ಎಸ್ಪಿಗೆ ಫ್ರೆಂಡ್ಗೆ ರಿಕ್ವೆಸ್ಟ್ ಕಳಿಸಿ 75 ಸಾವಿರ ಕಳೆದುಕೊಂಡ 'ಡಿ' ಗ್ರೂಪ್ ನೌಕರ!
ರಾಮನಗರ, ನವೆಂಬರ್ 17; ಉನ್ನತ ಅಧಿಕಾರಿಯ ಸ್ನೇಹ ಸಂಪಾದನೆ ಆಸೆಗೆ ಬಿದ್ದು ನಕಲಿ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳಸಿದ ನೌಕರೊಬ್ಬರು ಸುಮಾರು75 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. 'ಡಿ' ಗ್ರೂಪ್ ನೌಕರ ತನಗಾದ ವಂಚನೆಯ ವಿರುದ್ಧ ಸೈಬರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯತಿಯ 'ಡಿ' ಗ್ರೂಪ್ ನೌಕರ ಅನಿಲ್ ಎಂಬಾತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೆಸರಿನಲ್ಲಿದ್ದ ನಕಲಿ ಫೇಸ್ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದದರು. ಅದರ ಮೂಲಕ ಪರಿಚಯವಾದ ವಂಚಕರ ಮಾತು ನಂಬಿದ ಅನಿಲ್ ಸುಮಾರು 75 ಸಾವಿರ ಹಣ ಕಳೆದು ಕೊಂಡಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಫೋಟೋ ಇದ್ದ ನಕಲಿ ಖಾತೆಗೆ ಅನಿಲ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅನಿಲ್ ಕಳಿಸಿದ ರಿಕ್ವೆಸ್ಟ್ ಸ್ವೀಕಾರವಾದ ನಂತರದಲ್ಲಿ, ಅನಿಲ್ ಗುಡ್ನೈಟ್ ಸರ್ ಎಂದು ಸಂದೇಶ ಕಳಿಸಿದ್ದಾರೆ. ಆ ಕಡೆಯಿಂದ ಹೇಗಿದ್ದೀರಿ? ಎಂದು ಮರು ಸಂದೇಶ ಬಂದಿತ್ತು. ಹೀಗೆ ಕುಶಲೋಕಪರಿ ನಡೆದಿದೆ.
ಹಣ ಕಳೆದುಕೊಂಡರು; ಮತ್ತೊಂದು ದಿನ ನನ್ನ ಸ್ನೇಹಿತ ಸಿಆರ್ಪಿಎಫ್ನಲ್ಲಿದ್ದು, ಅವನಿಗೆ ವರ್ಗಾವಣೆ ಆಗಿದೆ, ಅವನ ಬಳಿ ಇರುವ ಟಿವಿ, ಸೋಫಾ, ಫ್ರಿಡ್ಜ್ ಸೇರಿ ಎಲ್ಲವನ್ನೂ 75 ಸಾವಿರ ರೂ.ಗಳಿಗೆ ನೀಡುತ್ತಾನೆ ಎಂಬ ಸಂದೇಶ ಕಾರ್ತಿಕ್ ರೆಡ್ಡಿ ಅವರ ನಕಲಿ ಖಾತೆಯಿಂದ ಅನಿಲ್ಗೆ ಬಂದಿತ್ತು.
ಇಷ್ಟೇ ಅಲ್ಲದೆ, ಸಂತೋಷ್ ಎಂಬುವರ ಮೊಬೈಲ್ ನಂಬರ್ ಅನ್ನು ಅನಿಲ್ಗೆ ಶೇರ್ ಮಾಡಲಾಗಿತ್ತು. ಈ ಮೆಸೇಜ್ ಆಧರಿಸಿ ಅನಿಲ್, ಆತ ನೀಡಿದ ನಂಬರ್ಗೆ 75 ಸಾವಿರ ರೂ.ಗಳನ್ನು ಯುಪಿಐ ಆ್ಯಪ್ ಮೂಲಕ ವರ್ಗಾವಣೆ ಮಾಡಿದ್ದರು.
ಆದರೆ, ನಿಗದಿತ ಸಮಯಕ್ಕೆ ಯಾವುದೇ ವಸ್ತುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಫೋಟೋ ಇರುವ ಫೇಸ್ಬುಕ್ ನಕಲಿ ಖಾತೆಯ ಮೆಸೆಂಜರ್ನಲ್ಲಿ ಆಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ, ಅಲ್ಲಿಂದಲೂ ಯಾವುದೇ ಉತ್ತರ ಬಾರದಿದ್ದಾಗ ಅದು ಕಾರ್ತಿಕ್ ರೆಡ್ಡಿ ಅವರ ನಕಲಿ ಫೇಸ್ಬುಕ್ ಅಕೌಂಟ್ ಎಂಬುದು ಅವರಿಗೆ ಗೊತ್ತಾಗಿದೆ. ಮೋಸ ಹೋಗಿರುವುದು ತಿಳಿದು ಠಾಣೆಗೆ ಗುರುವಾರ ಸಂಜೆ ದೂರು ನೀಡಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ತೆರೆದು ಹಲವು ಅಮಾಯಕರನ್ನು ವಂಚಿಸುತ್ತಿರವ ಹೊರ ರಾಜ್ಯದ ಒಂದು ತಂಡ ಸಕ್ರಿಯವಾಗಿದೆ. ಅರೆ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಮಾಡುತ್ತಿದ್ದಾರೆ ಎಂದು ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಾರ್ವಜನಿಕರು ಇತಂಹ ಮೋಸ ಜಾಲ ನಂಬಿ ಮೋಸ ಹೋಗಬಾರದು, ಈ ರೀತಿ ಮೋಸ ಜಾಲ ಕಂಡುಬಂದರೆ ತಕ್ಷಣ ಸೈಬರ್ ಪೋಲಿಸ್ ಠಾಣೆಗೆ ದೂರು ದಾಖಲಿಸಬೇಕು. ಒಂದು ವೇಳೆ ಮೋಸ ಹೋಗಿ ಹಣ ಪಾವತಿ ಮಾಡಿದ್ದರೆ ತಕ್ಷಣವೇ 1930 ಟೂಲ್ ಫ್ರೀ ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಿದರೆ ಅತಂಹ ನಂಬರ್ ಬ್ಲಾಕ್ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications