'ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು'
Recommended Video
ಶಿವಮೊಗ್ಗ, ಜೂನ್ 20 : 'ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಬಿ.ಎಸ್.ಯಡಿಯೂರಪ್ಪ ಅಕ್ರಮವಾಗಿ ಸಂಪಾದನೆ ಮಾಡಿರುವ ಹಣ ಅವರ ಮನೆಯಲ್ಲಿದೆ' ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ ದಾಳಿ: 215 ಕೋಟಿ ರೂ. ಕಪ್ಪು ಹಣ ಪತ್ತೆ
'ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಯಡಿಯೂರಪ್ಪ ಅವರು ಅಕ್ರವವಾಗಿ ಸಂಪಾದನೆ ಮಾಡಿರುವ ಹಣ ಅವರ ಮನೆಯಲ್ಲಿದೆ' ಎಂದರು.
ಚುನಾವಣೆಗೂ ಒಂದು ದಿನ ಮುನ್ನ ವಿವಿಧೆಡೆ IT, EC ದಾಳಿ
ಯಡಿಯೂರಪ್ಪ ಸಿಎಂ ಆಗಬಾರದು : 'ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ನಾನು ದೇವರಲ್ಲಿ ಬೇಡಿಕೊಂಡಿದ್ದೆ. ನನ್ನ ಪ್ರಾರ್ಥನೆಯನ್ನು ಸ್ವಾಮಿ ಸ್ವೀಕರಿಸಿದ್ದಾನೆ. ಆದ್ದರಿಂದ, ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು' ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
'ನನ್ನ ಮನೆದೇವರು ಶಿಕಾರಿಪುರದ ಹುಚ್ಚರಾಯ ಆಂಜನೇಯ ಸ್ವಾಮಿ. ಆ ದೇವರ ಬಳಿ ಚುನಾವಣೆ ಮುಂಚೆ ನಾನು ಪ್ರಾರ್ಥಿಸಿಕೊಂಡಿದ್ದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದೆಂಬ ನನ್ನ ಪ್ರಾರ್ಥನೆಯನ್ನು ಆ ಸ್ವಾಮಿ ಸ್ವೀಕಾರಿಸಿದ್ದಾನೆ' ಎಂದರು.