Get Updates
Get notified of breaking news, exclusive insights, and must-see stories!

KS Eshwarappa: ಪ್ರತಿಸ್ಪರ್ಧಿ ರಾಘವೇಂದ್ರ ಪರ ಮತ ಯಾಚಿಸಿದ್ರಾ ಕೆ ಎಸ್ ಈಶ್ವರಪ್ಪ..? ಏನಿದು ಸುದ್ದಿ?

ಶಿವಮೊಗ್ಗ, ಮೇ. 07: ದೇಶದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಜೊತೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಸಕತ್ ಕುತೂಹಲ ಕೆರಳಿಸಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಸಂಸದ ಬಿವೈ ರಾಘವೇಂದ್ರ ಅವರು ಈ ಕ್ಷೇತ್ರದಿಂದ ಮತ್ತೊಂದು ಬಾರಿ ಕಣಕ್ಕಿಳಿದಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ, ಚಲನಚಿತ್ರ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಜೊತೆಗೆ ಪೈಪೋಟಿ ನೀಡಲಿದ್ದಾರೆ.

Fake news spread about KS Eshwarappa over election result

ರಾಘವೇಂದ್ರ ಪರ ಪ್ರಚಾರ ಮಾಡಿದ್ರಾ ಈಶ್ವರಪ್ಪ!?

ಇತ್ತೀಚೆಗೆ ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಅವರ ಹೇಳಿಕೆ ನೀಡಿದ್ದಾರೆ ಎಂದು ಆಶ್ಚರ್ಯಕರ ಸುದ್ದಿಯೊಂದು ಸಕತ್ ವೈರಲ್ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಮದ್ರ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ ಎಂದು ಈ ಸುದ್ದಿಯಲ್ಲಿ ಹೇಳಲಾಗಿದೆ. ಆದರೆ, ಇದನ್ನು ಈಶ್ವರಪ್ಪ ಬೆಂಬಲಿಗರು ಮತ್ತು ಅವರ ಪುತ್ರ ಕಾಂತೇಶ್ ಖಂಡಿಸಿದ್ದಾರೆ.

ಆ ಹೇಳಿಕೆಯಲ್ಲಿ ಇರುವುದು ಏನು ಎನ್ನುವುದಾದರೆ, "ಶಿವಮೊಗ್ಗದ ಪ್ರಜ್ಞಾವಂತ ಮತದಾರರಲ್ಲಿ ವಿನಂತಿ, ನಿಮಗೆಲ್ಲ ತಿಳಿದಿರುವಂತೆ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಆ ನಡೆಗೆ ನಾನು ಈಗಲೂ ಬದ್ಧ. ನನಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಸಿಟ್ಟು, ಮನಸ್ತಾಪ ಇರುವುದು ನಿಜ ಆದರೆ ನಮ್ಮ ನಡುವೆ ಇರುವ ಮನಸ್ತಾಪ ವಿರೋಧಿಗಳಿಗೆ ಲಾಭ ಮಾಡಿಕೊಡಬಾರದು" ಎಂದು ತಿಳಿಸಿದ್ದಾರೆ.

"ನಾಳಿನ ದಿನ ನಡೆಯುವ ಚುನಾವಣೆ ಶಿವಮೊಗ್ಗ ಮಾತ್ರವಲ್ಲದೆ ಪೂರ್ತಿ ದೇಶದ ಚಿತ್ರಣವನ್ನು ಬದಲು ಮಾಡುವ ಚುನಾವಣೆ, ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಭಾರತ ವಿಕಸಿತ ದೇಶವಾಗಿ ಬದಲಾಗುತ್ತಿದೆ ಇದು ಮುಂದುವರಿಯಬೇಕು ಎಂಬುದು ನನ್ನ ಜೀವನದ ಪರಮ ಆಶಯ. ನರೇಂದ್ರ ಮೋದಿಜೀ ಯವರ ಗೆಲುವು ಈ ದೇಶ ಹಾಗೂ ಧರ್ಮ ರಕ್ಷಣೆಗೆ ಅತ್ಯಗತ್ಯವಾಗಿದ್ದು ನಾಳಿನ ದಿನ ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ ಬಿ. ವೈ ರಾಘವೇಂದ್ರರವರನ್ನು ಗೆಲ್ಲಿಸಿ ಮೋದಿ ಕೈ ಬಲ ಪಡಿಸಬೇಕು" ಎಂದಿದ್ದಾರೆ.

"ನನಗೆ ತಿಳಿದಿದೆ ನಿಮಗೆ ನನ್ನ ಮೇಲೆ ಅಪಾರ ಗೌರವ ಇದೆ. ಆದರೆ ದೇಶದ ಹಿತದೃಷ್ಟಿಯಿಂದ ನೀವು ಬಿಜೆಪಿಗೆ ಮತ ನೀಡುವಿರಿ ಎಂದು, ನನಗೆ ಪಕ್ಷದ ಕೆಲವರ ಮೇಲೆ ಬೇಸರ ಮನಸ್ತಾಪವಿದೆ ಅದನ್ನೆಲ್ಲ ನಾನು ಹಾಗೂ ಪಕ್ಷದ ಹಿರಿಯ ಮುಖಂಡರು ಸೇರಿ ಮುಂದಿನ ದಿನದಲ್ಲಿ ಬಗೆಹರಿಸಿ ಜೊತೆಯಾಗಿ ಸಾಗುವ ಸಂಕಲ್ಪ ಮಾಡುತ್ತೇವೆ - ಕೆ. ಎಸ್. ಈಶ್ವರಪ್ಪ" ಎಂದು ಈ ಹೇಳಿಕೆ ಸಕತ್ ವೈರಲ್ ಆಗುತ್ತಿದೆ.

ಚುನಾವನೆಗೂ ಮುನ್ನವೇ ಸೋಲೊಪ್ಪಿಕೊಂಡ ರಾಘವೇಂದ್ರ!

ಈಶ್ವರಪ್ಪ ಹೇಳಿಕೆ ಎಂದು ಫೇಕ್ ನ್ಯೂಸ್ ಹರಡಲಾಗುತ್ತಿದೆ ಎಂದು ಈಶ್ವರಪ್ಪ ಅವರ ಪುತ್ರ ಕಾಂತೇಶ್ ಕಿಡಿ ಕಾರಿದ್ದಾರೆ. "ಎದುರಾಳಿಯನ್ನು ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಗೊತ್ತಾದಮೇಲೆ ವೈರಿ ಪಡೆಯ ಏಕೈಕ ಅಸ್ತ್ರವೇ ಸುಳ್ಳು ವದಂತಿ ಹಾಗು ಅಪಪ್ರಚಾರ.. ಯಾವುದೋ ಹಳೆಯ ಸುದ್ದಿಯನ್ನು ಇಂದಿನ ಸುದ್ದಿಯಂತೆ ಬಿಂಬಿಸಿ ಮತದಾರರಲ್ಲ ಗೊಂದಲ ಸೃಷ್ಟಿಸುತ್ತಿರುವ ಕುತಂತ್ರಿಗಳೆ.... ಇಲ್ಲಿಗೆ ನಿಮ್ಮ ಆಟ ಮುಗಿಯಿತು..... ಮಾನ್ಯ ಈಶ್ವರಪ್ಪನವರು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನಯೇ ಬರುವುದಿಲ್ಲ .... ಏಕೆಂದರೆ ಈಶ್ವರಪ್ಪನವರಿಗೆ ಗೆಲುವು ಶತಸಿದ್ಧ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

"ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ಬಿ.ವೈ ರಾಘವೇಂದ್ರ.ಕೊನೆಗೂ ಈಶ್ವರಪ್ಪ ಅವರು ಮಾತಾಡಿದ ಹಳೆಯ ವಿಡಿಯೋ ತುಣುಕನ್ನು ಹರಿಬಿಟ್ಟು ಹತಾಶೆಗೊಂಡು ಸೋಲೊಪ್ಪಿಕೊಂಡ ಬಿಜೆಪಿ ಶಿವಮೊಗ್ಗ ಐ ಟಿ ಸೆಲ್" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ ಈಶ್ವರಪ್ಪ ಬೆಂಬಲಿಗರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+