Raichur: ಹಟ್ಟಿ ಚಿನ್ನದ ಗಣಿಯಲ್ಲಿ ಹೆಚ್ಚುವರಿ ಚಿನ್ನ ಉತ್ಪಾದನೆ
ರಾಯಚೂರು ಜನವರಿ 13: ಪ್ರಸ್ತುತ ಲಾಭದಲ್ಲಿ ಮುಂದುವರಿದಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು, ತನ್ನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮುಂದಾಗಿದೆ. ಕಂಪನಿಯು ವಾರ್ಷಿಕ 2 ಸಾವಿರ ಕೆ.ಜಿ ಚಿನ್ನ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈಗ ಹೆಚ್ಚುವರಿಯಾಗಿ 2 ಸಾವಿರ ಕೆ.ಜಿ ಚಿನ್ನ ಉತ್ಪಾದಿಸುವ ದಿಸೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಿದೆ.
ಕಂಪನಿಯ ಆವರಣದಲ್ಲಿಯೇ 59 ಕೋಟಿ ವೆಚ್ಚದಲ್ಲಿ ಇನ್ನೊಂದು ಹೊಸ ಬಾಲ್ ಮಿಲ್ ನಿರ್ಮಿಸಲಾಗಿದೆ. ಹೊಸ ಪ್ಲಾಂಟ್ನಲ್ಲಿ ಮೊದಲ ಹಂತವಾಗಿ 500 ಕೆ.ಜಿ ಉತ್ಪಾದನಾ ಕಾರ್ಯ ಆರಂಭವಾಗಿದ್ದು, ಏಜೆನ್ಸಿ ಮೂಲಕ ಅದರ ನಿರ್ವಹಣೆ ಮಾಡಲಿದೆ.

ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡ ಬಳಿಕ ಕಂಪನಿಯೇ ನೇರವಾಗಿ ಹೊಸ ಪ್ಲಾಂಟ್ನಲ್ಲಿ ಉತ್ಪಾದನೆ ಶುರು ಮಾಡಲಿದೆ. ಎಲ್ಲ ಕಾರ್ಯವೂ ಸುಗಮವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಇದರಿಂದ ಉತ್ಪಾದನೆಯ ಪ್ರತಿಯೊಂದು ಹಂತದ ಮೇಲೂ ನಿಗಾ ಇಡಲು ಸಾಧ್ಯವಾಗಿದೆ.
ಕಂಪನಿಯು 528 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಕೋಲಾರದಲ್ಲಿ ಚಿನ್ನದ ನಿಕ್ಷೇಪ ಇದೆ. ಆದರೆ, ಉತ್ಪಾದನಾ ವೆಚ್ಚವೇ ಅಧಿಕವಾಗುತ್ತಿರುವ ಕಾರಣ ಹಟ್ಟಿಯಲ್ಲಿ ಮಾತ್ರ ಉತ್ಪಾದನೆ ಮುಂದುವರಿದಿದೆ.
ಹಟ್ಟಿಯಲ್ಲಿ 2,800 ಮೀಟರ್ ಆಳದಲ್ಲಿ ಚಿನ್ನದ ಅದಿರು ತೆಗೆಯಲಾಗುತ್ತಿದೆ. ಪ್ರತಿ ಟನ್ ಅದಿರಿನಲ್ಲಿ ಸರಾಸರಿ 19 ಗ್ರಾಂ ಚಿನ್ನ ಉತ್ದಾದನೆಯಾಗುತ್ತಿದೆ. 1984ರ ವರೆಗೆ ಪ್ರತಿ ಟನ್ ಅದಿರಲ್ಲಿ ಕೇವಲ 7 ಗ್ರಾಂ ಚಿನ್ನ ಲಭಿಸುತ್ತಿತ್ತು. ತಂತ್ರಜ್ಞಾನ ಮೇಲ್ದರ್ಜೆಗೇರಿಸಿದ ನಂತರ 2011ರ ವೇಳೆಯಲ್ಲಿ ಹೆಚ್ಚಿನ ಚಿನ್ನ ದೊರೆತಿದೆ. ಈವರೆಗೆ ಇಲ್ಲಿ 85 ಟನ್ ಚಿನ್ನ ಉತ್ಪಾದಿಸಲಾಗಿದೆ.

₹268 ಕೋಟಿ ಲಾಭ
'ಕಂಪನಿಯು 2021-2022ರಲ್ಲಿ 1,238 ಕೆ.ಜಿ ಚಿನ್ನ ಉತ್ಪಾದಿಸಿ ₹626 ಕೋಟಿ ಲಾಭ ಗಳಿಸಿತ್ತು. ರಾಜ್ಯ ಸರ್ಕಾರಕ್ಕೆ ₹30.8 ಕೋಟಿ ತೆರಿಗೆ ಪಾವತಿಸಿತ್ತು. 2022-2023ರಲ್ಲಿ 1,411 ಚಿನ್ನ ಉತ್ಪಾದಿಸಿ, ₹828 ಕೋಟಿ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಜೊತೆಗೆ ₹39.1 ಕೋಟಿ ರಾಜಸ್ವವನ್ನೂ ಪಾವತಿ ಮಾಡಿತ್ತು.
'2023ರ ಏಪ್ರಿಲ್ನಿಂದ ಕಂಪನಿಯು ₹268 ಕೋಟಿ ಲಾಭ ಗಳಿಸಿದೆ' ಎಂದು ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆಣ್ಣನವರ್ ಹೇಳಿದರು. 'ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ, ಸಿರವಾರ ತಾಲ್ಲೂಕಿನ ಹಿರಾಬುದ್ದಿನ್ನಿ ಹಾಗೂ ದೇವದುರ್ಗ ತಾಲ್ಲೂಕಿನ ಊಟಿ ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಇದೆ. ಹೊಸದಾಗಿ 14 ಬ್ಲಾಕ್ಗಳಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ' ಎನ್ನುತ್ತಾರೆ ಅವರು.
-
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications