ತೀರ್ಥಹಳ್ಳಿಯಲ್ಲಿ ನಂದಿತಾ ತಂದೆ ಅಂಗಡಿಗೆ ಬೆಂಕಿ
ಶಿವಮೊಗ್ಗ, ಡಿ.12 : ತೀರ್ಥಹಳ್ಳಿಯಲ್ಲಿ ಸಾವನ್ನಪ್ಪಿದ 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ತಂದೆ ಕೃಷ್ಣಮೂರ್ತಿ ಅವರ ದಿನಸಿ ಅಂಗಡಿಗೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ತೀರ್ಥಹಳ್ಳಿಯ
ಬಾಳೇಬೈಲಿನಲ್ಲಿರುವ
ನಂದಿತಾ
ತಂದೆ
ಕೃಷ್ಣಮೂರ್ತಿ
ಅವರ
ದಿನಸಿ
ಅಂಗಡಿಗೆ
ಶುಕ್ರವಾರ
ಮುಂಜಾನೆ
3
ಗಂಟೆ
ಸುಮಾರಿಗೆ
ದುಷ್ಕರ್ಮಿಗಳು
ಬೆಂಕಿ
ಹಚ್ಚಿದ್ದು,
ಅಂಗಡಿ
ಸಂಪೂರ್ಣವಾಗಿ
ಸುಟ್ಟು
ಹೋಗಿದ್ದು,
ಸುಮಾರು
4
ಲಕ್ಷ
ರೂ.
ನಷ್ಟ
ಸಂಭವಿಸಿದೆ.
[ತೀರ್ಥಹಳ್ಳಿ
ನಂದಿತಾ
ಸಾವು,
ಸಿಐಡಿ
ಪೊಲೀಸರು
ಹೇಳಿದ್ದಿಷ್ಟು]
ಸ್ಥಳಕ್ಕೆ ಆಗಮಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಎಸ್ಪಿ ಕೌಶಲೇಂದ್ರ ಕುಮಾರ್ ಮತ್ತು ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. [ನಂದಿತಾ ಸಾವಿಗೆ ಕಂಬನಿ ಮಿಡಿದ ತೀರ್ಥಹಳ್ಳಿ]
ತೀರ್ಥಹಳ್ಳಿ
ಪಟ್ಟಣದಲ್ಲಿ
ಈಗಾಗಲೇ
ಪೊಲೀಸ್
ಬಂದೋಬಸ್ತ್
ಏರ್ಪಡಿಸಲಾಗಿದೆ.
ಮುಂಜಾಗ್ರತಾ
ಕ್ರಮವಾಗಿ
ಹೆಚ್ಚಿನ
ಪಡೆಯನ್ನು
ನಿಯೋಜಿಸಲಾಗುತ್ತದೆ.
ಅಂಗಡಿಗೆ
ಬೆಂಕಿ
ಬಿದ್ದ
ಪ್ರಕರಣದ
ನಂತರ
ಯಾವುದೇ
ಹಿಂಸಾಚಾರ
ಸಂಭವಿಸದಂತೆ
ಅಗತ್ಯ
ಕ್ರಮಗಳನ್ನು
ಕೈಗೊಳ್ಳಲಾಗಿದೆ
ಎಂದು
ಪೊಲೀಸರು
ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ನಂದಿತಾ ಸಾವು ಕೊಲೆಯಲ್ಲ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಿಐಡಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ನಂದಿತಾ ಸಾವಿನ ನಂತರ ತೀರ್ಥಹಳ್ಳಿಯಲ್ಲಿ ಹಿಂಸಾಚಾರ ಸಂಭವಿಸಿ 15 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.