ಭೋರ್ಗರೆಯುತ್ತಿದೆ ಜೋಗ, ಈ ಸೊಬಗ ನೋಡಲು ಬಾ ಬೇಗ!
Recommended Video

ಶಿವಮೊಗ್ಗ, ಆಗಸ್ಟ್ 16: ಎಂತಹ ಅರಸಿಕನಲ್ಲಿಯೂ ಸೌಂದರ್ಯ ಆರಾಧನೆಯ ಭಾವ ಮೂಡಿಸುವ ಶಕ್ತಿ ಮಲೆನಾಡಿನ ಸೊಬಗಿನ ಜೋಗ ಜಲಪಾತಕ್ಕಿದೆ.
ಬಿರು ಬೇಸಿಗೆಯಲ್ಲಿ ಸಣ್ಣ ಝರಿಯಂತೆ ನೀರು ಧುಮುಕಿದರೂ ಅದರ ಅಂದ ಪ್ರವಾಸಿಗರಿಗೆ ಮುದ ನೀಡುತ್ತದೆ. ಹೀಗಿರುವಾಗ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಪರಸ್ಪರ ಜಿದ್ದಿಗೆ ಬಿದ್ದವರಂತೆ ತುಂಬಿಕೊಂಡು ನೋಡಿದಷ್ಟೂ ನೋಡಬೇಕೆನಿಸುವ ದೃಶ್ಯ ಮೂಡಿಸಿದೆ.
ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೋಗ ಜಲಪಾತ ತನ್ನ ವೈಭವವನ್ನು ಮರಳಿ ಪಡೆದುಕೊಂಡಿದೆ. ಲಿಂಗನಮಕ್ಕಿ ಜಲಾಶಯವು ಭರ್ತಿಯಾಗಿರುವುದರಿಂದ 22 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಹನ್ನೊಂದು ಗೇಟ್ಗಳ ಪೈಕಿ ಒಂಬತ್ತು ಗೇಟುಗಳನ್ನು ತೆರೆಯಲಾಗಿದೆ.

ಭಾರತದ ಅತ್ಯಂತ ಎತ್ತರದ ಜಲಪಾತ ಎಂದು ಹೆಸರಾಗಿರುವ ಜೋಗದಲ್ಲಿ ಶರಾವತಿ 830 ಅಡಿ ಎತ್ತರದಿಂದ ಮೈದುಂಬಿಕೊಂಡು ನೆಲವನ್ನು ಮುತ್ತಿಕ್ಕುತ್ತಿದ್ದಾಳೆ.

'ಮುಂಗಾರು ಮಳೆ' ಚಿತ್ರದಲ್ಲಿ ಜೋಗವನ್ನು ಸೆರೆಹಿಡಿದ ಬಗೆ ಅನನ್ಯ. ಅದರಿಂದ ಪ್ರೇರಣೆಗೊಂಡ ಅನೇಕರು ವಿವಿಧ ಕೋನಗಳಿಂದ ಜೋಗದ ಜನಸಿರಿಯನ್ನು ತಮ್ಮ ಕ್ಯಾಮೆರಾ, ಮೊಬೈಲ್ ಫೋನ್ಗಳನ್ನು ಚಿತ್ರಿಸುತ್ತಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಈ ವಿಡಿಯೋ ದೇಶದಾದ್ಯಂತ ವೈರಲ್ ಆಗುತ್ತಿದೆ.
#WATCH Visuals of Jog falls in Karnataka's Shimoga during monsoon pic.twitter.com/q2jRMRUXzR
— ANI (@ANI) 15 August 2018
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಸಾಮರ್ಥ್ಯ 1819 ಅಡಿ. ಮಲೆನಾಡಿನಲ್ಲಿ ಉತ್ತರ ಮಳೆಯಾಗುತ್ತಿರುವುದರಿಂದ ಜಲಾಶಯ ತುಂಬಿಕೊಳ್ಳುತ್ತಿದ್ದು, 1815 ಅಡಿ ನೀಡು ಸಂಗ್ರಹವಾಗಿದೆ. 1964 ರಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ಇದುವರೆಗೂ 13 ಬಾರಿ ಮಾತ್ರ ಜಲಾಶಯ ಭರ್ತಿಯಾಗಿದ್ದು, 2014ರಲ್ಲಿ ಕೊನೆಯ ಬಾರಿ ಜಲಾಶಯದ ಒಡಲು ತುಂಬಿಕೊಂಡಿತ್ತು.

ವಿಪರೀತ ಮಳೆ, ಥಂಡಿ ವಾತಾವರಣ, ರಸ್ತೆ ಸಂಪರ್ಕದ ಸಮಸ್ಯೆಗಳ ಹೊರತಾಗಿಯೂ ಜೋಗದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಅತ್ತ ದೌಡಾಯಿಸುತ್ತಿದೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications