ರಾಯಚೂರು ಯುವಕನ ವಿಶೇಷ ಕೈಚಳಕ: ಸಾಬೂನಲ್ಲೇ ಅರಳಿದ ದೇವರ ಕೆತ್ತನೆಗಳು
ರಾಯಚೂರು, ಸೆಪ್ಟೆಂಬರ್ 10: ಸಾಧನೆ ಮಾಡಲು ಇಂತಹದ್ದೇ ಕ್ಷೇತ್ರ ಬೇಕು, ಇಂತಹದ್ದೇ ಹುದ್ದೆ ಬೇಕು, ಉನ್ನತ ಕೋರ್ಸ್ ಮಾಡಬೇಕು ಎಂಬ ಯಾವುದೇ ಹಂಗಿಲ್ಲ. ಇದೇ ರೀತಿ ಯುವಕನೊಬ್ಬ ಚಿತ್ರಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದು ಅವರ ಕಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಡೆದೊರೆ ನಾಡಿನ ಗ್ರಾಮೀಣ ಪ್ರತಿಭೆ ವಿಜಯಕುಮಾರ ಬಡಿಗೇರ ಎಂಬುವರೇ ಕಲಾಕ್ಷೇತ್ರದ ಸಾಧಕರಾಗಿದ್ದಾರೆ. ಮೈ ತೊಳೆದುಕೊಳ್ಳುವ ಸೋಪ್ನಲ್ಲೇ ಶ್ರೀ ಕೃಷ್ಣ ದೇವರು ಸೇರಿದಂತೆ ಅನೇಕ ವಿಭಿನ್ನ ಬಗೆಯ ದೇವರುಗಳ ಅವತಾರ ಚಿತ್ರ ಕೆತ್ತಿದ್ದು, ಅವರ ಚಿತ್ರಕಲೆ ಕೆತ್ತನೆಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮಾಕಾಪೂರದ ಕಲಾವಿದ ವಿಜಯಕುಮಾರ ಬಡಿಗೇರ ಅವರಿಗೆ ಈ ಕಲೆ ವಂಶಪರಂಪರೆಯಿಂದ ಬಂದಿದೆ. ಆದರೆ ಇವರೆಗೂ ಕೆತ್ತನೆ ಚಿತ್ರಕಲೆ ಪ್ರದರ್ಶಿಸಿಲ್ಲ. ಹೆಚ್ಚಿನ ಪ್ರಚಾರ ಪಡೆದಿಲ್ಲ. ಇತ್ತೀಚಿಗೆ ಯುವಕನ ಕಲೆಗೆ ಮಹತ್ವ ಬಂದಿದೆ. ಗುಂಡ್ ಪಿನ್ ಬಳಸಿ ಸೋಪಿನಲ್ಲಿ ದೇವರ ಚಿತ್ರ ಅರಳಿಸುವುದು ಇವರಿಗೆ ಹವ್ಯಾಸವಾಗಿದೆ. ಕಳೆದ ನಾಲ್ಕು ವರ್ಷದಿಂದ ಕಲಾ ಕ್ಷೇತ್ರದ ಯಶಸ್ಸಿನ ಪ್ರಯಣ ಮುಂದುವರೆದಿದೆ.
ಕಲಾವಿದನ ಕೈಗೆ ಚಾಕ್ ಪೀಸ್ ಕೊಟ್ಟರೆ ಸಾಕು ತನ್ನ ಕೈ ಚಳಕದಿಂದ ನಂದೀಶ್ವರ, ಗಣೇಶ ಸೇರಿದಂತೆ ವೈವಿಧ್ಯಮಯ ದೈವತ್ವದ ನೆಲೆಯಿರುವ ಚಿತ್ರ ಕೆತ್ತಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ದೇವರ ಚಿತ್ರವನ್ನು ಸೋಪಿನಲ್ಲಿ ಕೆತ್ತುವ ಮುಂಚೆ ಸ್ನಾನ ಮುಗಿಸಿ ಧ್ಯಾನಿಸಿ ಚಿತ್ರ ಅರಳಿಸುತ್ತಾರೆ.
ಚಿಕ್ಕ ವಯಸ್ಸಿನಲ್ಲಿಯೇ ವಾಸುದೇವನ ಪುತ್ರ ಶ್ರೀಕೃಷ್ಣ ಪರಮಾತ್ಮ , ಶ್ರೀರಾಮ ಚಂದ್ರನ ಭಕ್ತ ಆಂಜನೇಯ, ನಂದೀಶ್ವರ ಸೇರಿದಂತೆ ದೈವಾರಾಧನೆ ಬಿಂಬಿಸುವ 50ಕ್ಕೂ ಹೆಚ್ಚು ಚಿತ್ರ ಕೆತ್ತಿದ್ದಾರೆ.
ಜೊತೆಗೆ ಐತಿಹಾಸಿಕ ಪುರುಷ , ಮರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರ ಸಾಧನೆ ಬಿಂಬಿಸುವ ಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ವೀಕ್ಷಿಸಿದರೆ ಮನಸ್ಸಿನಲ್ಲಿ ಭಕ್ತಿ ಮೂಡಲಿದೆ. ಎಲ್ಲ ಚಿತ್ರಗಳನ್ನು 10 ರೂಪಾಯಿ ಬೆಲೆಬಾಳುವ ಸೋಪ್ನಲ್ಲಿ ಕೆತ್ತಿದ್ದಾರೆ. ಮೂರು ಗಂಟೆಯೊಳಗೆ ಒಂದು ಚಿತ್ರವನ್ನು ಇವರು ರಚಿಸುತ್ತಾರೆ. ದೇವರ ಚಿತ್ರಗಳನ್ನು ಸಾಬೂನ್ ಹಾಗೂ ಚಾಕ್ ಪೀಸ್ನಲ್ಲಿ ಸಿದ್ಧಪಡಿಸಿ ಭಕ್ತರಿಗೆ ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ.
'ಚಾಕ್ಪೀಸ್, ಸಾಬೂನಿನಲ್ಲಿ ವೈವಿಧ್ಯಮಯ ದೇವರ ಮೂರ್ತಿಗಳನ್ನು ಕೆತ್ತಿರುವೆ. ನನ್ನ ಕಲೆಗೆ ಬೆಂಬಲ ದೊರೆತಿದೆ. ದುಡ್ಡಿಗಾಗಿ ಕಲೆ ಮಾರಾಟ ಮಾಡಿಲ್ಲ. ಭಕ್ತರಿಗೆ ಉಚಿತವಾಗಿ ನೀಡುತ್ತಿರುವೆ' ಎಂದು ಕಲಾವಿದ ವಿಜಯಕುಮಾರ ಬಡಿಗೇರ ಮಾಕಾಪುರ ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications