Breaking: ಆನ್ಲೈನ್ ಟ್ರೆಡಿಂಗ್, ಹಣ ಕಳೆದುಕೊಂಡ ಯುವಕ ನಾಪತ್ತೆ
ಬೆಂಗಳೂರು, ಆಗಸ್ಟ್ 31: ಆನ್ಲೈನ್ ಟ್ರೆಡಿಂಗ್ ವಿಚಾರದಲ್ಲಿ ಬಹಳ ಎಚ್ಚರವಾಗಿರಬೇಕು ಎಂದು ಪದೇ ಪದೇ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಬೇಗ ಹಣ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಜನರು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಹೀಗೆ ಆನ್ಲೈನ್ ಟ್ರೆಡಿಂಗ್ನಲ್ಲಿ ಹೂಡಿಕೆ ಮಾಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಯುವಕನೊಬ್ಬರ ನಾಪತ್ತೆಯಾಗಿದ್ದಾನೆ. ಬೈಕ್ ತುಂಗಾ ನದಿಯ ಬಳಿ ಪತ್ತೆಯಾಗಿದ್ದು, ಯುವಕನಿಗಾಗಿ ಹುಡುಕಾಟ ನಡೆದಿದೆ.
ಆನ್ಲೈನ್ ಟ್ರೆಡಿಂಗ್ನಲ್ಲಿ ಹೂಡಿಕೆ ಮಾಡಿ, ಹಣ ಕಳೆದುಕೊಂಡ ಯುವಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಸಮೀಪ ನಾಪತ್ತೆಯಾಗಿದ್ದಾನೆ. ಯುವಕನನ್ನು ಜಯದೀಪ್ ಎಂದು ಗುರುತಿಸಲಾಗಿದೆ. ಆತ ತುಂಗಾ ನದಿಗೆ ಹಾರಿರುವ ಶಂಕೆ ಇದ್ದು, ಬೈಕ್ ತುಂಗಾ ಸೇತುವೆಯ ಬಳಿ ಪತ್ತೆಯಾಗಿದೆ.

ಜಯದೀಪ್ ನಾಪತ್ತೆಯಾಗುವ ಮೊದಲು ವಾಟ್ಸ್ಅಪ್ ಸ್ಟೇಟಸ್ನಲ್ಲಿ ಡೆತ್ ನೋಟ್ ಮಾದರಿಯ ಉದ್ದದ ಬರಹವನ್ನು ಹಾಕಿದ್ದಾನೆ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದಿರುವ ಜಯದೀಪ್ ಸುಮಾರು 90 ಸಾವಿರ ಸಾಲ ಪಡೆದುಕೊಂಡಿರುವ ಮಾಹಿತಿ ಇದೆ. ಬೈಕ್ ಮಾರಿ ಸಾಲ ತೀರಿಸಿ ಎಂದು ಪೋಷಕರಿಗೆ ಆತ ಹೇಳಿದ್ದು, ನಾಪತ್ತೆಯಾಗಿದ್ದಾನೆ.
ಜಯದೀಪ್ ಬೈಕ್ ಸಿಕ್ಕ ಸ್ಥಳಕ್ಕೆ ತೀರ್ಥಹಳ್ಳಿ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಭೇಟಿ ನೀಡಿ, ಶೋಧ ನಡೆಸುತ್ತಿದ್ದಾರೆ. ಮಳೆಗಾಲವಾದ ಕಾರಣ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಜಯದೀಪ್ ನದಿಗೆ ಹಾರಿದ್ದಾನೆಯೇ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಯುವಕನ ವಾಟ್ಸಪ್ ಸ್ಟೇಟಸ್: ಜಯದೀಪ್ ಎಂ. ಜೆ. ವಾಟ್ಸಪ್ ಸ್ಟೇಟಸ್ನಲ್ಲಿ, 'ನನ್ನ ಒಂದು ಸಣ್ಣ ತಪ್ಪು ನನ್ನ ಇವತ್ತು ನನ್ನ ಸಾವಿನ ಕಡೇ ತಳ್ಳುತ್ತ ಇದೆ. money Thading Iinvestment ಅಂತ ಕಳೆದ 3 ದಿನದಲ್ಲಿ ಸಿಕ್ಬಿದ್ದೆ. ನನ್ನಂತ ತಿಳುವಳಿಕೆ ಇದ್ದವನು ಹೇಗೆ ಸಿಕ್ಕಿದ್ದೆ ಅಂತ ನಂಬಕ್ ಆಗ್ತಾ ಇಲ್ಲ. ಎಲ್ಲರ ಬಳಿ ಸಾಲಕ್ಕೆ ಬೇಡಿಕೆ ಇಟ್ಟೆ. ಸುಮಾರು ಜನದ ಬಳಿ ದುಡ್ಡು phone pay- google pay ಮಾಡುಸ್ಕೊಂಡೆ. ಸುಮಾರು 90000 ಸಾಲ ಮಾಡಿದೆ. ಪಾಪ ಅವರು ನನ್ ಮೇಲೆ ನಂಬಿಕೆ ಇಟ್ಟು ಕಳಸುದ್ರು. ಆದರೆ ಅವರ ನಂಬಿಕೆ ಉಳಿಸಿಕೊಳ್ಳಲು ನನಗೆ ಆಗಲಿಲ್ಲ.
ಅವರು ಯಾರು ಹಣಕ್ಕಾಗಿ ಒತ್ತಾಯ ಮಾಡಲಿಲ್ಲ. ಆದರೇ ನನಗೇ ಒಂದು ರೀತಿ ಜಿಗುಪ್ಸೆವುಂಟಾಗುತ್ತಿದೆ. ಈ ಸಣ್ಣ ಅಮೌಂಟ್ಗಳು ನನಿಗೆ ದೊಡ್ಡ ವಿಷಯ ಯೇನು ಆಗಿರಲಿಲ್ಲ. ಆದರೆ ಎಲ್ಲರ ನಂಬಿಕೆ ಉಳಿಸಿಕೊಳ್ಳೋದು ನನಗೆ ಈ ಸಂದರ್ಭದಲ್ಲಿ ಕಷ್ಟ ಆಯಿತು. ನಾನು ಬರುತಿದ್ದರೆ ಇನ್ನು ಸ್ವಲ್ಪ ದಿನಗಳಲ್ಲಿ ಡಿಗ್ರಿ ಮುಗಿಸಿತ್ತು. ನಾನು ಒಬ್ಬ ಒಳ್ಳೆ ವಿದ್ಯಾರ್ಥಿ ಈ ಸಲ ರ್ಯಾಂಕ್ ಬರೋ ಚಾನ್ಸ್ ಸಹ ಇತ್ತು. ಆದರೇ ಅದು ಇನ್ನೂ ನೆನಪು ಮಾತ್ರ.
ಅಪ್ಪ-ಅಮ್ಮ ಸಂಜಯ್ ನನ್ನ ಕ್ಷಮಿಸಿ ಬಿಡಿ. ನಿಮ್ಮ ಆಸೆ ನಂಬಿಕೆ ಎಲ್ಲ ನಾನು ಹಾಳು ಮಾಡುತ್ತ ಇದಿನಿ ಅಂತ ಬೇಜಾರು ಆಗಬೇಡಿ. ನನ್ನ ಸಾಲ ನಿಮ್ಮ ಮೇಲೆ ಹಾಕಿ ಹೋಗ್ತಾ ಇದಿನಿ ಅಂತ ಸಿಟ್ಟು ಮಾಡಿಕೋಬೇಡಿ. ನನ್ನ ಬೈಕ್ ಮಾರೀ ಸ್ವಲ್ಪ ಅಡ್ ಜೆಸ್ಟ್ ಮಾಡಿ ಎಲ್ಲರಿಗೂ ಕೊಡಿ. ನನ್ನ ಜೀವನಾನೇ ಒಂದು ರೀತಿ ಉಪ್ಪಿಲ್ಲದ ಊಟದ ರೀತಿ ಈ ಸುಮಾರು 3 ವರ್ಷದಿಂದ ಆಗಿದೆ.
ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ. ಸಣ್ಣ ಸಣ್ಣ ಹುಡುಗರಿಗೆಲ್ಲ lover ಇದ್ರು ನನಗೆ ಇಲ್ಲ ಅನ್ನೋ ಬೇಜಾರು. oneside ಅಲ್ಲಿ ನಾನ್ ಒಬ್ಬಳನ್ನು love ಮಾಡಿದ್ದೆ. ಅವಳು ಒಪ್ಲಿಲ್ಲ. ಒಳ್ಳೆ ಕೆಲಸ ಹುಡುಕೋದ್ರಲ್ಲಾ ವಿಫಲವಾದೆ. ಇತ್ತೀಚಿನ ದಿನಗಳಲ್ಲಿ ಬರಿಸಾಲ ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೇರೇಪಿಸಿತು.
ಊರು ಬಿಡೋಣ ಅಂತ ಮಾಡಿದೆ. ಆದರೆ ಊರು ಬಿಡೋಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ SoRRy please ಕ್ಷಮಿಸಿಬಿಡಿ ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಎಂದು ಸ್ಟೇಟಸ್ ಹಾಕಿದ್ದಾರೆ. ಯುವಕನಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇದೆ. ನಂಬರ್ 080 - 25497777.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications