ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!
ಶಿವಮೊಗ್ಗ, ಏಪ್ರಿಲ್ 17 : ಸಾಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಕಣ್ಣೀರು ಹಾಕಿದ್ದಾರೆ. 'ಟಿಕೆಟ್ ಕೈ ತಪ್ಪಿದಕ್ಕೆ ಅಳು ಬಂದಿಲ್ಲ ಸಾಗರದಲ್ಲಿ ಅಭಿಮಾನಿಗಳ ನಿರಾಶೆಗೆ ಕಣ್ಣೀರು ಬಂದಿದೆ' ಎಂದು ಬೇಳೂರು ಗೋಪಾಲಕೃಷ್ಣ ಸಮರ್ಥನೆ ನೀಡಿದರು.
ಮಂಗಳವಾರ ಸಾಗರದ ರಾಘವೇಶ್ವರ ಭವನದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಅಭಿಮಾನಿಗಳ ಸಭೆ ನಡೆಸಿದರು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾತು ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು ಸಭೆಯಲ್ಲಿ ಕಣ್ಣೀರಿಟ್ಟರು.
ಪ್ರಶ್ನೆಗಳ ಸುರಿಮಳೆ ಹಾಕುವ ಮೂಲಕ ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು, 'ಯಡಿಯೂರಪ್ಪ ಮಗ ರಾಘವೇಂದ್ರ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ನನ್ನ ರಾಜಕೀಯ ಗುರುಗಳಾದ ದಿ.ಎಸ್.ಬಂಗಾರಪ್ಪ ಮಾತನಾಡಿ ಬೇಳೂರು ನಿನ್ನ ನಡೆ ಏನು ಎಂದು ಕೇಳಿದ್ದರು. ನಾನು ಪಕ್ಷದ ನಿಷ್ಠಾವಂತ ಪಕ್ಷಕ್ಕಾಗಿ ನಡೆದುಕೊಳ್ಳುವೆ ಗುರುಗಳೆ ಎಂದು ಹೇಳಿದ್ದೆ' ಎಂದರು.

'ಪಕ್ಷ ಸಾಗರದಲ್ಲಿ ಏನು ಇಲ್ಲದಾಗ ಬೆನ್ನಿಗೆ ಹಾಕಿಕೊಂಡು ಬೆಳೆಸಿದೆ. ಇದು ನನಗೆ ಕಷ್ಟವಾಯಿತಾ?' ಎಂದು ಭಾಷಣ ಆರಂಭಿಸಿದ ಬೇಳೂರು ಭಾಷಣದ ಮದ್ಯದಲ್ಲಿ ಅವರ ಕೂಲಿಂಗ್ ಗ್ಲಾಸ್ ಒಳಗೆ ಕಣ್ಣು ನೆನೆದಿತ್ತು. ಸೇರಿದ್ದ ಅಭಿಮಾನಿಗಳು ನಾವಿದ್ದೇವೆ ಅಳುವು ನಿಮಗಲ್ಲ ಅವರ ಬೆನ್ನಿಗೆ ಪೂರವಾಗಿ ಬೆನ್ನಿಗೆ ನಿಂತರು.
'ಅಭಿಮಾನಿಗಳ ಸಲಹೆ ಸೂಚನೆ ಏನಿದೆ? ಹಾಗೆ ನಡೆದುಕೊಳ್ಳಲಿದ್ದೇನೆ. ಈಗ ಬೆಂಗಳೂರಿಗೆ ಹೋಗಿ ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಆಗಲೂ ವರಿಷ್ಠರು ಕೇಳದಿದ್ದಾಗ ಪುನಃ ಅಭಿಮಾನಿಗಳ ಸಭೆ ನಡೆಸಿ ಪಕ್ಷೇತರ ಸ್ಪರ್ಧಿಸುವುದಾ? ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇನೆ' ಎಂದು ಹೇಳಿದರು.
'ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸುವ ಮಾತೆ ಇಲ್ಲ. ಈ ಅಸಮಾಧಾನದಿಂದ ನನ್ನ ಅಭಿಮಾನಿಗಳು ಯಾರ ಮೇಲೂ ಹಲ್ಲೆಗೆ ಮುಂದಾಗ ಬಾರದು. ನಿನ್ನೆ ನಡೆದ ಘಟನೆ ನನಗೆ ನೋವುಂಟು ಮಾಡಿದೆ' ಎಂದರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications