ಮೂರು ವರ್ಷಗಳ ನಂತರ ದೆಹಲಿಗೆ ದಲೈಲಾಮಾ ಆಗಮನ, ಯಾಕೆ?
ನವದೆಹಲಿ, ಆಗಸ್ಟ್ 26: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಮೂರು ವರ್ಷಗಳ ನಂತರ ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ. ಅವರು ಲಡಾಖ್ನಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯದ ನಂತರ ರಾಷ್ಟ್ರ ರಾಜಧಾನಿಗೆ ಬಂದಿಳಿದ್ದು, ರಾಜಕೀಯ ನಾಯಕರೊಂದಿಗೆ ಸಭೆ ನಡೆಸುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಇದಕ್ಕೂ ಮುನ್ನ ಮಂಗಳವಾರ ಟಿಬೆಟಿಯನ್ನರು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದಾರೆ. ಲಡಾಕಿಗಳು ಮತ್ತೆ ಲಾಸಾಗೆ ಭೇಟಿ ನೀಡಲು ಸಾಧ್ಯವಾಗುವ ಸಮಯ ಶೀಘ್ರದಲ್ಲೇ ಬರಲಿದೆ. ಇಲ್ಲಿ ಸಮಯಗಳು ಬದಲಾಗುತ್ತಿವೆ. ಲಡಾಕಿಗಳು ಮತ್ತೆ ಲಾಸಾಗೆ ಭೇಟಿ ನೀಡಲು ಸಾಧ್ಯವಾಗುವ ಸಮಯ ಬರಲಿದೆ ಎಂದು ಲೇಹ್ನಲ್ಲಿರುವ ಥುಪ್ಸ್ಟಾನ್ಲಿಂಗ್ ಗೊನ್ಪಾ, ಡಿಸ್ಕಿಟ್ ತ್ಸಾಲ್ನಲ್ಲಿ ಹೊಸ ಕಲಿಕೆಯ ಕೇಂದ್ರವನ್ನು ಉದ್ಘಾಟಿಸಿದಾಗ ಸಭಿಕರನ್ನು ಉದ್ದೇಶಿಸಿ ಹೇಳಿದ್ದರು.
ಲೇಹ್ನಲ್ಲಿ ಹೊಸ ಕಲಿಕೆಯ ಕೇಂದ್ರವು ಸ್ಥಳೀಯರಿಂದ ನಿರ್ಮಿಸಲಾಗಿದ್ದು, ಅಲ್ಲಿ ಬೌದ್ಧ ತತ್ವಶಾಸ್ತ್ರ, ಗ್ರಂಥಾಲಯ, ಪಾಳಿ ಭಾಷೆ ಮೇಲೆ ತರಗತಿಗಳನ್ನು ನಡೆಸಲು ಸೌಲಭ್ಯಗಳಿವೆ. ದಲೈಲಾಮ ಭೇಟಿ ವೇಳೆ ಸಭಾಂಗಣವು ಪೂರ್ಣ ತುಂಬಿತ್ತು. ಒಳಗೆ 1,500ಕ್ಕೂ ಹೆಚ್ಚು ಜನರು ಮತ್ತು ಹೊರಗೆ ಅಂಗಳದಲ್ಲಿ ಅಷ್ಟೇ ಸಂಖ್ಯೆಯಲ್ಲಿ ಸೇರಿದ್ದರು.
ಈ ಹಿಂದೆ ಲಡಾಖ್ನಲ್ಲಿ ಭಾರತೀಯ ಯೋಧರು, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಸಂದರ್ಭ ಚೀನಾದ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಚೀನಾ ಹಾಗೂ ತೈವಾನ್ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೌದ್ಧ ಧಾರ್ಮಿಕ ಗುರು ದಲೈ ಲಾಮಾ ಭಾರತದಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದರು.

ನಿಜವಾದ ಸ್ವಾಯತ್ತತೆ ಬಯಸುತ್ತಿದ್ದೇವೆ: ದಲೈಲಾಮಾ
ಸಭೆಯನ್ನುದ್ದೇಶಿಸಿ ಮಾತನಾಡಿದ ದಲೈಲಾಮಾ ಅವರು, ನಾನು ರಾಜಕೀಯ ಜವಾಬ್ದಾರಿಯಿಂದ ಹಿಂಜರಿಯುವ ಮೊದಲು ಟಿಬೆಟಿಯನ್ನರು ಟಿಬೆಟ್ ಸಮಸ್ಯೆಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕಾಗಿ ಯತ್ನಿಸಬೇಕು. ಇದರರ್ಥ ನಾವು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದೇವೆ. ಪ್ರಾಥಮಿಕವಾಗಿ ಎಲ್ಲಾ ಟಿಬೆಟಿಯನ್ ಮಾತನಾಡುವ ಪ್ರದೇಶಗಳಲ್ಲಿ ನಮ್ಮ ಗುರುತು, ಭಾಷೆ ಮತ್ತು ಶ್ರೀಮಂತ ಬೌದ್ಧ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕಾಳಜಿ ವಹಿಸುತ್ತೇವೆ ಎಂದು ಅವರು ಹೇಳಿದರು.

ದಲೈಲಾಮಾ ಭೇಟಿಗೆ ಚೀನಾ ಕಣ್ಣು
ಜಗತ್ತಿನಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ದಲೈಲಾಮಾ ಅವರು ತಮ್ಮ ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ನಾಯಕ ಆಗಿದ್ದಾರೆ. ದಲೈಲಾಮಾ ಅವರ ದೆಹಲಿಯ ಭೇಟಿಯ ನಡುವೆ ಚೀನಾ ಅವರ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿದೆ. ಏಕೆಂದರೆ ಚೀನಾ ಜಾಗತಿಕವಾಗಿ ಗೌರವಾನ್ವಿತ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸುತ್ತದೆ. ಅವರು ಟಿಬೆಟ್ ಅನ್ನು ವಿಭಜಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಚೀನಾ ಆರೋಪಿಸುತ್ತದೆ.

60 ವರ್ಷಗಳ ಕಾಲ ದೇಶದಿಂದ ಹೊರಗೆ
ದಲೈಲಾಮಾ ಅವರು 7 ದಶಲಕ್ಷಕ್ಕೂ ಹೆಚ್ಚು ಟಿಬೆಟಿಯನ್ ಬೌದ್ಧರ ಆಧ್ಯಾತ್ಮಿಕ ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಅಲ್ಲದೆ ಚೀನಾದ ಆಕ್ರಮಣದಿಂದಾಗಿ 60 ವರ್ಷಗಳ ಕಾಲ ಟಿಬೆಟ್ ದೇಶದ ಹೊರಗೆ ಇದ್ದರು. ಶ್ರೀಲಂಕಾದ ಬೌದ್ಧ ಮತ್ತು ಪಾಲಿ ವಿಶ್ವವಿದ್ಯಾನಿಲಯದ ವೆನ್ ಪ್ರೊ.ಲೆನಾಗಲಾ ಸಿರಿನಿವಾಸ ಅವರು ದಲೈಲಾಮಾ ಅವರ 87ನೇ ಜನ್ಮದಿನದಂದು ಮಾತನಾಡುತ್ತಾ, ದಲೈಲಾಮಾ ಅವರು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲು ಬಯಸುವ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದರು.

ಪಟ್ಟುಬಿಡದ ಕಠಿಣ ಪರಿಶ್ರಮ
ದಲೈಲಾಮಾ ಅವರು ಶಾಂತತೆಯನ್ನು ಕಳೆದುಕೊಳ್ಳದಿರುವ, ಹಾಸ್ಯಪ್ರಜ್ಞೆ, ಪರಹಿತಚಿಂತನೆಯ ಪ್ರವೃತ್ತಿಗಳು, ಸರಳವಾದ ಮಗುವಿನ ಸ್ವಭಾವ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಬದ್ಧತೆಗಳನ್ನು ಹೊಂದಿದ್ದಾರೆ. ಅವರ ಪಟ್ಟುಬಿಡದ ಕಠಿಣ ಪರಿಶ್ರಮವು ಬೌದ್ಧರಿಗೆ ನೆಲೆಯನ್ನು ರೂಪಿಸಲಿದೆ ಎಂದು ಸಿರಿನಿವಾಸ ಹೇಳಿರುವುದಾಗಿ ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿತ್ತು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications