ತಲೆ ಮೇಲೆ 'ಟಗರು' ಎಂದು ಕೆತ್ತಿಸಿಕೊಂಡಿದ್ದಾನೆ ಈ ಅಭಿಮಾನಿ
ರಾಮನಗರ, ಫೆಬ್ರವರಿ. 26: ತಮ್ಮ ಮೆಚ್ಚಿನ ನಾಯಕನ ಚಿತ್ರ ಬಿಡುಗಡೆ ಆದರೆ ಕಟೌಟ್ ಹಾಕುವುದು, ಮೆಚ್ಚಿನ ಹೀರೊನ ಚಿತ್ರ ಇರುವ ಟಿ ಶರ್ಟ್ ಧರಿಸುವುದು, ಅವರಂತೆ ಬಟ್ಟೆ ಹಾಕುವುದು ಮಾಮೂಲು ಆದರೆ ಇಲ್ಲೊಬ್ಬ ಮೆಚ್ಚಿನ ತಾರೆಯ ಚಿತ್ರದ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ.
ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ನಿವಾಸಿ ಕುಮಾರ್ ಕಳೆದ ಶುಕ್ರವಾರ ಬಿಡುಗಡೆ ಆದ ಶಿವರಾಜಕುಮಾರ್ ಅಭಿನಯದ 'ಟಗರು' ಹೆಸರನ್ನು ತಲೆಯ ಮೇಲೆ ಕೆತ್ತಿಸಿಕೊಂಡಿದ್ದಾನೆ. ಅಂದರೆ 'ಟಗರು' ಎಂದು ಕಟಿಂಗ್ ಮಾಡಿಸಿಕೊಂಡಿದ್ದಾನೆ.
ಈತ ಟಗರು ಚಿತ್ರಕ್ಕಾಗಿ ತನ್ನ ತಲೆಯ ಹಿಂಭಾಗ ಸ್ಪೆಷಲ್ ಹೇರ್ ಕಟ್ ಮೂಲಕ ಟಗರು ಎಂದು ಬರೆಸಿಕೊಂಡು ಅಭಿಮಾನ ಮೆರೆದಿದ್ದಾನೆ. ಈ ಕುಮಾರ್ ಹಿಂದಿನಿಂದಲ್ಲೂ ಶಿವರಾಜ್ ಕುಮರ್ ಅವರ ಎಲ್ಲ ಚಿತ್ರಗಳನ್ನ ಮೊದಲ ಪ್ರದರ್ಶನವನ್ನೇ ನೋಡಿ ಖುಷಿ ಪಡುತ್ತಾನೆ ಅಲ್ಲದೇ ಥೀಯಟರ್ಗಳ ಮುಂದೆ ಕಟೌಟ್ ಕಟ್ಟುವುದು ಹೂವಿನ ಹಾರ ಹಾಕುವುದು ಹಾಗೂ ಪಟಾಕಿ ಸಿಡಿಸಿ ಸಿಹಿ ಹಂಚುವುದನ್ನೂ ಈತ ತಪ್ಪಿಸುವುದಿಲ್ಲ.

ರಾಜ್ ಕುಮಾರ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಕುಮಾರ್ ತನ್ನ ಗಾಡಿಯ ಮೇಲೆ ರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಅವರ ಚಿತ್ರಗಳನ್ನು ಹಾಕಿಸಿಕೊಂಡಿದ್ದಾರೆ. ಆದರೆ ಇವರಿಗೆ ಶಿವರಾಜ್ ಕುಮಾರ್ ಅವರ ಮೇಲೆ ಸ್ವಲ್ಪ ಹೆಚ್ಚಿನ ಅಭಿಮಾನ.

ಇನ್ನು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಧನಂಜಯ ( ಡಾಲಿ) ಶಿವರಾಜ್ ಕುಮಾರ್ ( ಟಗರು ಶಿವ) ರವರರಿಗೆ ಪಾತ್ರದ ಸಂಭಾಷಣೆ ಯಲ್ಲಿ ಕೀಳುಮಟ್ಟದ ಪದ ಪ್ರಯೋಗ ಮಾಡಿರುವುದು ಕೆಲವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಡಾ.ರಾಜ್ ಕುಟುಂಬದ ಯಾರೊಬ್ಬರ ಚಿತ್ರದಲ್ಲೂ ಕೆಟ್ಟ ಸಂಭಾಷಣೆ ಪ್ರಯೋಗ ಇದುವರೆಗೂ ಮಾಡಿಲ್ಲ ಆದ್ದರಿಂದ ಈ ಚಿತ್ರದ ಪಾತ್ರದಲ್ಲಿ ಖಳನಾಯಕ ಶಿವರಾಜ್ ಕುಮಾರ್ ಗೆ ಮಾಡಿರುವ ಅಶ್ಲೀಶ ಪದಪ್ರಯೋಗವನ್ನು ತೆಗೆಯಬೇಕೆಂದು ಚನ್ನಪಟ್ಟಣದ ಶಿವರಾಜ್ ಕುಮಾರ್ ಅಭಿಮಾನಿಗಳು ಇದೇ ವೇಳೆ ಒತ್ತಾಯಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications