ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!
ಶಿವಮೊಗ್ಗ, ಏಪ್ರಿಲ್ 17 : ಸಾಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಕಣ್ಣೀರು ಹಾಕಿದ್ದಾರೆ. 'ಟಿಕೆಟ್ ಕೈ ತಪ್ಪಿದಕ್ಕೆ ಅಳು ಬಂದಿಲ್ಲ ಸಾಗರದಲ್ಲಿ ಅಭಿಮಾನಿಗಳ ನಿರಾಶೆಗೆ ಕಣ್ಣೀರು ಬಂದಿದೆ' ಎಂದು ಬೇಳೂರು ಗೋಪಾಲಕೃಷ್ಣ ಸಮರ್ಥನೆ ನೀಡಿದರು.
ಮಂಗಳವಾರ ಸಾಗರದ ರಾಘವೇಶ್ವರ ಭವನದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಅಭಿಮಾನಿಗಳ ಸಭೆ ನಡೆಸಿದರು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾತು ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು ಸಭೆಯಲ್ಲಿ ಕಣ್ಣೀರಿಟ್ಟರು.
ಪ್ರಶ್ನೆಗಳ ಸುರಿಮಳೆ ಹಾಕುವ ಮೂಲಕ ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು, 'ಯಡಿಯೂರಪ್ಪ ಮಗ ರಾಘವೇಂದ್ರ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ನನ್ನ ರಾಜಕೀಯ ಗುರುಗಳಾದ ದಿ.ಎಸ್.ಬಂಗಾರಪ್ಪ ಮಾತನಾಡಿ ಬೇಳೂರು ನಿನ್ನ ನಡೆ ಏನು ಎಂದು ಕೇಳಿದ್ದರು. ನಾನು ಪಕ್ಷದ ನಿಷ್ಠಾವಂತ ಪಕ್ಷಕ್ಕಾಗಿ ನಡೆದುಕೊಳ್ಳುವೆ ಗುರುಗಳೆ ಎಂದು ಹೇಳಿದ್ದೆ' ಎಂದರು.

'ಪಕ್ಷ ಸಾಗರದಲ್ಲಿ ಏನು ಇಲ್ಲದಾಗ ಬೆನ್ನಿಗೆ ಹಾಕಿಕೊಂಡು ಬೆಳೆಸಿದೆ. ಇದು ನನಗೆ ಕಷ್ಟವಾಯಿತಾ?' ಎಂದು ಭಾಷಣ ಆರಂಭಿಸಿದ ಬೇಳೂರು ಭಾಷಣದ ಮದ್ಯದಲ್ಲಿ ಅವರ ಕೂಲಿಂಗ್ ಗ್ಲಾಸ್ ಒಳಗೆ ಕಣ್ಣು ನೆನೆದಿತ್ತು. ಸೇರಿದ್ದ ಅಭಿಮಾನಿಗಳು ನಾವಿದ್ದೇವೆ ಅಳುವು ನಿಮಗಲ್ಲ ಅವರ ಬೆನ್ನಿಗೆ ಪೂರವಾಗಿ ಬೆನ್ನಿಗೆ ನಿಂತರು.
'ಅಭಿಮಾನಿಗಳ ಸಲಹೆ ಸೂಚನೆ ಏನಿದೆ? ಹಾಗೆ ನಡೆದುಕೊಳ್ಳಲಿದ್ದೇನೆ. ಈಗ ಬೆಂಗಳೂರಿಗೆ ಹೋಗಿ ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಆಗಲೂ ವರಿಷ್ಠರು ಕೇಳದಿದ್ದಾಗ ಪುನಃ ಅಭಿಮಾನಿಗಳ ಸಭೆ ನಡೆಸಿ ಪಕ್ಷೇತರ ಸ್ಪರ್ಧಿಸುವುದಾ? ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇನೆ' ಎಂದು ಹೇಳಿದರು.
'ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸುವ ಮಾತೆ ಇಲ್ಲ. ಈ ಅಸಮಾಧಾನದಿಂದ ನನ್ನ ಅಭಿಮಾನಿಗಳು ಯಾರ ಮೇಲೂ ಹಲ್ಲೆಗೆ ಮುಂದಾಗ ಬಾರದು. ನಿನ್ನೆ ನಡೆದ ಘಟನೆ ನನಗೆ ನೋವುಂಟು ಮಾಡಿದೆ' ಎಂದರು.












Click it and Unblock the Notifications