Get Updates
Get notified of breaking news, exclusive insights, and must-see stories!

ಶಿವಮೊಗ್ಗದಲ್ಲಿ ಉದ್ವಿಗ್ನ: ಕೆಎಸ್ ‌ಈಶ್ವರಪ್ಪ ಕಾಂಗ್ರೆಸ್‌ ಸರ್ಕಾರಕ್ಕೆ ಕೊಟ್ಟ ವಾರ್ನಿಂಗ್?

ಬೆಂಗಳೂರು, ಅಕ್ಟೋಬರ್ 02: ಮಲೆನಾಡು ಜಿಲ್ಲೆಯ ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಮೆರವಣಿಗೆ ನಡೆಸುವಾಗಿ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಸದ್ಯ ಅಲ್ಲೀಗ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಪೊಲೀಸರು ವಿರುದ್ಧ ಹರಿಹಾಯ್ದಿದ್ದಾರೆ. ಹಿಂದು ಸಮಾಜಕ್ಕೂ ತಲ್ವಾರ್ ಹಿಡಿದು ಈ ರೀತಿ ಉತ್ತರ ಕೊಡಲು ಬರುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಅದರಲ್ಲಿ 'ಪೊಲೀಸರು ರಾಜ್ಯ ಸರ್ಕಾರ ಸರ್ಕಾರಕ್ಕೆ ಹೆದರಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶಿವಮೊಗ್ಗದ ಈದ ಮಿಲಾದ್ ವೇಳೆ ಯಾರೂ ತಲ್ವಾರ್ ಹಿಡಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.

shivamogga-eid-milad-riots

ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮರು ಗುಲಾಮರಾಗಿದ್ದಾರೆ. ವ್ಯವಸ್ಥಿತವಾಗಿ ಈದ್ ಮಿಲಾದ್ ಮೆರವಣಿಗೆಯನ್ನು ನಡೆಸಲಾಗಿದೆ. ಹಿಂದುಗಳನ್ನು ಪ್ರಚೋದಿಸುವಂತೆ ವಿವಿಧ ಏರಿಯಾಗಳಲ್ಲಿ ಔರಂಗಜೇಬ, ಟಿಪ್ಪವಿನಂತರ ದೇಶದ್ರೋಹಿಗಳ ದೊಡ್ಡ ಪೋಟೋ ಹಿಡಿದು ಮೆರವಣಿಗೆ ಮಾಡಿದ್ದಾರೆ.

ಹಿಂದೂ ಸಮಾಜ ಹೆದರಿಸಲು ಮೆರವಣಿಗೆ

ಈ ಫೋಟೊದಲ್ಲಿರುವವರುಯಾರಿಗೂ ಸ್ಪೋರ್ತಿ ಕೊಟ್ಟಿಲ್ಲ. ಇದು ಮುಸ್ಲಿಂರ ಹಬ್ಬವಲ್ಲ. ಹಿಂದು ಸಮಾಜವನ್ನು ಹೆದರಿಸಲು ಮಾಡಿದ ಮೆರವಣಿಗೆ ಇದು ಎಂದು ಅವರು ಗಂಭೀರ ಆರೋಪ ಮಾಡಿದರು. ಇದಕ್ಕೆ ಹಿಂದೂಗಳು ಹೆದರಲ್ಲ. ನಾವು ಗೊಂದಲ ಇಲ್ಲದೇ ರಾಗಿಗುಡ್ಡದಲ್ಲಿ ಗಣೇಶ ವಿಜರ್ಸನೆ ಮಾಡಿದ್ದೇವೆ ಎಂದು ಅವರು ಟಾಂಗ್ ನೀಡಿದರು.

ಅದೇ ರಾಗಿಗುಡ್ಡದಲ್ಲಿಯೇ ಮುಸ್ಲಿಂರ ಮೆರವಣಿಗೆ ವೇಳೆ 150-200 ಜನ ಕಲ್ಲು, ಲಾಠಿ, ಖಡ್ಗ ಹಿಡಿದು ಓಡಾಟ ನಡೆಸಿದ್ದಾರೆ. ಪೊಲೀಸ್ ಅಧಕಾರಿಗಳು ನಿಗದಿಪಡಿಸಿದ ಜಾಗ ಬಿಟ್ಟು ಶಿವಮೊಗ್ಗ ಜಿಲ್ಲೆಯಾದ್ಯಂತ ಓಡಾಡಿದ್ದಾರೆ. ಮೆರವಣಿಗೆ ನಡೆಸಿದ್ದಾರೆ. ಸಂಜೆ 6ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಿದ್ದರೂ ಸಹಿತ 7.30 ಗಂಟೆವರೆಗೆ ಮೆರವಣಿಗೆ ಮಾಡಿದ್ದಾರೆ.

ಹಿಂದು ಸಮಾಜ ಜಗ್ಗುವುದಿಲ್ಲ: ಈಶ್ವರಪ್ಪ

ಇದರಿಂದ ಗಲಾಟೆ ನಡೆದಿದೆ. ಇದೇ ರೀತಿ ತಲ್ವಾರ ಹಿಡಿದು ಹಿಂದು ಸಮಾಜಕ್ಕೂ ಉತ್ತರ ನೀಡಲು ಬರುತ್ತದೆ ಎಂದು ಅವರು ಮುಸ್ಲಿಂ ಗುಂಡಾಗಳಿಗೆ ಗೃಹ ಸಚಿವರಿಗೆ, ಸರ್ಕಾರಕ್ಕೆ ತಿಳಿಸುತ್ತೇನೆ. ಈ ರೀತಿಯ ಘಟನೆಗಳಿಗೆ ಹಿಂದೂ ಸಮಾಜ ಜಗ್ಗುವುದಿಲ್ಲ ಎಂದು ಅವರು ಗುಡುಗಿದರು.

shivamogga-eid-milad-riots

ಘಟನೆಗೆ ಬೇಸರ ವ್ಯಕ್ತಪಡಿಸಿದ ಅವರು ಗೃಹ ಇಲಾಖೆ, ಶಿವಮೊಗ್ಗ ಪೊಲೀಸರು ಬದುಕಿದ್ದಾರೆಯೇ?, ರಾಜ್ಯದ ಸರ್ಕಾರ ಇದಿಯಾ?, ಇದು ಸಣ್ಣ ಪುಟ್ಟ ಘಟನೆ ಅಲ್ಲ, ಹೀಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹಿಂದು ಸಮಾಜವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಕೆಎಸ್‌ ಈಶ್ವರಪ್ಪ ಹೇಳಿದರು.

ಶಿವಮೊಗ್ಗದ ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ ನಡೆದಿದೆ. ಕಿಡಿಗೇಡಿಗಳ ಗುಂಪು ಯುವಕರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬೂದಿ ಮುಚ್ಚಿದ ಕೆಂಡಂದಂತಿದ್ದು, ಈ ಭಾಗದಲ್ಲಿ ನಿಷೇಧಾಜ್ಞೆ ಸೆಕ್ಷನ್ 144 ವಿಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+