂಡ ಗ್ರಾಮಸ್ಥರು ಭೂತದ ಕಲ್ಲು ಎಂದೇ ಪೂಜಿಸಿಕೊಂಡು ರಕ್ಷಿಸಿದ್ದಾರೆ. ರಣದ ಬನ, ಭೂತರಾಯ ಬನ ಎಂದು ಹೆಸರಿಟ್ಟು ಗುರುತಿಸಿಕೊಂಡಿದ್ದಾರೆ.
ಸುಮಾರು 15 ಅಡಿ ಇತ್ತರ, 5 ಅಡಿ ಅಗಲದ ದೊಡ್ಡ ಗೋರಿಯ ಅಕ್ಕಪಕ್ಕದಲ್ಲಿ ಮತ್ತಷ್ಟು ನಿಲಿಸುಕಲ್ಲುಗಳಿವೆ. ಚೌಡಿ ಕಲ್ಲು (6 ಅಡಿ ಎತ್ತರ 4 ಅಡಿ ಅಗಲ) ನಾಗರ ಕಲ್ಲು ಹಾಗೇ ಅಕ್ಕಪಕ್ಕದಲ್ಲಿ ಸುಮಾರು 8 ಕ್ಕೂ ಹೆಚ್ಚು ನಿಲಿಸುಕಲ್ಲುಗಳ ಕುರುಹು ಇದೆ. ಕೆಲವು ಕಲ್ಲುಗಳು ನೆಲಕ್ಕೊರಗಿದ್ದು, ಗ್ರಾಮಸ್ಥರು ತುಂಬರದಳ್ಳಿ ಭೂತರಾಯ ಎಂದು ಭಕ್ತಿಯಿಂದ ಪೂಜಿಸುತ್ತಾರೆ.

ತಾಲ್ಲೂಕಿನ ತಟ್ಟಿಕೇವಿಯಲ್ಲಿ ಬೃಹತ್ ಶಿಲಾಗೋರಿಗಳನ್ನು ಇತ್ತೀಚೆಗೆ ಬೆಳಕಿಗೆ ತಂದಿದ್ದ ಸಂಶೋಧಕ ಎಲ್ ಎಸ್ ರಾಘವೇಂದ್ರ ಅವರ ಶ್ರಮ ಹಾಗೂ ಬೊಂಬಳಿಗೆಯ ಈ ಸಂಶೋಧನೆಯಲ್ಲಿ ಜೊತೆಗಿದ್ದ ಪತ್ರಕರ್ತ ಜಿ.ಆರ್. ಸತ್ಯನಾರಾಯಣ ತಮಗೆ ಸಿಕ್ಕ ಮಾಹಿತಿಯ ಜಾಡು ಹಿಡಿದು ಪತ್ತೇ ಹಚ್ಚಿದ ಈ ಶಿಲಾಗೋರಿಗಳು ತೀರ್ಥಹಳ್ಳಿ ತಾಲ್ಲೂಕಿನ ಶರಾವತಿ ನದಿಯ ಸುತ್ತಮುತ್ತಲಿನ ಪ್ರದೇಶದ ಇತಿಹಾಸ ಪೂರ್ವ ದಾಖಲೆಗಳನ್ನು ಬಿಚ್ಚಿಡುವಲ್ಲಿ ಹೆಚ್ಚಿನ ಸಂಶೋಧನೆಗೆ ನೆರವಾಗಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications