Get Updates
Get notified of breaking news, exclusive insights, and must-see stories!

ಪ್ರವಾಸಿಗರನ್ನು ಸೆಳೆಯುತ್ತಿರುವ ಜಾನಪದ ಲೋಕದ ದಸರಾ ಗೊಂಬೆಗಳು!

ರಾಮನಗರ, ಅ.04: ಗ್ರಾಮೀಣ ಪ್ರದೇಶದ ಜನರಲ್ಲಿ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾನಪದ ಸಂಸ್ಕೃತಿ ಮತ್ತು ಸೊಗಡನ್ನು ವಿಶ್ವಕ್ಕೆ ಸಾರುವ ಮೂಲಕ ಜನಪದರ ಕಾಶಿ ಎಂದೇ ಪ್ರಖ್ಯಾತವಾಗಿರುವ ರಾಮನಗರದ ಜಾನಪದ ಲೋಕದಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ನಾಡ ಹಬ್ಬ ದಸರಾಗೆ ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ. ಬೊಂಬೆ ಪ್ರದರ್ಶನದಲ್ಲಿ ಪಟ್ಟದ ಗೊಂಬೆಗಳಿಗೆ ಅಗ್ರಸ್ಥಾನವಿದ್ದು, ಸೆರಾಮಿಕ್, ಮಣ್ಣು, ಪಿಂಗಾಣಿ ಮತ್ತು ಮರದ ಬೊಂಬೆಗಳಿಗೆ ಪ್ರದರ್ಶನದಲ್ಲಿ ಆದ್ಯತೆ ನೀಡಲಾಗಿದೆ. ಪ್ಲಾಸ್ಟಿಕ್ ಆಟಿಕೆಗಳಿಗೆ ನಿಷೇಧ ಹೇರುವ ಮೂಲಕ ಜಾನಪದ ಲೋಕ ದೇಶಿಕಲಾ ಸಾಂಸ್ಕೃತಿಕ ಕೇಂದ್ರವೆಂಬುದನ್ನು ಸಾಕ್ಷೀಕರಿಸಿದೆ.

ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಜತೆಗೆ ಸಾಂದರ್ಭಿಕ ಅಂಶಗಳನ್ನು ಬೊಂಬೆಗಳಲ್ಲಿ ವ್ಯಕ್ತಪಡಿಸಲಾಗಿದ್ದು, ಇಡೀ ಕುಟುಂಬವನ್ನು ಮನರಂಜಿಸುವುದರೊಂದಿಗೆ ಮರೆಯಾಗುತ್ತಿರುವ ನೈತಿಕ ಮೌಲ್ಯ ಮತ್ತು ದೇಶ ಪ್ರೇಮವನ್ನು ಪುನಶ್ಚೇತನಗೊಳಿಸುವ ನಿಟ್ಟಿಲ್ಲಿ ದಸರಾ ಗೊಂಬೆ ಹಬ್ಬವನ್ನು ಜಾನಪದ ಲೋಕದಲ್ಲಿ ಏರ್ಪಡಿಸಲಾಗಿದೆ.

ದೇಶದ ವಿವಿಧ ಬುಡಕಟ್ಟುಗಳ ಮಾದರಿಗಳನ್ನು ಕಣ್ಣು ತುಂಬಿಕೊಳ್ಳಿ!

ದೇಶದ ವಿವಿಧ ಬುಡಕಟ್ಟುಗಳ ಮಾದರಿಗಳನ್ನು ಕಣ್ಣು ತುಂಬಿಕೊಳ್ಳಿ!

ಗೊಂಬೆ ಪ್ರದರ್ಶನದಲ್ಲಿ ಮೈಸೂರು ಅರಮನೆ, ಕೀಲುಕುದುರೆ, ಹಾವಾಡಿಗ, ದಸರಾ ಗೊಂಬೆಗಳು, ಮದುವೆ, ವಧುವರ, ದಶಾವತಾರ, ರಾಮಾಯಣದ ವಿವಿಧ ದೃಶ್ಯಾವಳಿ, ಸಂಗೀತ ಕಛೇರಿ, ಮಧುಮಕ್ಕಳ ಮೆರವಣಿಗೆ, ಬ್ಯಾಂಡ್ಸೆಟ್, ದೇಶದ ವಿವಿಧ ಬುಡಕಟ್ಟುಗಳ ಮಾದರಿ, ದೇವಾಲಯ, ಲವಕುಶ, ರಾಮಲಕ್ಷ್ಮಣ, ವಿಶ್ವಾಮಿತ್ರ, ಅಹಲ್ಯಾ ಶಾಪ ವಿಮೋಚನೆ, ಆಶ್ರಮದಲ್ಲಿ ಸೀತಾದೇವಿ, ಗೋವರ್ಧನಗಿರಿ ಎತ್ತಿದ ಕೃಷ್ಣ ಮತ್ತು ಪರಿವಾರ, ರಾಮನ ಪಟ್ಟಾಭಿಷೇಕ, ಕರಗ, ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಷಣ್ಮುಗ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಹಣ್ಣು ತರಕಾರಿ, ಮಂತ್ರಾಲಯದ ಗುರುಗಳು ಹೀಗೆ ನಾನಾ ಬಗೆಯ ಗೊಂಬೆಗಳು ಪ್ರವಾಸಿಗರನ್ನು ವಿಶ್ವ ಪ್ರಸಿದ್ಧ ಜಾನಪದ ಲೋಕದತ್ತ ಸೆಳೆಯುತ್ತಿವೆ.

ಒಂದು ತಿಂಗಳ ಕಾಲ ಜಾನಪದ ಲೋಕದಲ್ಲಿ ಗೊಂಬೆಗಳ ಪ್ರದರ್ಶನ

ಒಂದು ತಿಂಗಳ ಕಾಲ ಜಾನಪದ ಲೋಕದಲ್ಲಿ ಗೊಂಬೆಗಳ ಪ್ರದರ್ಶನ

ವಿಶೇಷವಾಗಿ ಬೊಂಬೆ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಿರುವ ಬೊಂಬೆಗಳೆಲ್ಲವೂ ನಮ್ಮ ಪೂರ್ವಿಕರು ಬಳಸಿದ್ದ ಬೊಂಬೆಗಳು. ಸಾರ್ವಜನಿಕರ ದೇಣಿಗೆ ರೂಪದಲ್ಲಿ ಬಂದಿರುವ ಅಪರೂಪದ ಕೊಡುಗೆಗಳಾಗಿವೆ. ನಮ್ಮ ಪೂರ್ವಿಕರ ಬದುಕಿನ ಜಾನಪದ ಸಂಸ್ಕ್ರತಿ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಯಶಸ್ವಿಯಾಗಿ ನಡೆಯುತ್ತಿದೆ.

ಪ್ರವಾಸಿಗರು ಜಾನಪದ ಲೋಕಕ್ಕೆ ಭೇಟಿ ನೀಡಿ, ಬೊಂಬೆ ಪ್ರದರ್ಶನ ವೈಭವವನ್ನು ಇನ್ನೂ ಒಂದು ತಿಂಗಳ ಕಾಲ ಕಣ್ಣತುಂಬಿಕೊಳ್ಳಬಹುದು.

ಮಕ್ಕಳಿಗೆ ಜನಪದ ಸಂಸ್ಕ್ರತಿಯ ಪರಿಚಯ ಇಲ್ಲಿ ಸಿಗಲಿದೆ

ಮಕ್ಕಳಿಗೆ ಜನಪದ ಸಂಸ್ಕ್ರತಿಯ ಪರಿಚಯ ಇಲ್ಲಿ ಸಿಗಲಿದೆ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 56 ಕಿಮಿ. ರಾಮನಗರದಿಂದ ಕೇವಲ 6 ಕಿಮೀ ಹಾಗೆಯೆ ಬೊಂಬೆನಾಡು ಚನ್ನಪಟ್ಟಣದಿಂದ 6 ಕಿಮೀ ಸನಿಹದಲ್ಲಿದೆ ಜಾನಪದ ಲೋಕ. 1996 ರಲ್ಲಿ ಪ್ರಾರಂಭವಾದ ಗೊಂಬೆ ಪ್ರದರ್ಶನ ನವರಾತ್ರಿಯ ಮೊದಲ ದಿನ ಪ್ರಾರಂಭವಾಗಿ ಒಂದು ತಿಂಗಳು ಇರುತ್ತದೆ. ಮೈಸೂರು ದಸರಾಗೆ ತೆರಳುವ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಜಾನಪದ ಲೋಕಕ್ಕೆ ಭೇಟಿ ನೀಡಿದರೆ ತಮ್ಮ ಪ್ರವಾಸ ಅವಿಸ್ಮರಣೀಯ ವಾಗುತ್ತದೆ.

ಜಾನಪದ ಲೋಕಕ್ಕೆ ಕಾಲಿಟ್ಟರೆ ಲೋಕ ಪರಿಸರ ಪ್ರವಾಸಿಗರ ಮನಸ್ಸು ಶಾಂತಗೊಳಿಸಿ ಎಲ್ಲಾ ಒತ್ತಡಗಳನ್ನು ದೂರ ಮಾಡುತ್ತದೆ . ಇನ್ನೂ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕೂಡ ಆಗುತ್ತದೆ. ಗ್ರಾಮೀಣ ಬದುಕಿನ ಸೂಗಡು, ಆಚಾರ, ವಿಚಾರ, ಜನಪದ ಸಂಸ್ಕ್ರತಿಯ ಪರಿಚಯವನ್ನು ಮಕ್ಕಳಿಗೆ ತಿಳಿಸುವ ಜಾನಪದ ಲೋಕದ ಪ್ರವಾಸ ವ್ಯರ್ಥವಾಗುವುದಿಲ್ಲ.

ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ ಈ ಜಾನಪದ ಲೋಕ

ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ ಈ ಜಾನಪದ ಲೋಕ

'ಜಾನಪದ ಲೋಕವು ದಿನೇ ದಿನೇ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡು, ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡುತ್ತಾ ಸಾಗುತ್ತಿದೆ. ಜಾಗತಿಕ ಪ್ರಪಂಚದಲ್ಲಿ ಮರೆಯಾಗುತ್ತಿರುವ ದೇಶಿಕಲೆ ಮತ್ತು ಸಂಸ್ಕೃತಿಯನ್ನು ದಸರಾ ಹಬ್ಬದ ಅಂಗವಾಗಿ ಪುನಶ್ಚೇತನಗೊಳಿಸಲು ಗೊಂಬೆ ಹಬ್ಬ ಪೂರಕವಾಗಿದೆ. ಅಲ್ಲದೇ ಹೊಸ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಗೊಂಬೆ ಪ್ರದರ್ಶನ ಸಹಕಾರಿಯಾಗಲಿದೆ' ಎಂದು ಜಾನಪದ ಲೋಕದ ಅಧ್ಯಕ್ಷರಾದ ಹಿ.ಸಿ.ರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+