ಶಿವಮೊಗ್ಗ: ಭದ್ರಾ ಜಲಾಶಯದಿಂದ 47,500 ಕ್ಯೂಸೆಕ್ಸ್ ನೀರು ಹೊರಕ್ಕೆ..!
ಶಿವಮೊಗ್ಗ, ಸೆಪ್ಟೆಂಬರ್ 20: ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಆಣೆಕಟ್ಟೆಯಿಂದ ಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
186 ಅಡಿ ಎತ್ತರವಿರುವ ಡ್ಯಾಂನಲ್ಲಿ 71.666 ಕ್ಯೂಸೆಕ್ಸ್ ನೀರಿನ ಸಾಮರ್ಥ್ಯ ಹೊಂದಿದೆ. ಇಂದು ಬೆಳಿಗ್ಗೆ 9.20 ರ ಸಮಯದಲ್ಲಿ ನದಿಯ ಒಳ ಹರಿವು 55 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡುತ್ತಿರುವ ಕಾರಣ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿಲಾಗಿದೆ.
ಅದರಂತೆ ಭದ್ರಾ ಡ್ಯಾಂ ನ ಹೊರಹರಿವನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಭದ್ರಾ ಜಲಾಶಯದಿಂದ 47,500 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಸೆ.14 ರಂದು ಜಲಾಶಯದ ನಾಲ್ಕೂ ಗೇಟಗಳನ್ನು ಮೂರಿಂಚು ಎತ್ತಲಾಗಿದ್ದು, 1,750 ಕ್ಯೂಸೆಕ್ಸ್ ನೀರನ್ನ ಬಿಡಲಾಗಿತ್ತು.

ಆರು ದಿನಗಳ ಒಳಗೆ ಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಅಧಿಕವಾಗಿರುವುದರಿಂದ ಇಂದು ಬೆಳಿಗ್ಗೆ ಅಧಿಕ ನೀರು ಬಿಡಲಾಗಿದೆ. 47,500 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿರುವ ಕುರಿತು ಡ್ಯಾಂ ನ ಸಿಇ ಚಂದ್ರಹಾಸ ತಿಳಿಸಿದ್ದಾರೆ.












Click it and Unblock the Notifications