'ಸರಕಾರದಿಂದ ಬಹಮನಿ ಉತ್ಸವ ನಡೆಸ್ತಿರೋದು ಸಿದ್ದರಾಮಯ್ಯಗೆ ಗೊತ್ತಿಲ್ಲ'

ಶಿವಮೊಗ್ಗ, ಫೆಬ್ರವರಿ 15: ರಾಜ್ಯ ಸರಕಾರದಿಂದ ಬಹಮನಿ ಉತ್ಸವ ನಡೆಸುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವತಃ ಗೊತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಮಧ್ಯೆಯೇ ತಾಳ ಇಲ್ಲ, ತಂತಿ ಇಲ್ಲದಂತಾಗಿದೆ. ಆದ್ದರಿಂದಲೇ ಇಂದಿನ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುರುವಾರ ಇಲ್ಲಿ ವಾಗ್ದಾಳಿ ನಡೆಸಿದರು.

ಬಹಮನಿ ಉತ್ಸವ ನಡೆಸುವುದು ಅಕ್ಷಮ್ಯ ಅಪರಾಧ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲರನ್ನು ಸಂಪುಟದಿಂದ ಕೂಡಲೇ ಕಿತ್ತು ಹಾಕಬೇಕು. ಯಾರ್ಯಾರು ಗೋರಿಗಳಲ್ಲಿ ಮಲಗಿದ್ದಾರೆ, ಅವರನ್ನು ಮೇಲೆ ತಂದು ಉತ್ಸವ ಮಾಡಿ. ಮೇಲಿರುವ ಹಿಂದುಗಳನ್ನು ಗೋರಿಗಳಲ್ಲಿ ಹಾಕಿ ಎಂದು ವಾಗ್ದಾಳಿ ನಡೆಸಿದರು.

Siddaramaiah not aware of government sponsor Bahamani utsav: KS Eshwarappa

ಮಹಮ್ಮದ್ ಬಿನ್ ತುಘಲಕ್ ಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಅವರ ಹೆಸರು ಸಿದ್ದ ರಹಮಾನ್‌ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಅವನೊಬ್ಬ ಕೊಲೆಗಡುಕ ಮುಸ್ಲಿಂ ರಾಜ ಎನ್ನುವ ಕಾರಣಕ್ಕೆ ಉತ್ಸವ ಮಾಡುತ್ತಿದ್ದಾರೆ. ರಾಜ್ಯದ ಜನ ದಂಗೆ ಏಳುವುದಕ್ಕೆ ಮುಂಚೆ ಕಾಂಗ್ರೆಸ್ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+