Get Updates
Get notified of breaking news, exclusive insights, and must-see stories!

Raichur Rural Elections: ರಾಯಚೂರು ಗ್ರಾಮೀಣದಲ್ಲಿ ಸಂಪ್ರದಾಯ ಮುರೀತಾರಾ ಬಸನಗೌಡ ದದ್ದಲ್‌? ಈ ಬಾರಿ ಯಾರಿಗೆ ಗೆಲುವು?

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ರಾಯಚೂರಿನ 7 ಕ್ಷೇತ್ರಗಳ ಪೈಕಿ ಪ್ರಮುಖವಾದ ಕ್ಷೇತ್ರ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಇಲ್ಲಿ ರಾಜ್ಯಕ್ಕೆ ಬೆಳಕು‌ ನೀಡುವ ಆರ್‌ಟಿಪಿಎಸ್‌ ಶಾಖೋತ್ಪನ್ನ ಘಟಕಗಳು ಇವೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಎಡ - ಬಲಕ್ಕಿವೆ. ಎರಡು ಪ್ರಮುಖ ನದಿಗಳು ಕ್ಷೇತ್ರದಲ್ಲಿ ಹರಿಯುವುದರಿಂದ ಇಲ್ಲಿ ಭತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಅದಲ್ಲದೇ ಶೇ.50ರಷ್ಟು ಪ್ರದೇಶ ಒಣಭೂಮಿ ಇದ್ದು, ಒಣ ಬೇಸಾಯ ಕೂಡ ಇದೆ.

ಪ್ರಮುಖ ಯಾತ್ರಿ ಸ್ಥಳ ಮಂತ್ರಾಲಯ ಕೂಡ ಇದೇ ಕ್ಷೇತ್ರಕ್ಕೆ ಹೊಂದಿಕೊಂಡಿದೆ. ಕೃಷ್ಣಾ ನದಿಯಿಂದ ತುಂಗಭದ್ರಾ ನದಿವರೆಗೂ ಕ್ಷೇತ್ರ ಚಾಚಿಕೊಂಡಿದ್ದು, ತೆಲಂಗಾಣದ ಗಡಿಯನ್ನು ಹಂಚಿಕೊಂಡಿರುವ ಕ್ಷೇತ್ರದಲ್ಲಿ ತೆಲುಗು ಭಾಷಿಕರೇ ಹೆಚ್ಚಿದ್ದು, ಇಲ್ಲಿ ಉರ್ದು ಮಿಶ್ರಿತ ಕನ್ನಡ ಕೂಡ ನಿಮ್ಮ ಕಿವಿಗೆ ಕೇಳುತ್ತದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಸುತ್ತುವರಿದುಕೊಂಡಿದೆ.

raichur rural constituency map

ಇಲ್ಲಿನ ಮತದಾರರು ಪ್ರತಿ ಚುನಾವಣೆಯಲ್ಲಿಯೂ ಬದಲಾವಣೆ ಬಯಸುತ್ತಾರೆ. ಇಲ್ಲಿ ಕಳೆದ ನಾಲ್ಕು ದಶಕಗಳಿಂದ ಸತತವಾಗಿ ಎರಡು ಬಾರಿ ಯಾರನ್ನೂ ಮತದಾರರು ಗೆಲ್ಲಿಸಿಲ್ಲ. ತುಂಗಭದ್ರಾ, ಕೃಷ್ಣಾ ನದಿಗಳು ಎಡ-ಬಲಕ್ಕಿದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ಸಮಸ್ಯೆ ಬಗೆಹರಿದಿಲ್ಲ, ಆರ್‌ಟಿಪಿಎಸ್‌ ಮೂಲಕ ಇಡೀ ರಾಜ್ಯಕ್ಕೆ ಕರೆಂಟ್‌ ಕೊಟ್ಟರೂ ಇಲ್ಲಿ ಕರೆಂಟ್‌ ಕಣ್ಣಾಮುಚ್ಚಾಲೆ ಇದೆ ಎನ್ನುವ ಕೊರಗು ಕ್ಷೇತ್ರಾದ್ಯಂತ ಹರಡಿದೆ. ಇಂತಹ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಇದೆ.

ಕ್ಷೇತ್ರದ ರಾಜಕೀಯ ಹಿನ್ನೆಲೆ!

ಇದು ಮೊದಲು ರಾಯಚೂರು-2 ಕ್ಷೇತ್ರವಾಗಿತ್ತು, ನಂತರ ಕಲ್ಮಲ ಕ್ಷೇತ್ರ ಎಂಬ ಹೆಸರು ಪಡೆಯಿತು. ಅದಾದ ಬಳಿಕ ರಾಯಚೂರು ಗ್ರಾಮೀಣ ಎಂದು ಬದಲಿಸಲಾಗಿದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ರಾಯಚೂರು ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2008ರಲ್ಲಿ ಕಾಂಗ್ರೆಸ್‌ನ ರಾಜಾ ರಾಯಪ್ಪ ನಾಯಕ ಗೆಲುವು ಸಾಧಿಸಿದ್ದರೆ, 2013ರಲ್ಲಿ ಬಿಜೆಪಿ ನಾಯಕ ಕೆ ಶಿವನಗೌಡ ನಾಯಕ ಅವರ ಆಪ್ತ ತಿಪ್ಪರಾಜು ಬಿಜೆಪಿಯಿಂದ ಆಯ್ಕೆಯಾಗಿದ್ದರು. 2018ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್‌ ವಶವಾಗಿದ್ದು, ಬಸನಗೌಡ ದದ್ದಲ್‌ ಹಾಲಿ ಶಾಸಕರಿದ್ದಾರೆ.

basavangowda daddal mal

ಇಲ್ಲಿ ಒಂದು ಬಾರಿ ಗೆದ್ದವರು ಸತತವಾಗಿ ಎರಡು ಬಾರಿ ಗೆದ್ದ ಉದಾಹರಣೆಗಳು ಬಹಳ ಕಡಿಮೆ. 1978 ಮತ್ತು 1983ರಲ್ಲಿ ಸುಧೀಂದ್ರ ರಾವ್‌ ಕಸಬೆ ಎನ್ನುವವರು ಸತತವಾಗಿ ಎರಡು ಬಾರಿ ಗೆದ್ದಿದ್ದೆ ಕೊನೆ. ಆ ಬಳಿಕ ಯಾರೂ ಕೂಡ ನಿರಂತರ ಎರಡು ಬಾರಿ ಗೆದ್ದಿಲ್ಲ. ಸದ್ಯದ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ 1999ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಸಚಿವರು ಕೂಡ ಆಗಿದ್ದರು.

2018ರಲ್ಲಿ ಕಾಂಗ್ರೆಸ್‌ನ ಬಸನಗೌಡ ದದ್ದಲ್‌ 66,656 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ತಿಪ್ಪರಾಜು ಹವಾಲ್ದಾರ್‌ 56,692 ಮತಗಳನ್ನು ಪಡೆದಿದ್ದರು. ಈ ಮೂಲಕ ಸುಮಾರು 10 ಸಾವಿರ ಮತಗಳ ಅಂತರದಿಂದ ಬಸನಗೌಡ ದದ್ದಲ್‌ ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ರವಿಕುಮಾರ್‌ ಪಾಟೀಲ್‌ 34,250 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಸಲವೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ.

Raichur Rural Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಬಸನಗೌಡ ದದ್ದಲ್ (ಕಾಂಗ್ರೆಸ್ ) 66,656 ತಿಪ್ಪರಾಜು (ಬಿಜೆಪಿ ) 56,692
2013 ತಿಪ್ಪರಾಜು (ಬಿಜೆಪಿ) 50,497 ರಾಜ ರಾಯಪ್ಪ ನಾಯ್ಕ್ (ಕಾಂಗ್ರೆಸ್ ) 47,227
bjp jds congress logos

ಆಕಾಂಕ್ಷಿಗಳು ಯಾರಾರು?

ಈಗಾಗಲೇ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದ್ದು, ಹಾಲಿ ಶಾಸಕ ಬಸನಗೌಡ ದದ್ದಲ್‌ ಅವರು ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿ ಆಗಿ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಜೆಡಿಎಸ್‌ ಕೂಡ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಸಣ್ಣ ನರಸಿಂಹ ನಾಯಕ ದಳ ಅಭ್ಯರ್ಥಿಯಾಗಿದ್ದಾರೆ. ಆಪ್‌ ಕೂಡ ಇಲ್ಲಿ ಸ್ವಲ್ಪ ಸದ್ದು ಮಾಡುತ್ತಿದ್ದು, ಡಾ ಸುಭಾಷ್‌ ಚಂದ್ರ ಸಂಭಾಜೀ ಎಂಬುವವರು ಆಮ್‌ ಆದ್ಮಿ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ಜಾತಿ ಲೆಕ್ಕಾಚಾರ!

ರಾಯಚೂರು ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದರೂ ಕುರುಬರು, ಗಂಗಾಮತಸ್ಥರು ಕ್ಷೇತ್ರದಲ್ಲಿ ನಿರ್ಣಾಯಕರು. ಲಿಂಗಾಯತರು, ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಫಲಿತಾಂಶದ ಲೆಕ್ಕಾಚಾರ ಬುಡಮೇಲು ಮಾಡಬಲ್ಲ ತಾಕತ್ತು ಪರಿಶಿಷ್ಟ ಜಾತಿಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+