ಏರ್ ಸ್ಟ್ರೈಕ್ ನಲ್ಲಿ ನೀವು ಬೀಳಿಸಿದ್ದು ಮರವನ್ನೋ, ಉಗ್ರರನ್ನೋ? ಸಿಧು ಪ್ರಶ್ನೆ
ನವದೆಹಲಿ, ಮಾರ್ಚ್ 04: ಕಾಂಗ್ರೆಸ್ ಮುಖಂಡ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಗೂ ವಿವಾದಕ್ಕೂ ಅವಿನಾಭಾವ ನಂಟು.
ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು
ಪುಲ್ವಾಮಾದಲ್ಲಿ ನಲವತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎನ್ನುವ ಮೂಲಕ ತಮ್ಮ ಪಾಕ್ ಪರ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದ ಸಿಧು, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿ
"ಭಾರತೀಯ ವಾಯಯುಸೇನೆ ದಿ ನಡೆಸಿದ್ದು, ಮರಗಳನ್ನು ಉರುಳಿಸುವುದಕ್ಕಾ ಅಥವಾ ಉಗ್ರರನ್ನು ಉರುಳಿಸುವುದಕ್ಕಾ?" ಎಂದು ಸಿಧು ಪ್ರಶ್ನಿಸಿದ್ದಾರೆ. ಒಟ್ತು 300 ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎನ್ನುತ್ತೀರಿ. ಹೌದೇ? ಅಲ್ಲವೇ? ನೀವು ಹೇಳುತ್ತಿರುವುದು ಉಗ್ರರ ಬಗ್ಗೆಯೋ ಅಥವಾ ಮರಗಳ ಬಗ್ಗೆಯೋ? ಇವೆಲ್ಲ ಚುನಾವಣೆ ಗಿಮಿಕ್ ಅಲ್ಲವೇ? ಎಂದು ಸಿಧು ಪ್ರಶ್ನಿಸಿದ್ದಾರೆ.
'ಯುದ್ಧಗಳಲ್ಲಿ ಮೊದಲ ಸಾವಾಗುದು ಸತ್ಯದ್ದು' ಎಂಬ ಉಕ್ತಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸಿಧು,. ಕೇಂದ್ರ ಸರ್ಕಾರದ ಮೇಲೆ ಮತ್ತು ಪರೋಕ್ಷವಾಗಿ ವಾಯುಸೇನೆಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.