Get Updates
Get notified of breaking news, exclusive insights, and must-see stories!

ಇದ್ರೀಸ್ ಪಾಷಾ ಹತ್ಯೆ: ಬಂಧಿತ ಪುನೀತ್ ಕೆರೆಹಳ್ಳಿ 7 ದಿನ ಪೊಲೀಸ್ ಕಸ್ಟಡಿಗೆ

ರಾಮನಗರ, ಏಪ್ರಿಲ್. 10: ಜಾನುವಾರು ಸಾಗಾಟಗಾರ ಇದ್ರೀಸ್ ಪಾಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಕನಕಪುರ ಜೆಎಂಎಫ್‌ಸಿ ನ್ಯಾಯಾಲಯವು ಹಿಂದುತ್ವವಾದಿ ಪುನೀತ್ ಕೆರೆಹಳ್ಳಿಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮಾರ್ಚ್ 31 ರಂದು ಪುನೀತ್ ಕೆರೆಹಳ್ಳಿ ನೇತೃತ್ವದ ಗುಂಪು ಇದ್ರೀಸ್ ಪಾಷಾ ಅವರನ್ನು ಹಿಂಬಾಲಿಸಿ, ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ. ಜಾನುವಾರುಗಳನ್ನು ಸಾಗಿಸುತ್ತಿದ್ದ ಇದ್ರೀಸ್ ಪಾಷಾ ಅವರ ಇಬ್ಬರು ಸಹಚರರ ಮೇಲೆ ಹಲ್ಲೆ ನಡೆಸಿದ ಆರೋಪವೂ ಪುನೀತ್ ಕೆರೆಹಳ್ಳಿ ಮೇಲಿದೆ. ಪುನೀತ್ ಮತ್ತು ಆತನ ಸಹಚರರನ್ನು ಏಪ್ರಿಲ್ 5 ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು.

Cattle trader Idress Pasha murder case: Puneeth Kerehalli sent to 7-day police custody

ಮಾರ್ಚ್ 31 ರ ರಾತ್ರಿ, ಇದ್ರೀಸ್ ಪಾಷಾ ಮತ್ತು ಅವರ ಇತರ ಇಬ್ಬರು, ಸೈಯದ್ ಜಹೀರ್ (ಚಾಲಕ) ಮತ್ತು ಇರ್ಫಾನ್ ತಮ್ಮ ವ್ಯಾನ್‌ನಲ್ಲಿ 16 ಹಸುಗಳೊಂದಿಗೆ ರಾಮನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದರು. ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಸಾತನೂರು ವೃತ್ತದ ಬಳಿ ರಾತ್ರಿ 11.30 ರ ಸುಮಾರಿಗೆ ಅವರನ್ನು ಪುನೀತ್ ತಂಡ ತಡೆದಿದೆ.

ಬೆಂಗಳೂರಿನ ಪುನೀತ್ ಕೆರೆಹಳ್ಳಿ ನೇತೃತ್ವದ ಸ್ವಯಂ ಘೋಷಿತ ಗೋರಕ್ಷಕರು, ಮೂವರು ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಂಟೈನರ್‌ನಿಂದ ಹೊರಬರುವಂತೆ ಒತ್ತಾಯಿಸಿದ್ದಾರೆ. ಇನ್ನು ಮೂವರು ಜಾಗೃತದಳದವರು ಕಂಟೈನರ್ ಪರಿಶೀಲಿಸಿದಾಗ ಅದರೊಳಗೆ ಜಾನುವಾರುಗಳು ಪತ್ತೆಯಾಗಿವೆ. ಇಡೀ ಘಟನೆಯನ್ನು ಪುನೀತ್ ಅವರ ಫೇಸ್ ಬುಕ್ ಖಾತೆಯಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ.

ಪುನೀತ್ ಮತ್ತು ಇತರರು ಜಹೀರ್ ಅವರನ್ನು ತಡೆದಿರುವುದನ್ನು ನೋಡಿ, ಇದ್ರೀಸ್ ಪಾಷಾ ಮತ್ತು ಇರ್ಫಾನ್ ತಮ್ಮ ಸುರಕ್ಷತೆಯ ಭಯದಿಂದ ಬೇರೆ ಬೇರೆ ಕಡೆಗೆ ಓಡಿಹೋಗಿದ್ದಾರೆ. ಮರುದಿನ ಬೆಳಿಗ್ಗೆ ಪಾಷಾ ಅವರ ದೇಹವು ಪೊಲೀಸ್ ಠಾಣೆಯ ಸಮೀಪದಲ್ಲಿ ಪತ್ತೆಯಾಗಿದೆ. ಇದ್ರೀಸ್ ಪಾಷಾ ಅವರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪುನೀತ್ ಮತ್ತು ಇತರ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 341 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Cattle trader Idress Pasha murder case: Puneeth Kerehalli sent to 7-day police custody

ಪುನೀತ್ ಕೆರೆಹಳ್ಳಿ ಅವರು ರಾಷ್ಟ್ರ ರಕ್ಷಣಾ ಪಡೆ ಎಂಬ ಬಲಪಂಥೀಯ ಹಿಂದುತ್ವ ಗುಂಪಿನ ನಾಯಕರಾಗಿದ್ದಾರೆ. ಭಾರತೀಯ ಜನತಾ ಪಕ್ಷದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆಂದು ಬಿಜೆಪಿ ನಾಯಕರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ಪುನೀತ್ ಗೋರಕ್ಷಣಾ ಕಾರ್ಯದಲ್ಲಿ ತೊಡಗಿರುವುದು ಇದ್ರೀಸ್ ಪಾಷಾ ಹತ್ಯೆಗಷ್ಟೇ ಸೀಮಿತವಾಗಿಲ್ಲ. ಅವರ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಹಂಚಿಕೊಳ್ಳಲಾದ ಹಲವಾರು ವಿಡಿಯೋಗಳು ಅವರು ಜಾನುವಾರು ವ್ಯಾಪಾರಿಗಳನ್ನು ಹಿಂಸಿಸುತ್ತಿರುವುದನ್ನು ತೋರಿಸುತ್ತವೆ. ಇದ್ರೀಸ್ ಪಾಷಾ ಹತ್ಯೆಗೆ ಕೆಲವೇ ದಿನಗಳ ಮೊದಲು ಪೋಸ್ಟ್ ಮಾಡಿದ ಅಂತಹ ಒಂದು ವೀಡಿಯೊದಲ್ಲಿ, ಪುನೀತ್ ಅಲೀಮುಲ್ಲಾ ಬೇಗ್ ಎಂಬ ವ್ಯಕ್ತಿಯನ್ನು ಸ್ಟನ್ ಗನ್ ಬಳಸಿ ಹಿಂಸಿಸಿದ್ದಾರೆ.

ಮಾರ್ಚ್ 20 ರಂದು ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಅಲೀಮುಲ್ಲಾ ಬೇಗ್ ಅವರ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+