ಐಶ್ವರ್ಯ ರೈರಿಂದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ ವಾಪಸ್!
ಪಾಟ್ನಾ, ನವೆಂಬರ್ 29: ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಪತ್ನಿ ಐಶ್ವರ್ಯ ರೈ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಪತ್ನಿ ಐಶ್ವರ್ಯ ರೈ ಅವರಿಗೆ ವಿಚ್ಛೇದನದ ನೋಟೀಸ್ ಕಳಿಸಿದ್ದರು.ಆದರೆ, ನನ್ನ ಕಕ್ಷಿದಾರ ತೇಜ್ ಪ್ರತಾಪ್ ಯಾದವ್ ಮನಸ್ಸು ಬದಲಿಸಿದ್ದಾರೆ. ವಿಚ್ಛೇದನ ವಿಷಯದ ಬಗ್ಗೆ ಮನೆಯವರ ಮಾತಿನಲ್ಲಿ ನಡೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತೇಜ್ ಪ್ರತಾಪ್ ಅವರ ವಕೀಲರು ಹೇಳಿದ್ದಾರೆ.
ಮದುವೆಯಾಗಿ ಆರು ತಿಂಗಳ ಮೊದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತೇಜ್ ಪ್ರತಾಪ್ ಯಾದವ್ ಗುರುವಾರ ಅರ್ಜಿ ವಾಪಸ್ ಪಡೆದಿದ್ದಾರೆ.
ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯ ಮಧ್ಯೆ ಹೊಂದಾಣಿಕೆಯಿರಲಿಲ್ಲ. ತಂದೆಗೆ ಟಿಕೆಟ್ ನೀಡುವ ವಿಚಾರಕ್ಕೆ ಐಶ್ವರ್ಯ ಕಿರಿಕಿರಿ ಮಾಡಿದ್ದರು ಎಂದು ಆರೋಪಿಸಿ, ತೇಜ್ ಪ್ರತಾಪ್ ಯಾದವ್ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು.

ಮದುವೆಯಾಗಿ 6 ತಿಂಗಳುಗಳಲ್ಲೇ ವಿಚ್ಛೇದನಕ್ಕೆ ಅರ್ಜಿ
ತೇಜ್ ಪ್ರತಾಪ್ ಹಾಗೂ ಐಶ್ವರ್ಯಾ ಅವರು ಮೇ 2018ರಲ್ಲಿ ಮದುವೆಯಾಗಿದ್ದರು.
ಐಶ್ವರ್ಯಾ ಹಾಗೂ ತೇಜ್ ಪ್ರತಾಪ್ ಅವರ ಮದುವೆ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದುಕೊಂಡು, ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ಮದುವೆಯಾದ 6 ತಿಂಗಳೀನಲ್ಲಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ವಿವಾಹ ವಿಚ್ಛೇದನ ಕೋರಿ ಅರ್ಜಿ ಹಾಕಲಾಗಿತ್ತು ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ ಎಂದು ತೇಜ್ ಪ್ರತಾಪ್ ಪರ ವಕೀಲ ಯಶವಂತಕುಮಾರ್ ಶರ್ಮ ವಾದಿಸಿದ್ದರು.

ಮಗನ ಸಂಸಾರ ಸರಿ ಮಾಡಿದ ರಾಬ್ರಿ ದೇವಿ
ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಮನೆ ತೊರೆದಿದ್ದ ತೇಜ್ ಪ್ರತಾಪ್ ಅವರು ವಾರಣಾಸಿಗೆ ತೆರಳಿದ್ದರು. ಯಾವುದೇ ಕಾರಣಕ್ಕೂ ಮತ್ತೆ ಐಶ್ವರ್ಯ ಜೊತೆ ಸಂಸಾರ ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.
ಆದರೆ, ಮಗನ ಮಾತು ಒಪ್ಪಲು ತಯಾರಿಲ್ಲದ ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ, ಸೊಸೆಯ ಪರವಾಗಿ ನಿಂತಿದ್ದಾರೆ. ಜೊತೆಗೆ, ವಿಚ್ಛೇದನಕ್ಕೆ ಲಾಲೂ ಪ್ರಸಾದ್ ಯಾದವ್ ಕೂಡಾ ಸಮ್ಮತಿಸುತ್ತಿಲ್ಲ. ಹೀಗಾಗಿ, ಲಾಲೂ ಕುಟುಂಬದ ಕೌಟುಂಬಿಕ ಸಮಸ್ಯೆ, ದಿನದಿಂದ ದಿನಕ್ಕೆ ಕಗ್ಗಂಟಾಗಿದ್ದ ಸಮಸ್ಯೆಯನ್ನು ಹೇಗೋ ನಿಭಾಯಿಸಿದ್ದಾರೆ. ಮನೆಯಲ್ಲಿ ಶಾಂತಿಗಾಗಿ ಕುಟುಂಬಸ್ಥರು ದೇವರ ಮೊರೆಹೋಗಿದ್ದು, ವಿವಿಧ ಹೋಮ ಹವನಗಳನ್ನು ನಡೆಸಿದ್ದು ಈಗ ಫಲ ನೀಡಿದೆ.

ವಿಜೃಂಭಣೆಯಿಂದ ನಡೆದಿದ್ದ ಮದುವೆ
ಬಿಹಾರದ ಮಾಜಿ ಮುಖ್ಯಮಂತ್ರಿ ದುರ್ಗಾ ಪ್ರಸಾದ್ ರೈ ಅವರ ಮೊಮ್ಮಗಳು, ರಾಷ್ಟ್ರೀಯ ಜನತಾದಳದ ಮುಖಂಡ, ಬಿಹಾರದ ಪರ್ಸಾ ಕ್ಷೇತ್ರದ ಶಾಸಕರೂ ಆಗಿರುವ ಚಂದ್ರಿಕಾ ರೈ ಮಗಳು ಐಶ್ವರ್ಯ ಜೊತೆ, ಲಾಲೂ ಮೊದಲ ಮಗ ತೇಜ್ ಪ್ರತಾಪ್ ಮದುವೆ ಧಾಂಧೂಂ ಎಂದು ಆರು ತಿಂಗಳ ಹಿಂದೆ ರಾಜಧಾನಿ ಪಾಟ್ನಾದಲ್ಲಿ ನಡೆದಿತ್ತು. ತಾಯಿ ರಾಬ್ರಿ ದೇವಿ ಒಂದು ವರ್ಷ ವಧುವಿಗಾಗಿ ಹುಡುಕಾಟ ನಡೆಸಿದ್ದರು. ಇದೇ ವರ್ಷ ಮೇ ಹನ್ನೆರಡರಂದು ನಡೆದ ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಲಾಲೂ ಕೂಡ ಪೆರೋಲ್ ಪಡೆದುಕೊಂಡು ಮಗನ ಮದುವೆಯನ್ನು ನಡೆಸಿಕೊಟ್ಟಿದ್ದರು.

ಸಂಸಾರದ ಗುಟ್ಟು ಟ್ವಿಟ್ಟರಲ್ಲಿ ರಟ್ಟಾಗಿತ್ತು
"ನಮ್ಮಿಬ್ಬರ ನಡುವೆ ಯಾವುದೇ ಹೊಂದಾಣಿಕೆಯಿಲ್ಲ. ಇಬ್ಬರೂ ಒಟ್ಟಾಗಿ ಬದುಕುವುದು ಸಾಧ್ಯವಿಲ್ಲದ ಮಾತು. ನಮ್ಮಿಬ್ಬರ ಕುಟುಂಬದವರು ತಮ್ಮ ರಾಜಕೀಯ ಉಪಯೋಗಕ್ಕಾಗಿ ನಮ್ಮಿಬ್ಬರ ಮದುವೆ ಮಾಡಿದರು" ಎಂದು ತೇಜ್ ಪ್ರತಾಪ್ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
"ಪ್ರೀತಿಯ ದಾರ ಎಂದಿಗೂ ಹರಿಯದಿರಲಿ, ಅದು ಹರಿದರೆ ಮತ್ತೆ ಸೇರಿಸುವುದಕ್ಕೆ ಸಾಧ್ಯವೇ ಇಲ್ಲ" ಎಂಬರ್ಥದ ದ್ವಿಪದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ತೇಜ್ ಪ್ರತಾಪ್ ಶೇರ್ ಮಾಡಿದ್ದಾರೆ. ಈ ಮೂಲಕ ತಾವು ಮತ್ತೆ ಐಶ್ವರ್ಯ ಜೊತೆ ಒಂದಾಗುವುದಿಲ್ಲ ಎಂಬ ಸುಳಿವು ನೀಡಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications