ನೀವು ನೀಡುವ ಉದಾರ ದೇಣಿಗೆಯಿಂದ ಮಾತ್ರ ನಮ್ಮ ಮಗ ಬದುಕ್ತಾನೆ...
ನಾನು ದಿನಗೂಲಿ ನೌಕರ. ನಮ್ಮ ಆದಾಯ ತೀರಾ ಕಡಿಮೆ. ಮೂರು ಜನರ ಕುಟುಂಬವನ್ನು ಸಾಕುವುದೇ ನನ್ನ ಪಾಲಿಗೆ ದೊಡ್ಡ ಸವಾಲು. ಇದೀಗ ನನ್ನ ಮಗ ಮಹೇಶ್ ಗೆ ಬಹಳ ತುರ್ತಾಗಿ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಅದಕ್ಕಾಗಿ 4.5 ಲಕ್ಷ ರುಪಾಯಿ ($ 6314) ಹೊಂದಿಸಬೇಕಿದೆ. ನನ್ನಂಥ ಬಡವನಿಗೆ ಅದು ಹೇಗೆ ಸಾಧ್ಯವಾಗಬೇಕು; ನಿಮ್ಮಂಥ ಉದಾರಿಗಳು- ದಾನಿಗಳ ನೆರವಿಲ್ಲದೆ? ನೀವು ಉದಾರವಾಗಿ ದೇಣಿಗೆ ನೀಡಿದರೆ ನನ್ನ ಮಗ ಬದುಕ್ತಾನೆ.
Recommended Video
ನಮ್ಮದು ತುಂಬ ಸಂತೋಷವಾಗಿದ್ದ ಕುಟುಂಬ. ಆದರೆ ಈಗ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ದೇವಸ್ಥಾನಕ್ಕೆ ಹೋಗ್ತೀನಿ. ನನ್ನ ಮಗ ಅನುಭವಿಸುತ್ತಿರುವ ಆ ನೋವಿನಿಂದ ಹೊರಬರಲು ನೆರವಾಗು ದೇವರೇ ಅಂತ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಎಲ್ಲರೂ ಹೇಳ್ತಾರೆ: ಆ ದೇವರು ನಮ್ಮ ಮೊರೆಯನ್ನು ಕೇಳಿಸಿಕೊಳ್ಳುತ್ತಾನೆ. ಆದರೆ ಈ ತನಕ ನನ್ನ ಪ್ರಾರ್ಥನೆಯನ್ನು ಆ ದೇವರು ಕೇಳಿಸಿಕೊಂಡಿಲ್ಲ.
ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದೆ. ಮಗ ಆಟ ಆಡುವುದಕ್ಕೆ ಹೊರಗೆ ಹೋಗಿದ್ದ. ಇನ್ನೇನು ಅವನು ಬರ್ತಾನೆ ಅಂತ ಕಾಯ್ತಿದ್ದೆ. ಕೆಲ ನಿಮಿಷಗಳಲ್ಲೇ ಅವನು ವಾಪಸ್ ಕೂಡ ಬಂದಿದ್ದ. ಆದರೆ ಬಹಳ ಸುಸ್ತಾಗಿದ್ದ, "ಅಪ್ಪ, ನನ್ನಿಂದ ಉಸಿರಾಡುವುದಕ್ಕೆ ಆಗ್ತಿಲ್ಲ" ಎಂದು ಹೇಳುವುದಕ್ಕೂ ಬಹಳ ಕಷ್ಟಪಟ್ಟ.

ನನಗೆ ಕೈ ಕಾಲು ಆಡಲಿಲ್ಲ. ಕೂಡಲೇ ಆಸ್ಪತ್ರೆಗೆ ಓಡಿದೆ. ಸಾಮಾನ್ಯವಾಗಿ ಅವನಿಗೆ ಹುಷಾರಿಲ್ಲದಿದ್ದಾಗ ಔಷಧಿ ಕೊಡುವ ಡಾಕ್ಟರ್ ಅವರೇ. ಅಲ್ಲಿ ಅವನಿಗೆ ಮಾತ್ರೆ- ಇಂಜೆಕ್ಷನ್ ಕೊಟ್ಟರು. ಕೆಲ ಹೊತ್ತಿಗೆ ಅವನು ಪರವಾಗಿಲ್ಲ ಎಂಬಂತಾದ. ವಾಪಸ್ ಮನೆಗೆ ಕರೆದುಕೊಂಡು ಬಂದೆ.
ಆದರೆ, ಕೆಲವು ದಿನದ ನಂತರ ಅವನಿಗೆ ವಿಪರೀತ ಜ್ವರ ಬಂತು. ಆ ಸಲ ನಮಗೆ ಅವನದೇ ಚಿಂತೆ ಎಂಬಂತೆ ಆಯಿತು. ಮನೆ ಔಷಧಿಯನ್ನು ಪ್ರಯತ್ನಪಟ್ಟೆವು, ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಯಾವುದೂ ಕೆಲಸ ಮಾಡಲಿಲ್ಲ. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವನಿಗೆ ನಾನಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದರು.

ಆ ಪರೀಕ್ಷೆಗಳಿಂದ ಗೊತ್ತಾಗಿದ್ದೇನೆಂದರೆ, ಅವನಿಗೆ ಸೈನೋಟಿಕ್ ಕಂಜೆನ್ಷಿಯಲ್ ಹಾರ್ಟ್ ಡಿಸೀಸ್. ಇದು ಡಾಕ್ಟರ್ ಕೊಟ್ಟ ಹೆಸರು. ಅವನಿಗೆ ಹೃದಯ ಸಂಬಂಧಿ ಅನಾರೋಗ್ಯವಾಗಿದೆ ಎಂಬುದು ನಮಗೆ ಗೊತ್ತಾಗಿದ್ದು. ಒಂದು ಕ್ಷಣ ದಿಕ್ಕೇ ತೋಚದಂತಾಯಿತು. ಅಷ್ಟು ಚಟುವಟಿಕೆಯಾಗಿದ್ದ ಹುಡುಗನಿಗೆ ಅಂಥ ಕಾಯಿಲೆ ಅಂದರೆ ನನ್ನ ಹೆಂಡತಿ ನಾಗಮಣಿ ನಂಬಲು ತಯಾರಿರಲಿಲ್ಲ. ಕೆಲವು ದಿನ ನಾಗಮಣಿ ಏನನ್ನೂ ತಿನ್ನಲಿಲ್ಲ.
ಸದಾ ಅಳುತ್ತಿದ್ದಳು. ಮಗನನ್ನು ಗುಣಪಡಿಸು ಎಂದು ಆ ದೇವರನ್ನು ಪ್ರಾರ್ಥಿಸುತ್ತಿದ್ದಳು. ನನ್ನ ಮಗ ಹಾಗೂ ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿದರೆ ಹೃದಯ ಒಡೆದುಹೋದಂತೆ ಆಗುತ್ತದೆ. ನಮಗೇ ಯಾಕೆ ಇಂಥ ಶಿಕ್ಷೆ ಅನ್ನೋದು ನನಗೆ ಗೊತ್ತಿಲ್ಲ. ಸದ್ಯಕ್ಕೆ ನಮ್ಮ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಅಸಾಧ್ಯದ ಸಂಗತಿ.

ವೈದ್ಯರು ಹೇಳುವಂತೆ, ನನ್ನ ಮಗನಿಗೆ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ನಮಗೆ ಕೆಲವು ಔಷಧಿ ತರಲು ವೈದ್ಯರು ಬರೆದುಕೊಡುತ್ತಿದ್ದಾರೆ. ಅದು ತಾತ್ಕಾಲಿಕ ಪರಿಹಾರ ಮಾತ್ರ. ಶಸ್ತ್ರಚಿಕಿತ್ಸೆಯಿಂದ ಮಾತ್ರ ಅವನು ಸರಿಯಾಗಲು ಸಾಧ್ಯ. ಎರಡು ತಿಂಗಳೇ ಕಳೆದರೂ ಇನ್ನೂ ನನ್ನ ಮಗನ ಚಿಕಿತ್ಸೆಗೆ ಹಣ ಹೊಂದಿಸಲು ಆಗ್ತಾ ಇಲ್ಲ.
ದಿನ ಕಳೆದಂತೆ ಅವನ ಆರೋಗ್ಯ ಕ್ಷೀಣಿಸುತ್ತಾ ಇದೆ. ಕೆಲವು ಸಲ ಜ್ವರ ಜಾಸ್ತಿ ಆಗುತ್ತದೆ. ಕೆಲ ನಿಮಿಷಗಳ ಕಾಲ ಓಡಾಡಿದರೂ ಅವನ ಚರ್ಮ ನೀಲಿಗಟ್ಟುತ್ತದೆ. ಅವನ ವಯಸ್ಸಿನ ಮಕ್ಕಳು ಶಾಲೆ- ಆಟ ಅಂತ ಖುಷಿಖುಷಿಯಾಗಿ ಇರುತ್ತಾರೆ. ನನ್ನ ಮಗ ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾನೆ.

ನಿಮ್ಮೆಲ್ಲರನ್ನೂ ಕೈ ಮುಗಿದು ಕೇಳಿಕೊಳ್ತೀನಿ, ನನ್ನ ಮಗ ಮಹೇಶ್ ನನ್ನು ಉಳಿಸಿಕೊಳ್ಳಲು ಉದಾರವಾಗಿ ದಾನ ಮಾಡಿ. ಅವನ ಬದುಕು ಇನ್ನೂ ಸಾಕಷ್ಟಿದೆ. ಅದನ್ನು ಬದುಕಲು ಒಂದು ಅವಕಾಶ ನೀಡಿ. ನೀವು ನೀಡುವ ಸಹಾಯಕ್ಕೆ ನಮ್ಮ ಬದುಕಿನುದ್ದಕ್ಕೂ ಋಣಿಗಳಾಗಿ ಇರ್ತೀವಿ.
"Fundraising for cancer is a way to support medical treatment cost. Ketto is a largest crowdfunding website that supports crowdfunding for cancer, heart and many other treatments."
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications