Get Updates
Get notified of breaking news, exclusive insights, and must-see stories!

CN Ashwath Narayan: ಪದ್ಮನಾಭನಗರ, ಕನಕಪುರದಲ್ಲಿ ಯಾರೇ ಬಂದರೂ ಆರ್.ಅಶೋಕ್ ಮಣಿಸಲು ಸಾಧ್ಯವಿಲ್ಲ

ರಾಮನಗರ, ಏಪ್ರಿಲ್‌, 20: ರಾಜ್ಯ ವಿಧಾನಸಭೆ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಮತ್ತೊಂದೆಡೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಗಳು ಆಗುತ್ತಲೇ ಇವೆ. ಹಾಗೆಯೇ ಪದ್ಮನಾಭ ನಗರದಲ್ಲಿ ಆರ್.ಆಶೋಕ್ ವಿರುದ್ಧ ಯಾರೇ ಬಂದರೂ ಸ್ವಾಗತ, ಪದ್ಮನಾಭ ನಗರ‌ ಹಾಗೂ ಕನಕಪುರ ಎರಡೂ ಕ್ಷೇತ್ರಗಳಲ್ಲೂ ಆರ್.ಆಶೋಕ್‌ಗೆ ಗೆಲುವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಆಶ್ವತ್ಥ್‌ ನಾರಾಯಣ್ ಭವಿಷ್ಯ ನುಡಿದರು.

ರಾಮನಗರದ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ.ಸಿ.ಎನ್.ಆಶ್ವತ್ಥ್‌ ನಾರಾಯಣ್, ಪದ್ಮನಾಭನಗರ ಕ್ಷೇತ್ರದಲ್ಲಿ ಸಂಸದ ಡಿ.ಕೆ‌.ಸುರೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಪದ್ಮನಾಭನಾಗರಕ್ಕೆ ಯಾರು ಬೇಕಾದರೂ ಬರಬಹುದು ಸ್ವಾಗತಾರ್ಹ ಎಂದರು.

R.Ashok will be win in Padmanabhanagar, Kanakapura constituencies: C.N.Ashwath Narayan prediction

ಪದ್ಮನಾಭನಗರದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ ಎಂದ ಡಿ.ಕೆ. ಸಹೋದರರ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಆಶ್ವತ್ಥ್‌ ನಾರಾಯಣ್, ಪ್ರಜಾಪ್ರಭುತ್ವ ಉಳಿಸಬೇಕಾಗಿರುವುದು ಪದ್ಮನಾಭನಗರದಲ್ಲಿ ಅಲ್ಲ. ಮೊದಲು ರಾಜ್ಯದಲ್ಲೇ ಹಿಂದುಳಿದ ತಾಲೂಕು ಎಂಬ ಪಟ್ಟಿ ಕಟ್ಟಿಕೊಂಡಿರುವ ಕನಕಪುರದಲ್ಲಿ ಅಭಿವೃದ್ಧಿಗಳು ಆಗಲಿ. ಹೀಗೆ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಅಂದರೆ ಆರ್.ಆಶೋಕ್ ಜಯಗಳಿಸಬೇಕು ಎಂದರು.

ಸಂವಿಧಾನ ಜನರಿಗೆ ಕೊಟ್ಟಿರುವ ಆಶೋತ್ತರಗಳನ್ನು ಉಳಿಸಿಕೊಳ್ಳಬೇಕು. ರಿಪಬ್ಲಿಕ್ ಆಪ್ ಕನಕಪುರ ಎಂಬ ವಾತವರಣದಿಂದ ಜನರನ್ನು ಹೊರಗಡೆ ತರಬೇಕು. ಕನಕಪುರದ ಜನರಿಗೆ ಸ್ವಾತಂತ್ರ್ಯ ಸಿಗಬೇಕು. ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಬ್ರದರ್ಸ್‌ಗೆ ಎಷ್ಟು ವಿರೋಧ ಇದೆ ಎಂಬುದು ಮೇ 13 ರಂದು ಬರುವ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಸುದೀಪ್ ಬೆಂಬಲ ನಮಗೆ ಆಶಾದಾಯಕ

ಇನ್ನು ಚಿತ್ರನಟ ಸುದೀಪ್ ಸಿಎಂ‌ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್‌ ನಾರಾಯಣ್, ಸುದೀಪ್ ಅವರು ತಮ್ಮ ಸ್ವಹಿಚ್ಚೆಯಿಂದ ಬೊಮ್ಮಾಯಿ ಪರ ಕ್ಯಾಂಪೇನ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗೆ ಸುದೀಪ್ ಬೆಂಬಲ ನೀಡಿರುವುದು ನಮಗೆ ಆಶಾದಾಯಕವಾಗಿದೆ ಎಂದರು.

ಸುದೀಪ್‌‌ ಜೊತೆಗೆ ಅವರ ಅಪಾರ ಬೆಂಬಲಿಗರು ಕೂಡ ನಮ್ಮ ಪರವಾಗಿ ನಿಲ್ಲುತ್ತಿದ್ದಾರೆ. ಸುದೀಪ್ ವಿರುದ್ದ ಯಾರು ಕೂಡ ಟೀಕಿಸಬಾರದು. ಅವರು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದುಕೊಂಡಿದ್ದಾರೆಯೋ ಅಲ್ಲೆಲ್ಲಾ ಪ್ರಚಾರ ಮಾಡುತ್ತಾರೆ. ಸುದೀಪ್ ಅವರ ಅಭಿಮಾನಿಗಳು ಕೂಡ ಎದರು ನೋಡುತ್ತಿದ್ದು, ಅಭಿಮಾನಿಗಳು ಸಹ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+