ಜಾರ್ಖಂಡ್ನಲ್ಲಿ ಸುಧಾರಿತ ಬಾಂಬ್ ಸ್ಫೋಟ 11 ಮಂದಿಗೆ ಗಾಯ
ರಾಂಚಿ, ಮೇ 28: ಜಾರ್ಖಂಡ್ನಲ್ಲಿ ನಕ್ಸಲರು ಸುಧಾರಿತ ಬಾಂಬ್ ಸ್ಫೋಟಗೊಳಿಸಿದ ಕಾರಣ 11 ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಕುಚೈ ಪ್ರದೇಶದ ಸರೈಕೆಲ್ಲಾದಲ್ಲಿ ನೆಲಬಾಂಬ್ ಸ್ಫೋಟಿಸಿದ್ದಾರೆ. ಈ ದಾಳಿಯಲ್ಲಿ 209 ಕೋಬ್ರಾ ತಂಡದ 8 ಯೋಧರು ಮತ್ತು ಜಾರ್ಖಂಡ್ ಪೊಲೀಸ್ನ ಮೂವರು ಸಿಬ್ಬಂದಿ ಸೇರಿ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ.
ಜಾರ್ಖಂಡ್ನಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿಯನ್ನು ವೈಮಾನಿಕ ಅಂಬುಲೆನ್ಸ್ ಮೂಲಕ ರಾಂಚಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಭದ್ರತಾಪಡೆಯ 209 ಕೋಬ್ರಾ ಪಡೆ ಮತ್ತು ಜಾರ್ಖಂಡ್ ಪೊಲೀಸರು ಜಂಟಿಯಾಗಿ ಮಂಗಳವಾರ ಮುಂಜಾನೆ ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ಬೆಳಗಿನ ಜಾವ 4.53ರಲ್ಲಿ ಸರೈಕೆಲಾ ಪ್ರದೇಶಕ್ಕೆ ತಲುಪಿದಾಗ ನಕ್ಸಲರು ನೆಲದಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಬಾಂಬ್ ಸಿಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications