ಕ್ರೂರ ವಿಧಿ ಬರಹ ರೇಡಿಯೋ ಮಿರ್ಚಿ ಆರ್ಜೆಗೆ ಮೊದಲೇ ತಿಳಿದಿತ್ತೆ?
ನೋಯ್ಡಾ, ಮೇ 02: ರೇಡಿಯೋ ಮಿರ್ಚಿ ಸಂಸ್ಥೆ ಆರ್ ಜೆ ತನಿಯಾ ಖನ್ನ ಅವರು ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ನೋಯ್ಡಾ ಸೆಕ್ಟರ್ 94 ನಲ್ಲಿ ತನಿಯಾ ಅವರಿದ್ದ ಕಾರು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ.
ಅತ್ಯಂತ ವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತದ ತೀವ್ರತೆ ಹೆಚ್ಚಾಗಿತ್ತು. ತನಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 26 ವರ್ಷ ವಯಸ್ಸಿನ ತನಿಯಾ ಅವರಿದ್ದ ಕಾರು ರಸ್ತೆ ಬದಿಗೆ ಡಿಕ್ಕಿ ಹೊಡೆದು, ನಂತರ ನಾಲೆಗೆ ಬಿದ್ದಿದೆ.
ತನಿಯಾ ಖನ್ನ ಅವರು ಇತ್ತೀಚೆಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದು ಹೀಗೆ:
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಚೇರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಕ್ರೇನ್ ಸಹಾಯದಿಂದ ಕಾರನ್ನು ಹೊರಕ್ಕೆ ತೆಗೆಯಲಾಗಿದೆ.

ತನಿಯಾ ಅವರನ್ನು ಆಸ್ಪತ್ರೆಗೆ ಸಾಗಿಸಿ, ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ ಸಿಆರ್ ವಲಯದ ಪೊಲೀಸರು, ಅತಿವೇಗ ಹಾಗೂ ಅಜಾಗರೂಕತೆಯೆ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಕೆ ಮುಂದುವರೆದಿದೆ.












Click it and Unblock the Notifications