ಮರಗಳಲೆಯಲ್ಲಿ ನೋಡುಗರಿಗೆ ಭಯ, ಅಚ್ಚರಿ ಮೂಡಿಸಿದ ನಾಗಪಾತ್ರಿಯ ದೈವ ಶಕ್ತಿ ಪ್ರದರ್ಶನ

ತೀರ್ಥಹಳ್ಳಿ, ನವೆಂಬರ್ 24: ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ ದೈವ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ನೋಡುಗರಿಗೆ ಭಯದ ಜೊತೆಗೆ ಅಚ್ಚರಿ ಮೂಡಿಸಿತು.

ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆಯುವ ಕಾರ್ಯವನ್ನು ಮಾಧ್ಯಮಗಳ ಮುಂದೆಯೇ ಆರಂಭಿಸಿದರು.

ಪಾತ್ರಿಗಳು ಮೊದಲೇ ಹೇಳಿದಂತೆ ಸ್ಥಳದಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲು ಸಿಕ್ಕಿದ್ದು ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಈ ಹಿಂದೆ ಮರಗಳಲೆಯ ಸಣ್ಣ ಉದ್ಯಮಿ ನಾಗಪ್ಪ ಪೂಜಾರಿಯವರು ತಮ್ಮ ಕುಟುಂಬದ ಸಮಸ್ಯೆ ಹಾಗೂ ವ್ಯಾಪಾರದ ನಷ್ಟದ ಬಗ್ಗೆ ಪಾತ್ರಿಗಳಿಗೆ ತಿಳಿಸಿದ್ದರು.

Nagapatri Nagaraj has shown God strength at maragalale

ಮನೆಯ ಹಿಂಭಾಗದಲ್ಲಿ ನಾಗ ದೋಷ ಇರುವುದಾಗಿ ತಿಳಿಸಿದ್ದರು. ಇಂದು ಆ ನಾಗಬಿಂಬ ಹೊರತೆಗೆಯುವ ಕೆಲಸ ಮಾಡಿದರು. ಈ ದೃಶ್ಯ ನೋಡುಗರಿಗೆ ಭಯ, ಆತಂಕದ ಜತೆಗೆ ಅಚ್ಚರಿಯನ್ನು ಮೂಡಿಸಿತು. ಈ ದೃಶ್ಯವನ್ನು ಸೆರೆಹಿಡಿಯಲು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+